ರೈತ ಮುಖಂಡರ ಜತೆಗೆ ಅಮಿತ್ ಶಾ ಮಾತುಕತೆ ವಿಫಲ

ಹೊಸದಿಲ್ಲಿ, ಡಿ. 09: ಕೃಷಿ ಕಾಯ್ದೆಗಳ ವಿಚಾರವಾಗಿ ರೈತ ಸಂಘಟನೆಗಳ 13 ಪ್ರತಿನಿಧಿಗಳ ಜೊತೆಗೆ ಗೃಹ ಸಚಿವ ಅಮಿತ್‌ ಶಾ ನಡೆಸಿದ ʻಅನೌಪಚಾರಿಕ ಮಾತುಕತೆʼ ವಿಫಲವಾಗಿದೆ.

ಕಾಯ್ದೆಗಳಿಗೆ ಅಗತ್ಯ ತಿದ್ದುಪಡಿ ಮಾಡಲು ಲಿಖಿತ ಭರವಸೆ ನೀಡಲಾಗುವುದು ಎಂದು ಅಮಿತ್‌ ಶಾ ಹೇಳಿದ್ದಾರೆ. ಆದರೆ, ಕಾಯ್ದೆಗಳನ್ನು ರದ್ದುಪಡಿಸಬೇಕು. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ರೈತರು ಸಭೆಯ ಬಳಿಕ ಹೇಳಿದ್ದಾರೆ.

ಈ ಮಾತುಕತೆಯೂ ಕೂಡಾ ವಿಫಲವಾಗಿದ್ದು ಕಾಯ್ದೆಗಳಿಗೆ ತಿದ್ದುಪಡು ಮಾಡುವ ಬಗ್ಗೆ ಲಿಖಿತ ಭರವಸೆ ನೀಡಲಾಗುವುದು ಎಂದು ಮಾತ್ರ ಅಮಿತ್‌ ಶಾ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ರೈತ ಮುಖಂಡ ಹನ್ನನ್‌ ಮೊಲ್ಲಾ ಕಾಯ್ದೆಗಳಿಗೆ ತಿದ್ದುಪಡು ಮಾಡುವ ಬಗ್ಗೆ ಲಿಖಿತ ಭರವಸೆ ನೀಡಲಾಗುವುದು ಎಂದು ಶಾ ಹೇಳಿದ್ದಾರೆ. ಆದರೆ ನಮ್ಮ ಬೇಡಿಕೆ ಕಾಯ್ದೆಯನ್ನು ರದ್ದು ಮಾಡುವುದಾಗಿದೆ. ಅದರಲ್ಲಿ ನಾವು ಯಾವುದೇ ರಾಜಿಗೆ ಮುಂದಾಗಲಾರೆವು ಎಂದು ಹೇಳಿದ್ದಾರೆ.

ಅಲ್ಲದೇ, ಮುಂದಿನ ಹಂತದ ಮಾತುಕತೆಯ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಕೂಡಾ ತಿಳಿಸಿದ್ದಾರೆ.

Exit mobile version