ವಿಧವೆ ಸೊಸೆಯನ್ನು ನೌಕರಿ ಪಡೆಯುವಂತೆ ಪ್ರೋತ್ಸಾಹಿಸಿ, ಮರುಮದುವೆ ಮಾಡಿದ ಅತ್ತೆ ; ಹೆಣ್ಣುಕುಲಕ್ಕೆ ಮಾದರಿ ಕಮಲ ದೇವಿ

Rajasthan

Rajasthan : ರಾಜಸ್ಥಾನ(Rajasthan) ರಾಜ್ಯದಲ್ಲಿ ವರದಕ್ಷಿಣೆ(Dowry) ಸಾವುಗಳು ಮತ್ತು ಬಾಲ್ಯವಿವಾಹಗಳ ಅನೇಕ ಪ್ರಕರಣಗಳನ್ನು ನಡೆಯುತ್ತಿರುವ ಸಂದರ್ಭದಲ್ಲಿ, ರಾಜಸ್ಥಾನದ ಮಹಿಳೆಯೊಬ್ಬರು ತನ್ನ ಮಗನ ಸಾವಿನ ನಂತರ ತನ್ನ ಸೊಸೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಮಾದರಿಯಾಗಿ ನಿಂತಿದ್ದಾರೆ.

https://vijayatimes.com/supremecourt-questions-regarding-hijab/


ವರದಿಯಂತೆ, ರಾಜಸ್ಥಾನದ ಫತೇಪುರ್ ಶೇಖಾವತಿಯಲ್ಲಿರುವ ಕಮಲಾ ದೇವಿ ಎಂಬ ಮಹಿಳೆಯೊಬ್ಬರು ಸೊಸೆಯನ್ನು ಮಗಳಂತೆ ನೋಡಿಕೊಂಡು ಕಾಳಜಿ ವಹಿಸಿದ್ದಾರೆ. ಆಕೆಯ ಕಿರಿಯ ಮಗ ಶುಭಂ 2016 ರಲ್ಲಿ ವಿವಾಹವಾದ ಕೆಲವು ತಿಂಗಳ ನಂತರ ಬ್ರೈನ್ ಸ್ಟ್ರೋಕ್‌ ನಿಂದಾಗಿ ಸಾವನ್ನಪ್ಪಿದ್ದ.

ಆತ ಮಧ್ಯ ಏಷ್ಯಾದ ಕಿರ್ಗಿಸ್ತಾನ್‌ ನಲ್ಲಿ ಎಂಬಿಬಿಎಸ್(MBBS) ಪದವಿ ಪಡೆಯಲು ಹೋಗಿ ಅಲ್ಲಿ ಮೃತಪಟ್ಟಿದ್ದ. ಕಮಲಾ ದೇವಿಯು ಅದರ ನಂತರ ಸೊಸೆಯಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವಂತೆ ಹೇಳಿದರು. ಅತ್ತೆಯ ಕಾಳಜಿ, ಪ್ರೋತ್ಸಾಹದ ಪರಿಣಾಮ ಸೊಸೆ ಇತಿಹಾಸದಲ್ಲಿ ಗ್ರೇಡ್ 1 ಉಪನ್ಯಾಸಕರ ಪದವಿಗೆ ಅರ್ಹತೆ ಪಡೆದಿದ್ದಾರೆ.

https://vijayatimes.com/health-facts-about-heart/

ಕಮಲ ದೇವಿ ಸ್ವತಃ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ. ಸೊಸೆ ಸುನೀತಾ ಪ್ರಸ್ತುತ ಚುರು ಜಿಲ್ಲೆಯ ಸರ್ದಾರ್ ನಗರದ ನೈನಾಸರ್ ಸುಮೇರಿಯಾದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಐದು ವರ್ಷಗಳ ನಂತರ ಕಮಲ ದೇವಿ ತನ್ನ ಸೊಸೆಯನ್ನು ಮುಖೇಶ್ ಎಂಬ ವ್ಯಕ್ತಿಗೆ ಮದುವೆ ಮಾಡಿಸಿಕೊಟ್ಟಿದ್ದು, ಹಳ್ಳಿಯಲ್ಲಿ ಬಹಳ ಆಡಂಬರದಿಂದಲೇ ಈ ಮದುವೆ ನಡೆದಿದೆ ಎಂದು ವರದಿಯಾಗಿದೆ.


ಕಮಲಾ ದೇವಿ(Kamala Devi) ಅವರು ಸಂದರ್ಶನವೊಂದರಲ್ಲಿ ಮಾತನಾಡಿ, “ತಮ್ಮ ಮಗ ಶುಭಂ ಅವರು ಸುನೀತಾ ಅವರನ್ನು ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಹಳ್ಳಿಯಲ್ಲಿ ಸಂಪ್ರದಾಯದಂತೆ ಹುಡುಗಿಯ ಕುಟುಂಬವು ಉತ್ತಮ ಆರ್ಥಿಕ ಸ್ಥಿತಿಯಲ್ಲಿರಲಿಲ್ಲದಿದ್ದರೂ ಅವರು ವರದಕ್ಷಿಣೆ ನೀಡಲು ಮುಂದಾದರು. ಆದರೆ ನಾನು ನಿರಾಕರಿಸಿದೆ.

https://vijayatimes.com/rishi-sunak-and-liz-truss/

ವಿಧಿಯು ದಂಪತಿಗಳ ಹಣೆಯಲ್ಲಿ ಬೇರೆನೋ ಬರೆದಿತ್ತು” ಎಂದು ಕಮಲಾದೇವಿ ಹೇಳಿದ್ದಾರೆ. ಕಮಲಾ ದೇವಿಯು ಸುನೀತಾರನ್ನು ತನ್ನ ಮಗನೆಂದೇ ಪರಿಗಣಿಸಿದ್ದಾರೆ. ಸುನೀತಾ ಕೂಡ ಕಮಲ ದೇವಿ ಅವರಿಗೆ ವಿಧೇಯಳಾಗಿದ್ದಳು ಮತ್ತು ಅವಳು ಹೇಳಿದ್ದನ್ನೆಲ್ಲಾ ಅನುಸರಿಸುತ್ತಿದ್ದಳು ಎಂದು ಆಕೆಯ ಹಿರಿಯ ಮಗ ರಜತ್ ಬಂಗ್ವಾರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Exit mobile version