ಗಾಜನೂರಿನಿಂದ ಆಗಮಿಸಿ ಅಂತಿಮ ದರ್ಶನ ಪಡದೆ ಪುನೀತ್‌ ಸಂಬಂಧಿಕರು

ಬೆಂಗಳೂರು ಅ 30 : ಪುನೀತ್‌ ಅಂತಿಮ‌ ದರ್ಶನ ಪಡೆಯಲು ರಾಜಕುಮಾರ್ ಹುಟ್ಟೂರಿನ ಸಂಬಂಧಿಕರು ಗಾಜನೂರಿನಿಂದ ಬಸ್‌ನಲ್ಲಿ ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.

ಮಳವಳ್ಳಿ ಸ್ಥಬ್ದ :

ನಟ ಪುನೀತ್ ರಾಜ್ ಕುಮಾರ್ ವಿಧಿವಶ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ಸಂಪೂರ್ಣ ಬಂದ್ ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಸ್ವಯಂ ಪ್ರೇರಿತ ಬಂದ್ ಮಾಡಿದ ವರ್ತಕರು.
ಪ್ರತೀ ಅಂಗಡಿ, ಹೋಟೆಲ್ ಮುಂದೆಯೂ ಪುನೀತ್ ಫೋಟೋ ಹಾಕಿ ಶ್ರದ್ಧಾಂಜಲಿ ಅರ್ಪಿಸಿದ ವ್ಯಾಪಾರಿಗಳು.
ಮಳವಳ್ಳಿ ಪಟ್ಟಣದಾದ್ಯಂತ ಮನೆ ಮಾಡಿದ ನೀರವ ಮೌನ.ಪ್ರಮುಖ ರಸ್ತೆ, ವೃತ್ತದಲ್ಲೂ ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಅರ್ಪಿಸಿದ್ದು ಜೊತೆಗೆ ಪೊಲೀಸರಿಂದಲೂ ಪವರ್ ಸ್ಟಾರ್ ಪುನೀತ್ ಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

KMF ನಿಂದ ಉಚಿತ ಮಜ್ಜಿಗೆ ವಿತರಣೆ :

ಪುನೀತ್ ನಂದಿನಿ ಬ್ರಾಂಡ್ ರಾಯಭಾರಿ ಆಗಿರುವ ಕಾರಣದಿಂದ Kmf ಸಂಸ್ಥೆಯು ಸಾರ್ವಜನಿಕರಿಗಾಗಿ ಉಚಿತವಾಗಿ ಮಜ್ಜಿಗೆ ವಿತರಣೆ ಮಾಡಿದೆ.

ರಮ್ಯಾ ಬೇಸರ :

ಅಭಿ ಸಿನಿಮಾ ಮೂಲಕ ನಾನು ಸಿನಿಮಾ ಪ್ರವೇಶ ಮಾಡಿದ್ದೆ,ಅಪ್ಪು ಜೊತೆ ಮತ್ತೊಮ್ಮೆ ಕಂಬ್ಯಾಕ್ ಮಾಡುವ ಕನಸಿತ್ತು. ಮತ್ತೆ ಸಿನಿಮಾ ಮಾಡಿದರೆ ಅಪ್ಪು ಜೊತೆ ಎಂದುಕೊಂಡಿದ್ದೆ,ಅಪ್ಪು ಕೂಡ ನನಗೆ ಸಾಕಷ್ಟು ಬಾರಿ‌ ಹೇಳಿದ್ದರು ಆದರೆ ಇದೀಗ ಅವರ ಜೊತೆಗೆ ಮತ್ತೊಂದು ಸಿನಿಮಾ ಮಾಡುವ ಕನಸು ಕನಸಾಗಿ ಉಳಿಯಿತು.

Exit mobile version