ಹಾಸನ: ಊಟಕ್ಕೆ ವಿಷ (Poison) ಹಾಕಿ ತಂದೆ ಹಾಗೂ ತಾಯಿಯನ್ನು ಮಗನೇ ಹತ್ಯೆಗೈದ ಘಟನೆ ಹಾಸನ(Hassan) ಜಿಲ್ಲೆಯ ಅರಕಲಗೋಡಿನ ಬಿಸಿಲಹಳ್ಳಿಯಲ್ಲಿ ನಡೆದಿದೆ. ತನ್ನ ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಪಾಪಿ ಪುತ್ರ ಈ ಕೃತ್ಯವನ್ನು ಎಸಗಿದ್ದಾನೆ ಎಂಬ ಅಂಶ ತನಿಖೆ ವೇಳೆ ಬಯಲಾಗಿದೆ. ವಿಷ ಬೆರಸಿ ತಂದೆ ತಾಯಿಯನ್ನು ಕೊಲೆ ಮಾಡಿದ ಆರೋಪಿಯನ್ನು ಮಂಜುನಾಥ್(Manjunath) (27) ಎಂದು ಗುರುತಿಸಲಾಗಿದೆ. ಈ ಆರೋಪಿ ವಿಧವೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಕಾರಣಕ್ಕೆ ತಂದೆ ತಾಯಿ ಬುದ್ಧಿವಾದ ಹೇಳಿದ್ದರು.
ಅಲ್ಲದೇ ಆತನ ತಾಯಿ ಉಮಾ (48) ಸಹಕಾರ ಸಂಘಗಳಲ್ಲಿ ಯಾವುದೋ ಕಷ್ಟಕ್ಕೆ ಮಾಡಿರುವ ಸಾಲದ(Loan) ಹಣವನ್ನು (Money) ಆರೋಪಿ ದುರುಪಯೋಗ ಪಡಿಸಿಕೊಂಡಿದ್ದ. ಅಷ್ಟೇ ಅಲ್ಲದೆ ಹಣ ವಾಪಾಸ್ ಕೇಳಿದ್ದಕ್ಕೆ ಆರೋಪಿ ಪೋಷಕರ ಮೇಲೆ ಸಿಟ್ಟಾಗಿದ್ದ. ಇದರಿಂದ ಕೊಲೆಗೆ ಸ್ಕೆಚ್ ಹಾಕಿದ್ದ. ಈ ಎಲ್ಲಾ ಕಾರಣಗಳಿಗಾಗಗಿ ಆರೋಪಿ ತಂದೆ ಹಾಗೂ ತಾಯಿಯನ್ನು ಪಲಾವ್ನಲ್ಲಿ(Palav) ವಿಷ ಬೆರೆಸಿ ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ತಮಿಳುನಾಡಿಗೆ ಹರಿದ ಕಾವೇರಿ: ಸರ್ಕಾರದ ಈ ನಡೆಗೆ ರಾಜ್ಯದ ರೈತರ ತೀವ್ರ ಆಕ್ರೋಶ
ಆರೋಪಿ ಮಂಜುನಾಥ್ ತಂದೆ ತಾಯಿಗಿಂತ ಮೊದಲೇ ಪಲಾವ್ ತಿಂದು ನಂತರ ಕಳೆನಾಶಕವನ್ನು(herbicide) ಪಲಾವ್ಗೆ ಬೆರೆಸಿದ್ದ. ನಂತರ ಆರೋಪಿ ಔಷಧಿ ವಾಸನೆ ಬರುತ್ತಿದೆ ಎಂದು ತಂದೆ ತಾಯಿ ಪಲಾವ್ ತಿಂದ ಬಳಿಕ ವಾಂತಿ ಮಾಡಿದ ನಾಟಕವಾಡಿದ್ದ. ಬಳಿಕ ಆಸ್ಪತ್ರೆಗೆ(Hospital) ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ನೆಪದಲ್ಲಿ ವಾಪಸ್ ಕರೆತಂದಿದ್ದ. ಬಳಿಕ ಹಠಾತ್ ಆಗಿ ತಾಯಿ ಉಮಾ(Uma) ಹಾಗೂ ತಂದೆ ನಂಜುಂಡಪ್ಪ(Nanjundappa) (55) ಸಾವಿಗೀಡಾಗಿದ್ದರು.
ಈ ಬಗ್ಗೆ ದಂಪತಿಯ ಕಿರಿಯ ಪುತ್ರ ಅನುಮಾನ ವ್ಯಕ್ತಪಡಿಸಿ ನಂತರ ಕೊಣನೂರು ಪೊಲೀಸರಿಗೆ (Police) ಮಾಹಿತಿ ನೀಡಿದ್ದ. ಬಳಿಕ ಅಂತ್ಯಕ್ರಿಯೆ ತಡೆದು ಮರಣೋತ್ತರ ಪರೀಕ್ಷೆಗೆ ಶವಗಳನ್ನು ಪೊಲೀಸರು ಸಾಗಿಸಿದ್ದರು. ಬಳಿಕ ಮಂಜುನಾಥ್ನನ್ನು ತನಿಖೆಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಒಳಪಡಿಸಿದ್ದರು. ಈ ವೇಳೆ ವಿಷ ಬೆರೆಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ರಶ್ಮಿತಾ ಅನೀಶ್