ಒಲಂಪಿಕ್ಸ್ ಪದಕ ವಿಜೇತೆ ಮೀರಾಬಾಯ್ ಚಾನು ಅವರಿಗೆ ಎರಡು ಕೋಟಿ ರೂ. ನಗದು ಉಡುಗೊರೆ ಮತ್ತು ರೈಲ್ವೇಯಲ್ಲಿ ಕೆಲಸ

ಹೊಸದಿಲ್ಲಿ: ಒಲಿಂಪಿಕ್‌ನಲ್ಲಿ ಬೆಳ್ಳಿ ಪದಕ ಪಡೆದ ಮೀರಾಬಾಯ್‌ ಚಾನುರನ್ನು ಅಭಿನಂದಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಅವರು ಆಕೆಗೆ ಎರಡು ಕೋಟಿ ರೂ. ನಗದು ಉಡುಗೊರೆ ಮತ್ತು ರೈಲ್ವೇಯಲ್ಲಿ ಕೆಲಸದಲ್ಲಿರುವ ಆಕೆಗೆ ಬಡ್ತಿ ನೀಡುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾದಿರುವ ಸಚಿವರು, “ದೇಶಕ್ಕೆ ಕೀರ್ತಿ ತಂದಿರುವ ಮೀರಾಬಾಯ್‌ ಚಾನುರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲು ಭಾರತೀಯ ರೈಲ್ವೇಗೆ ಸಂತಸವಾಗುತ್ತದೆ. ತಮ್ಮ ಪ್ರತಿಭೆ ಹಾಗೂ ಪರಿಶ್ರಮದಿಂದ ಕೋಟ್ಯಂತರ ಮಂದಿಗೆ ಸ್ಪೂರ್ತಿಯಾಗಿರುವ ಮೀರಾಬಾಯಿಗೆ ಎರಡು ಕೋಟಿ ರೂ.ಗಳ ಇನಾಮು ಹಾಗೂ ಬಡ್ತಿಯನ್ನು ಘೋಷಿಸಲು ಹರ್ಷಿಸುತ್ತೇನೆ. ದೇಶಕ್ಕಾಗಿ ಗೆಲ್ಲುತ್ತಿರಿ” ಎಂದು ಹೇಳಿದ್ದಾರೆ.

ಇನ್ನು ಇದಕ್ಕೂ ಮುನ್ನ ಯುವಜನ ವ್ಯವಹಾರಗಳ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್‌, ಮೀರಾಬಾಯ್ ಚಾನುರನ್ನು ಸನ್ಮಾನಿಸಿದ್ದಾರೆ.

Exit mobile version