ಕೋಲಾರ್ ಬಂದ್‌ನಲ್ಲಿ ಭಾಗವಹಿಸಲು ಪ್ರಮೋದ್ ಮುತಾಲಿಕ್‌ಗೆ ನಿಷೇಧ

ಕೋಲಾರ ನ 18 : ನವೆಂಬರ್​ 13 ರ ಶನಿವಾರ ರಾತ್ರಿ 11 ಗಂಟೆ ವೇಳೆಗೆ ನಗರದ ವಿಶಾಲ್ ಮಾರ್ಟ್ ಬಳಿ ದತ್ತಮಾಲಾಧಾರಿಗಳಿದ್ದ ಬಸ್ ಮೇಲೆ‌ ಕಿಡಿಗೇಡಿಗಳಿಂದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆ ಖಂಡಿಸಿ  ಹಿಂದೂಪರ ಸಂಘಟನೆಗಳು ಕೋಲಾರ ನಗರ ಬಂದ್​​​ ನಡೆಸುತ್ತಿವೆ. ಬೆಳ್ಳಂಬೆಳಗ್ಗೆಯೇ ಬೈಕ್​​​ ರ್ಯಾಲಿ ಆರಂಭಿಸಿದ ಕಾರ್ಯಕರ್ತರು ಕಲ್ಲು ತೂರಿದ ಕಿಡಿಗೇಡಿಗಳನ್ನು ಬಂಧಿಸುವಂತೆ ತ ಆಗ್ರಹಿಸಿದ್ದಾರೆ.

ಬಂದ್ ನಲ್ಲಿ ಪ್ರಮೋದ್ ಮುತಾಲಿಕ್ ಭಾಗವಿಸುವ ಸಾಧ್ಯತೆಗಳಿದ್ದು, ಪ್ರಮೋದ್ ಮುತಾಲಿಕ್ ಅವರಿಗೆ ಜಿಲ್ಲಾ ಪ್ರವೇಶಕ್ಕೆ ನಿಷೇಧ ಹೇರಿ‌ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಕೋಮು ಪ್ರಚೋದನಾ ಭಾಷಣ ಮಾಡಿರುವ ಉದಾಹರಣೆಗಳಿದ್ದು, ಈ ಕಾರಣದಿಂದಾಗಿ ಪ್ರಮೋದ್ ಮುತಾಲಿಕ್ ಗೆ ನವೆಂಬರ್ 18 ರಂದು ಅಂದರೆ ಇಂದು ಕೋಲಾರ ಜಿಲ್ಲೆಯ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಜೊತೆಗೆ ಆಡಿಯೋ ವಿಡಿಯೋ ಭಾಷಣ ಮಾಡದಂತೆಯೂ ನಿರ್ಬಂಧ ಹಾಕಲಾಗಿದೆ.

Exit mobile version