ಕೆನ್ನೆಗೆ ಬಾರಿಸಿದ್ದಕ್ಕೆ‌ ಮದುವೆಯನ್ನೇ ಮುರಿದುಕೊಂಡ್ರಿ?: ನಟಿ ತಾಪ್ಸೀ ಪನ್ನುಗೆ ಪ್ರತಾಪ್ ಸಿಂಹ ತಿರುಗೇಟು

ಬೆಂಗಳೂರು, ಫೆ. 06: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ ರೈತರು ದೇಶವ್ಯಾಪಿ ಹೋರಾಟ ನಡೆಸುತ್ತಿದ್ದು, ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಅಮೆರಿಕಾದ ಪಾಪ್ ಗಾಯಕಿ ರಿಹಾನಾ ಮಾಡಿದ ಟ್ವೀಟ್ ಇದೀಗ ಸಂಚಲನ ಸೃಷ್ಟಿಸಲು ಪ್ರಾರಂಭಿಸಿದೆ.

ಈ ಟ್ವೀಟ್’ಗೆ ದೇಶದ ಹಲವು ಬಾಲಿವುಡ್ ನಟ, ನಟಿಯರು, ಕ್ರೀಡಾಪಟುಗಳು ತಿರುಗೇಟು ನೀಡಿದ್ದಾರೆ. ಆದರೆ, ಬಾಲಿವುಡ್ ನಟಿ ತಾಪ್ಸೀ ಪನ್ನು ರಿಹಾನಾ ಟ್ವೀಟ್ ಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್’ಗೆ ಪ್ರತಾಪ್ ಸಿಂಹ ರೀ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಅಲ್ಲಾಡಿಸುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಒಂದು ಕಾರ್ಯಕ್ರಮ ನಿಮ್ಮ ಧಾರ್ಮಿಕ ನಂಬಿಕೆಯನ್ನು ಅಲ್ಲಾಡಿಸುವುದಾದರೆ. ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿ. ಬದಲಿಗೆ ಉಳಿದವರಿಗೆ ಪ್ರಾಪಗಾಂಡಾ ಪಾಠ ಮಾಡಲು ಬರಬೇಡಿ’ ಎಂದು ನಟಿ ತಾಪ್ಸಿ ಟ್ವೀಟ್ ಮಾಡಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಪ್ರತಾಪ್ ಸಿಂಹ, ‘ಓ ತಾಪ್ಸೀ, ಒಬ್ಬ ರಶ್ದಿಯಿಂದ ಭಾರತದ ಮುಸ್ಲೀಮರು ಅಲ್ಲಾಡಿದರು, ಒಂದು ಕಾರ್ಟೂನ್‌ ವಿಶ್ವದೆಲ್ಲೆಡೆಯ ಮುಸ್ಲಿಮರನ್ನು ಅಲ್ಲಾಡಿಸಿತು, ಒಂದು ಪುಸ್ತಕ (The da Vinci Code) ವಿಶ್ವದೆಲ್ಲೆಡೆಯ ಕ್ರಿಶ್ಚಿಯನ್ನರನ್ನು ಅಲ್ಲಾಡಿಸಿತು. ಒಮ್ಮೆ ಕೆನ್ನೆಗೆ ಬಾರಿಸಿದ್ದಕ್ಕೆ ನೀವು ಮದುವೆ ಮುರಿದುಕೊಂಡ್ರಿ. ಸ್ಕ್ರಿಪ್ಟೆಡ್‌ ಸಿನಿಮಾ ಡೈಲಾಗ್‌ಗಳಿಗೆ ನಿಮ್ಮನ್ನು ನೀವು ಸೀಮಿತಗೊಳಿಸಿಕೊಳ್ಳಿ. ಬಾಕಿ ಎಲ್ಲವೂ ನಿಮ್ಮ ಜ್ಞಾನದ ಹೊರಗಿದೆ’ ತಿರುಗೇಟು ನೀಡಿದ್ದಾರೆ.

Exit mobile version