ವಿಶ್ವ ನಾಯಕರೇ ನಮ್ಮನ್ನು ರಕ್ಷಿಸಿ; ರಶೀದ್ ಖಾನ್ ಮನವಿ

ತಾಲಿಬಾನ್ ಸಂಘಟನೆಯು ಇಡೀ ಅಫ್ಘಾನಿಸ್ತಾನವನ್ನು ವಶವಡಿಸಿಕೊಂಡಿರುವ ಹಿನ್ನಲೆಯಲ್ಲಿ ನಮ್ಮನ್ನು ಸಾಯಲು ಬಿಡಬೇಡಿ ನಮ್ಮನ್ನು ಕಾಪಾಡಿ ಎಂದು ಪಾಕಿಸ್ತಾನ ಕ್ರಿಕೆಟಿಗೆ ರಶೀದ್ ಖಾನ್ ವಿಶ್ವ ನಾಯಕರಲ್ಲಿ ಮನವಿ ಮಾಡಿದ್ದಾರೆ.

 ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ನಮ್ಮ ದೇಶ ಕಷ್ಟದಲ್ಲಿದೆ. ದೇಶದ ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಎಲ್ಲರೂ ಹುತಾತ್ಮರಾಗುತ್ತಿದ್ದಾರೆ. ಜನರು ಭಯದಿಂದ ಪಲಾಯನ ಮಾಡುವುದನ್ನು ಮುಂದುವರಿಸುತ್ತಿದ್ದಾರೆ. ದಯವಿಟ್ಟು ನಮ್ಮನ್ನು ಕೊಲ್ಲುವುದನ್ನು ತಡೆಯಿರಿ. ನಮಗೆ ಸಹಾಯ ಮಾಡಿ.  ಎಂದು ರಶೀದ್ ಖಾನ್ ವಿಶ್ವ ನಾಯಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಐಪಿಎಲ್ ಗೆ ಲಭ್ಯ : ಒಂದೆಡೆ ತಾಲಿಬಾನ್ ತನ್ನ ಉಗ್ರರೂಪದೊಂದಿಗೆ ಇಡೀ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದು, ಅಫ್ಘಾನಿಗಳು ಅಕ್ಷರಶಃ ತಬ್ಬಲಿಗಳಾಗಿದ್ದಾರೆ. ಈ ನಡುವೆ ಅಕ್ಟೋಬರ್ ನಿಂದ ಐಪಿಎಲ್ ಪ್ರಾರಭವಾಗಲಿದ್ದು ಇತ್ತ ಸನ್​ರೈಸರ್ಸ್​ ಹೈದರಾಬಾದ್ ಫ್ರಾಂಚೈಸಿ ಕೂಡ ಅಫ್ಘಾನಿಸ್ತಾನದ ಆಟಗಾರರೊಂದಿಗೆ ಸಂಪರ್ಕದಲ್ಲಿದ್ದಾರೆ. ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಹಾಗೂ ಮುಜೀಬುರ್ ರೆಹಮಾನ್ ಇಂಗ್ಲೆಂಡ್​ನಲ್ಲಿ ದಿ ಹಂಡ್ರೆಡ್ ಲೀಗ್ ಆಡುತ್ತಿದ್ದು, ಹೀಗಾಗಿ ಐಪಿಎಲ್​ನ ದ್ವಿತಿಯಾರ್ಧಕ್ಕೆ ಅಲ್ಲಿಂದಲೇ ಯುಎಇನತ್ತ ಪ್ರಯಾಣ ಬೆಳೆಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಎಸ್​ಆರ್​ಹೆಚ್ ತಂಡದ ಅಫ್ಘಾನ್ ಆಟಗಾರರು ಐಪಿಎಲ್​ನ ದ್ವಿತಿಯಾರ್ಧದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಸನ್​ರೈಸರ್ಸ್​ ಹೈದರಾಬಾದ್ ಫ್ರಾಂಚೈಸಿ ಸ್ಪಷ್ಟನೆ ನೀಡಿದೆ. ಅದೇನೆಯಿದ್ದರೂ ಇತ್ತ ಅವರು ಮನೆಯವರು ಜೀವ ಭಯದಲ್ಲಿರುವುದರಿಂದ ಆಟಗಾರರು ಮತ್ತಷ್ಟು ಕುಗ್ಗುವಂತೆ ಮಾಡಿದೆ.

Exit mobile version