Mysore: ಸಂಸದ ಪ್ರತಾಪ್ ಸಿಂಹ (Pratap Simha) ಅವರು ಸಂಘರ್ಷ ಆದರೂ ತೊಂದರೆಯಿಲ್ಲ ಮಹಿಷಾ ದಸರಾ (Pratapsimha against on Mahisha Dasara) ವಿರೋಧಿಸಿ ಅಕ್ಟೋಬರ್
13 ರಂದು ಚಲೋ ಚಾಮುಂಡಿ ಬೆಟ್ಟ ರಾಲಿ ಹಮ್ಮಿಕೊಳ್ಳುತ್ತೇವೆ ಮತ್ತು ಮೈಸೂರಿಗರು ಎಲ್ಲರೂ ಪಕ್ಷ ಬೇಧ ಮರೆತು ಸಾಥ್ ನೀಡಬೇಕು ಎಂದು ಇದನ್ನು ನಡೆಯಲು ಬಿಡುವುದಿಲ್ಲಎಂದಿದ್ದಾರೆ.
ಮತ್ತು ಮೈಸೂರು ದಸರಾ (Dasara) 414 ವರ್ಷಗಳಿಂದಲೂ ನಡೆಯುತ್ತಾ ಬಂದಿದೆ. ಆದರೆ ಮಹಿಷಾ ದಸರಾ ಎಂಬ ಅಪದ್ಧ ಯಾವಾಗ ಶುರುವಾಯ್ತು ಗೊತ್ತಿಲ್ಲಎಂದಿದ್ದಾರೆ.
ಮೈಸೂರು ಬಿಜೆಪಿ (BJP) ಕಚೇರಿಯಲ್ಲಿ ಪ್ರತಾಪ್ ಸಿಂಹ ಸುದ್ದಿಗೋಷ್ಠಿ ನಡೆಸಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ನಾಲ್ಕು ಶತಮಾನಗಳಿಗೂ ಹೆಚ್ಚಿನ ಇತಿಹಾಸವಿದೆ.
ಹೈದರಾಲಿ ಟಿಪ್ಪು (Hyderali Tippu) ಆಳ್ವಿಕೆ ಹೊರತುಪಡಿಸಿ ಉಳಿದ ಕಾಲದಲ್ಲಿ ಚಾಚೂ ತಪ್ಪದೇ ದಸರಾ ನಡೆದುಕೊಂಡು ಬಂದಿದೆ ಎಂದು ಮಾತನಾಡಿದರು.
ಸಿದ್ದರಾಮಯ್ಯ (Siddaramaiah) ಸರ್ಕಾರ ಬಂದ ನಂತರ ಕೆಲವರು ಮಹಿಷ ದಸರಾ ಆಚರಣೆಗೆ ಮುಂದಾಗಿರೋದು ಸರಿಯಲ್ಲ 2016 ರಿಂದ ಕೆಲವರು ಮಹಿಷ ದಸರಾ ಆಚರಣೆಗೆ ಮುಂದಾಗಿ
ಅಪದ್ದ ಹುಟ್ಟುಹಾಕಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಿಷ ದಸರಾ (Pratapsimha against on Mahisha Dasara) ಆಚರಣೆಗೆ ಅನುಮತಿ ನೀಡಲಿಲ್ಲ.
ಮೈಸೂರು ಜಿಲ್ಲೆಯ 11 ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಮತ್ತು ನಾವೆಲ್ಲ ಮೆಟ್ಟಿಲು ಮೂಲಕ ಬೆಟ್ಟಕ್ಕೆ ಹತ್ತುತ್ತೇವೆ ಹಾಗೂ ಬೆಟ್ಟ ಹತ್ತಲು ಸಾಧ್ಯವಾಗದವರು
ಮುಖ್ಯದ್ವಾರದಿಂದ ವಾಹನಗಳಲ್ಲಿ ಬರಬಹುದು. ಬೈಕ್, ಕಾರು ಮುಂತಾದ ವಾಹನದಲ್ಲಿ ರಾಲಿಯಲ್ಲಿ ಪಾಲ್ಗೊಳ್ಳಬಹುದು,ಇದು ಚಾಮುಂಡಿ ತಾಯಿಯ ಭಕ್ತರ ಚಳವಳಿ.
ಅಂದಾಜಿನ ಪ್ರಕಾರ 5000 ಜನರು ಭಾಗವಹಿಸುತ್ತಾರೆ. ಇದು ಬಿಜೆಪಿ ಕಾರ್ಯಕ್ರಮವಲ್ಲ. ಮುಂದಾಳತ್ವ ಮಾತ್ರ ತೆಗೆದುಕೊಂಡಿದ್ದೇವೆ ಎಂದರು. ಮಹಿಷಾ ದಸರಾವನ್ನು ತಡೆಯುವುದಷ್ಟೇ ನಮ್ಮ ಉದ್ದೇಶ.
ಈ ವಿಚಾರದಲ್ಲಿ ಸಂಘರ್ಷಕ್ಕೂ ನಾವು ಸಿದ್ದರಿದ್ದೇವೆ.
ಜನ ಕಷ್ಟ-ಸುಖ ಎಲ್ಲದಕ್ಕೂ ಚಾಮುಂಡಿ ಬೆಟ್ಟಕ್ಕೆ ಓಡಿ ಹೋಗ್ತೀರಿ.ಮೈಸೂರಿಗರೇ ಪಕ್ಷ, ಸಿದ್ಧಾಂತ ಭೇದವಿಲ್ಲದೇ ನಮ್ಮ ಚಳವಳಿಗೆ ಬೆಂಬಲ ನೀಡಿ ಮೈಸೂರಿನ (Mysore) ಯಾರೋ ನಾಲ್ಕು ಜನ
ಮಹಿಷ ದಸರಾ ಮಾಡ್ತಾರೆ.ಚಾಮುಂಡಿ ನಿಮ್ಮ ತಾಯಿ ಅಲ್ವಾ ? ಆಕೆಗೆ ಅಪಮಾನ ಆಗುವಾಗ ನಿಮಗೆ ಸಿಟ್ಟು ಬರಲ್ವಾ ?ಎಂದು ಸಂಸದ ಪ್ರತಾಪ್ ಸಿಂಹ ಕರೆನೀಡಿದರು.
ದಸರಾ ಆಚರಣೆಗೆ ಮೈಸೂರು ಸಿಎಂ ಸಿದ್ದರಾಮಯ್ಯ, ಸಚಿವ ಡಾ ಮಹದೇವಪ್ಪ (Dr.Mahadevappa) ನೇತೃತ್ವದಲ್ಲಿ ಸಜ್ಜಾಗುತ್ತಿದೆ. ಟಿಪ್ಪು, ಹೈದರಾಲಿ ಕಾಲ ಬಿಟ್ಟು . ನವರಾತ್ರಿ ದಸರಾ,ವರ್ಧಂತಿ,
ಚಾಮುಂಡಿ ಮಹಿಮೆ, ಆಷಾಢ, ತೆಪ್ಪೋತ್ಸವ ಎಲ್ಲವೂ ಮೈಸೂರಿಗರು, ಹೊರಗಿನವರಿಗೆ ಗೊತ್ತು. ಆದ್ರೆ 2015-16ರಲ್ಲಿ ಮಹಿಷ ದಸರಾ ಎನ್ನುವ ಅಸಹ್ಯ, ಅಪಸವ್ಯ ಶುರುವಾಯ್ತು. ಮಹಿಷಾಸುರ ಯಾವಾಗ
ಮೂಲನಿವಾಸಿಗಳ ದೇವರಾಗಿದ್ದ ಗೊತ್ತಿಲ್ಲ ಎಂದಿದ್ದಾರೆ ಸಂಸದರು.
ಮಹಿಷಾ ದಸರಾ ಭಾಗವಾಗಿ ಪುರಭವನದಿಂದ ಚಾಮುಂಡಿ ಬೆಟ್ಟದವರೆಗೆ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಯಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ 2018 ರಲ್ಲೂ ಮುಂದುವರಿದಿತ್ತು.
2019 ರಲ್ಲಿ ಬಿಜೆಪಿ ಸರ್ಕಾರ ಬಂತು. ಸೋಮಣ್ಣ ಸಚಿವರಾದ ಮೇಲೆ ಮಹಿಷ ದಸರಾ ನಿಲ್ಲಿಸಿದ್ದೆವು ಎಂದರು.
ಪ್ರಗತಿಪರರ ತಂಡ ಆದಿದೊರೆ ಮಹಿಷಾಸುರ ಕುರಿತ ವಿಚಾರಸಂಕಿರಣಗಳು, ಪ್ರತಿಮೆಗೆ ಪುಷ್ಪಾರ್ಚನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅಕ್ಟೋಬರ್ 13 ರಂದು ಮಹಿಷ ದಸರಾ ನಡೆಸಲು
ಸಿದ್ಧತೆ ನಡೆದಿದೆ.ಮಹಿಷ ದಸರಾ ಆಚರಣೆ ಸಮಿತಿ, ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘದಿಂದ ಮಹಿಷಾ ದಸರಾ ಆಚರಣೆ ಮಾಡಲಾಗುತ್ತದೆ.
ಇದನ್ನು ಓದಿ: ಬೆಂಗಳೂರಿನ ಮೊದಲ ಶತ್ರು ಬಿಬಿಎಂಪಿ ಎಂದು ಪಾಲಿಕೆ ವಿರುದ್ಧ ತೀವ್ರ ಅಸಮಾಧಾನ: ಕರ್ನಾಟಕ ಹೈಕೋರ್ಟ್
- ಮೇಘಾ ಮನೋಹರ ಕಂಪು