Bengaluru: ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ (Narayana Gowda)ಮತ್ತು ಅವರ ಕಾರ್ಯಕರ್ತರು (Protest Against English Boards) ಕನ್ನಡ ನಾಮ ಫಲಕವಿಲ್ಲದ
ಬೋರ್ಡ್ ತೆರವು ಮಾಡುವಂತೆ ಆಗ್ರಹಿಸಿ ಮೆಜೆಸ್ಟಿಕ್ನ ಸಂಗೊಳ್ಳಿ ರಾಯಣ್ಣ ರಸ್ತೆ (Sangolli Rayanna Road) ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕರವೇ ಅಧ್ಯಕ್ಷ ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕರ್ತರು ನಾಮ ಫಲಕಗಳನ್ನು ಕನ್ನಡದಲ್ಲಿ (Kannada) ಅಳವಡಿಸಬೇಕು ಎಂದು ಬೃಹತ್ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ
ನಗರದ ಪೊಲೀಸ್ ಕಮಿಷನರ್ ಬಿ ದಯಾನಂದ್ (B Dayanand) ಸ್ಥಳಕ್ಕಾಗಮಿಸಿ ಕರವೇ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು
ಪೊಲೀಸರಿಗೆ (Protest Against English Boards) ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಕರವೇ ಕಿಚ್ಚು ಹೆಚ್ಚಾಗ್ತಿದ್ದು ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇಂಗ್ಲೀಷ್ ನಾಮಫಲಕಗಳನ್ನ (English Name Plate) ಹರಿದು ಹಾಕುತ್ತಿದ್ದಾರೆ.
ಮತ್ತೊಂದೆಡೆ ನೂರಾರು ಕಾರ್ಯಕರ್ತರು ನೃತ್ಯ ಮಾಡುತ್ತಾ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜಾಜಿನಗರದ (Rajajinagar) 6ನೇ ಹಂತದಲ್ಲಿ ಕನ್ನಡ ಜಾಗೃತಿ ಅಭಿಯಾನ ನಡೆಸುತ್ತಿರುವ ಕಾರ್ಯಕರ್ತರು ಇಂಗ್ಲೀಷ್ ನಾಮಫಲಕಗಳನ್ನ ಕಿತ್ತು ಹಾಕಿದ್ದಾರೆ.
ಕೆಆರ್ ಪುರಂ, ಹೆಬ್ಬಾಳ, ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ (KR Puram, Hebbal, MG Road, Brigade Road, Church Street) ಸೇರಿದಂತೆ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ
ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರ್ಯಕರ್ತರು ಕನ್ನಡ ಉಳಿಸಿ ಅಂತ ಕೂಗುತ್ತಿದ್ದು ಕನ್ನಡವಿಲ್ಲದ ನಾಮಫಲಕಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಪೊಲೀಸರು ಮತ್ತು ಕರವೇ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು ಆಗ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಪೊಲೀಸರು ಕಾರ್ಯಕರ್ತರನ್ನು ನಿಯಂತ್ರಣ ಮಾಡಲು
ಹರಸಾಹಸ ಪಡುತ್ತಿದ್ದಾರೆ. ಅಧ್ಯಕ್ಷ ನಾರಾಯಣಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಿಎಂಟಿಸಿ ಬಸ್ ಅಲ್ಲಿ ಕರೆದುಕೊಂಡು ಹೋಗಿದ್ದಾರೆ.
ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ನೂಕುನುಗ್ಗಲು ಉಂಟಾಗಿ ಘರ್ಷಣೆ ಕೂಡ ಉಂಟಾಯಿತು. ಇದೆಲ್ಲದಕ್ಕೂ ಜಗ್ಗದ ಪೊಲೀಸರು ನಾರಾಯಣ ಗೌಡರನ್ನ ಬಸ್ನಲ್ಲಿ ಕರೆದಕೊಂಡು ಬಂದು ಕೂರಿಸಿದರು.
ಈ ಎಲ್ಲ ನಡೆಯುತ್ತಿರುವ ವೇಳೆ ಕಾರ್ಯಕರ್ತರು ಬಸ್ಸಿನ ಟೈರ್ ಪಂಚರ್ ಮಾಡಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.
ಈ ವೇಳೆ ಮಾತನಾಡಿದ ಟಿ.ಎ.ನಾರಾಯಣ ಗೌಡ ಅವರು.. ಸರ್ಕಾರ ಮಾಡಿರುವ ಆದೇಶವನ್ನು ಪಾಲಿಸಿದರೆ ಸುಮ್ಮನೆ ಬಿಡುತ್ತೇವೆ. ಕನ್ನಡದ ನಾಮಫಲಕ ಹಾಕದಿದ್ದರೆ ವ್ಯಾಪಾರ ಮಾಡಲು ಬಿಡಲ್ಲ.
ಸಿಟಿಯಿಂದ ಹೊರಗಡೆ ಪ್ರತಿಭಟನೆ (Protest) ಮಾಡಲು ಕಮಿಷನರ್ ಅನುಮತಿ ಕೊಟ್ಟಿದ್ದು ಸಿಟಿ ಒಳಗಡೆ ಅವಕಾಶ ನೀಡಿಲ್ಲ. ಹೋರಾಟದ ಉದ್ದೇಶ ಒಂದೇ ಬೆಂಗಳೂರಲ್ಲಿ ವ್ಯಾಪಾರಿಗಳು ಕಡ್ಡಾಯವಾಗಿ
ಕನ್ನಡ ನಾಮ ಫಲಕ ಹಾಕಲೇಬೇಕು. ಕನ್ನಡದ ಅಳಿವು ಉಳಿವಿನ ಪ್ರಶ್ನೆ. ಹೀಗಾಗಿ ಶಾಂತ ರೀತಿಯಲ್ಲಿ ಹೋರಾಟ ಮಾಡುತ್ತಿದ್ದೇವೆ. ಈ ಹೋರಾಟವನ್ನು ಪೊಲೀಸರು ಹತ್ತಿಕ್ಕಬಾರದು ಎಂದು ಮನವಿ
ಮಾಡಿಕೊಂಡರು.
ಇದನ್ನು ಓದಿ: ಪ್ರೆಸ್ಕ್ಲಬ್ನ ‘ವರ್ಷದ ವ್ಯಕ್ತಿ ಪ್ರಶಸ್ತಿಗೆ ಡಿ.ಕೆ.ಶಿವಕುಮಾರ್ ಆಯ್ಕೆ: 29 ಪತ್ರಕರ್ತರಿಗೆ ‘ಜೀವಮಾನ ಸಾಧನೆ’ ಪ್ರಶಸ್ತಿ
- ಭವ್ಯಶ್ರೀ ಆರ್ ಜೆ