ಕೋಲಾರ ನ 18 : ನವೆಂಬರ್ 13 ರ ಶನಿವಾರ ರಾತ್ರಿ 11 ಗಂಟೆ ವೇಳೆಗೆ ನಗರದ ವಿಶಾಲ್ ಮಾರ್ಟ್ ಬಳಿ ದತ್ತಮಾಲಾಧಾರಿಗಳಿದ್ದ ಬಸ್ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆ ಖಂಡಿಸಿ ಹಿಂದೂಪರ ಸಂಘಟನೆಗಳು ಕೋಲಾರ ನಗರ ಬಂದ್ ನಡೆಸುತ್ತಿವೆ. ಬೆಳ್ಳಂಬೆಳಗ್ಗೆಯೇ ಬೈಕ್ ರ್ಯಾಲಿ ಆರಂಭಿಸಿದ ಕಾರ್ಯಕರ್ತರು ಕಲ್ಲು ತೂರಿದ ಕಿಡಿಗೇಡಿಗಳನ್ನು ಬಂಧಿಸುವಂತೆ ತ ಆಗ್ರಹಿಸಿದ್ದಾರೆ.
ಬಂದ್ ನಲ್ಲಿ ಪ್ರಮೋದ್ ಮುತಾಲಿಕ್ ಭಾಗವಿಸುವ ಸಾಧ್ಯತೆಗಳಿದ್ದು, ಪ್ರಮೋದ್ ಮುತಾಲಿಕ್ ಅವರಿಗೆ ಜಿಲ್ಲಾ ಪ್ರವೇಶಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಕೋಮು ಪ್ರಚೋದನಾ ಭಾಷಣ ಮಾಡಿರುವ ಉದಾಹರಣೆಗಳಿದ್ದು, ಈ ಕಾರಣದಿಂದಾಗಿ ಪ್ರಮೋದ್ ಮುತಾಲಿಕ್ ಗೆ ನವೆಂಬರ್ 18 ರಂದು ಅಂದರೆ ಇಂದು ಕೋಲಾರ ಜಿಲ್ಲೆಯ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಜೊತೆಗೆ ಆಡಿಯೋ ವಿಡಿಯೋ ಭಾಷಣ ಮಾಡದಂತೆಯೂ ನಿರ್ಬಂಧ ಹಾಕಲಾಗಿದೆ.