ಈರುಳ್ಳಿ ಕ್ರೇಟ್ ಒಳಗಿತ್ತು ಬುಸ್ ಬುಸ್ ನಾಗಪ್ಪ: ಹಾವು ಕಂಡು ವ್ಯಾಪಾರಿಗೆ ಫುಲ್ ಶಾಕ್

ಮೈಸೂರು, ಮಾ. 04: ಇನ್ಮುಂದೆ ತರಕಾರಿ ಖರೀದಿಸೋ ಮುನ್ನ ಸ್ವಲ್ಪ ಯೋಚ್ನೆ ಮಾಡಿ, ಯಾಕಂದ್ರೆ ತರಕಾರಿ ಜೊತೆಗೆ ಅಪ್ಪಿತಪ್ಪಿ ವಿಶೇಷ ಅತಿಥಿ ಸಹ ಮನೆಗೆ ಬಂದ್ರೆ ಕಷ್ಟ. ಯಾಕೆ ಅಂತೀರಾ?, ಮಾರುಕಟ್ಟೆಯಿಂದ ಮಾರಾಟಕ್ಕೆ ತಂದಿದ್ದ ಈರುಳ್ಳಿ ಕ್ರೇಟ್​ನಲ್ಲಿ ಬುಸ್​ ಬುಸ್ ನಾಗಪ್ಪ ಸಹ ಮನೆಗೆ ಬಂದ್ರೆ ಕಷ್ಟ.

ಹೌದು, ಮಾರುಕಟ್ಟೆಯಿಂದ ತಂದಿದ್ದ ತರಕಾರಿ ಬುಟ್ಟಿಯಲ್ಲಿ ಹಾವೊಂದು ಸೇರಿಕೊಂಡು ಸಾರ್ವಜನಿಕರಲ್ಲಿ ಅಚ್ಚರಿಯ ಜೊತೆಗೆ ಆತಂಕವನ್ನೂ ಸೃಷ್ಟಿಸಿತ್ತು. ಕೂಡಲೇ ಸ್ಥಳಕ್ಕೆ ನಂದ ಸ್ನೇಕ್ ಶ್ಯಾಮ್ ಈರುಳ್ಳಿ ಕ್ರೇಟ್​ನಲ್ಲಿ ಬೆಚ್ಚಗೆ ಅಡಗಿ ಕುಳಿತಿದ್ದ, ನಾಗರಹಾವನ್ನು ಸೆರೆಹಿಡಿದಿದ್ದಾರೆ.

ಮೈಸೂರಿನ ಲಕ್ಷ್ಮಿಕಾಂತನಗರ ತರಕಾರಿ ವ್ಯಾಪಾರಿ ರಮೇಶ್ ಅವರು ತರಕಾರಿಗಳನ್ನು ಜೋಡಿಸುವಾಗ ಟೊಮೆಟೋ, ಈರುಳ್ಳಿ ಸೇರಿದಂತೆ ಹಲವು ಬುಟ್ಟಿಗಳನ್ನು ಆಟೋದಿಂದ ಇಳಿಸುವ ವೇಳೆ ಹಾವು ಕಾಣಿಸಿಕೊಂಡಿದೆ. ಇದನ್ನು ಕಂಡು ಗಾಬರಿಗೊಂಡ ಅವರು ತರಕಾರಿ ಕ್ರೇಟ್ ಬಿಟ್ಟು ದೂರ ಓಡಿ ಹೋಗಿದ್ದಾರೆ. ಅಲ್ಲಿಯೇ ತರಕಾರಿ ಕೊಳ್ಳಲು ಆಗಮಿಸಿದ್ದ ಗ್ರಾಹಕರು ಕೂಡ ಹಾವು ಕಂಡು ಬೆಚ್ಚಿಬಿದ್ದಿದ್ದಾರೆ.

ತಕ್ಷಣವೇ ಸ್ನೇಕ್ ಶ್ಯಾಂಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ನೇಕ್ ಶ್ಯಾಂ ಹಾವನ್ನ ರಕ್ಷಿಸಿದ್ದಾರೆ . ಬಳಿಕ ಹಾವನ್ನು ಕೇರ್ಗಳ್ಳಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಸದ್ಯ ಈ ವೀಡಿಯೋ ಎಲ್ಲಡೆ ವೈರಲ್ ಆಗಿದೆ.

Exit mobile version