Davanagere: ರಾಜ್ಯದಲ್ಲಿ ಉಂಟಾಗಿದ್ದ ಗೊಂದಲಕ್ಕೆ ಕಾಂಗ್ರೆಸ್ ನ ಹೈ ಕಮಾಂಡ್ (Renukacharya against high command) ಕೇವಲ 15-20 ದಿನಗಳಲ್ಲೇ ಬ್ರೇಕ್ ಹಾಕಿತು. ಆದ್ರೆ ನಮ್ಮ
ಹೈಕಮಾಂಡ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅಂತವರ ನಾಯಕರಿದ್ದರೂ ರಾಜ್ಯದಲ್ಲಿನ ಬಿಜೆಪಿ (BJP) ಗೊಂದಲಗಳನ್ನು ಕಂಟ್ರೋಲ್ ಮಾಡಲಾಗುತ್ತಿಲ್ಲ ಎಂದು ಮಾಜಿ ಸಚಿವ ಎಂ ಪಿ
ರೇಣುಕಾಚಾರ್ಯ (M.P.Renukacharya) ಅವರು, ಬಿಜೆಪಿ ಕೇಂದ್ರ ಹೈ ಕಮಾಂಡ್ ನಡೆಗೆ ಬೇಸರವನ್ನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ (Congress) ಸರ್ಕಾರದಲ್ಲಿ ಸಾಕಷ್ಟು ವೈಫಲ್ಯಗಳಿದ್ದು, ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದ ತಮ್ಮ ಬೆಂಬಲಿಗರ ಸಭೆಯಲ್ಲಿ ಪಕ್ಷದ ನಾಯಕರ ನಡವಳಿಕೆ ಮತ್ತು ಹೈ ಕಮಾಂಡ್ (High
Command) ನಡೆಯ ಬಗ್ಗೆ ಬೇಸರವನ್ನ ವ್ಯಕ್ತಪಡಿಸಿದರು. ಆದರೆ ಬಿಜೆಪಿಯಲ್ಲಿ ಹೋರಾಟ (Renukacharya against high command) ಮಾಡಲು ಸಮರ್ಥವಾದ ನಾಯಕತ್ವ ಇಲ್ಲ.
ಬಿಜೆಪಿಯಲ್ಲಿ (BJP) ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಇಲ್ಲದಂತಾಗಿದೆ. ನಮ್ಮ ಜಿಲ್ಲೆಯ ನಾಯಕರೇ ನನ್ನ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದು, ರಾಮದಾಸ್ ಬಂದಾಗ ಸಂಸದ ಜಿ ಎಂ ಸಿದ್ದೇಶ್ವರ್
ನನಗೆ ಮೂರ್ಖ ಅಂತ ಕರೆದಿದ್ದಾರೆ ಎಂದು ರೇಣುಕಾಚಾರ್ಯ ಸಂಸದ ಸಿದ್ದೇಶ್ವರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
2014 ರಿಂದಲೇ ಇದೇ ಜಿ ಎಂ ಸಿದ್ದೇಶ್ವರ್ ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದಿದ್ದರು. ಆವಾಗ ಮತ್ತೆ ನಾವೇ ಒತ್ತಾಯ ಮಾಡಿ ಚುನಾವಣೆಗೆ ಸ್ಪರ್ಧಿಸುವಂತೆ ಧೈರ್ಯ ತುಂಬಿದ್ದೇವು. ಆದರೆ ಈಗ ಜಿ ಎಂ
ಸಿದ್ದೇಶ್ವರ್ (G.M.Siddeshwar) ಈ ರೀತಿ ಮಾತನಾಡುತ್ತಿದ್ದಾರೆ ತಮ್ಮ ಬೆಂಬಲಿಗರ ಸಭೆಯಲ್ಲಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು, ನನ್ನ ಮಗನಿಗೆ ಟಿಕೆಟ್ ಕೊಡದಿದ್ದಕ್ಕೆ ಎಲ್ಲ ಕಡೆ ಬಿಜೆಪಿಗೆ ಸೋಲಾಯಿತು. ನನ್ನ ಮಗನಿಗೆ ಟಿಕೆಟ್ (Ticket) ಕೊಟ್ಟಿದ್ದರೆ ಬಿಜೆಪಿ ಗೆಲ್ಲುತ್ತಿತ್ತು ಅಂತ ಸಿದ್ದೇಶ್ವರ್ ಹೇಳುತ್ತಾರೆ. ಅಂದ್ರೆ ಹೇಗೆ ಎಂದು
ಬಿಜೆಪಿ ವಿರುದ್ದ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ನಾನು ನಮ್ಮ ಶಾಸಕರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿದ್ದೇನೆ, ಚುನಾವಣೆಯಲ್ಲಿ ಸಹಕಾರ ನೀಡುವಂತೆ ಕೇಳಿಕೊಂಡಿದ್ದೇನಂತೆ, ನಾವಿಬ್ಬರು ಬೆಂಗಳೂರಿನಲ್ಲಿ ಭೇಟಿಯಾಗಿ
ರಾಜಕೀಯ ಚರ್ಚೆ ಮಾಡುತ್ತಿದ್ದೇವೆ ಎಂದು ನಮ್ಮವರೆ ಸುದ್ದಿ ಹರುಡುತ್ತಿದ್ದಾರೆ. ನನ್ನ ಬಗ್ಗೆ ಇವರೇ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ನಾನು ಯಾವುದೇ ಕಾರಣಕ್ಕೂ ಹೊಂದಾಣಿಕೆ ರಾಜಕೀಯ
ಮಾಡಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.
ಈ ವರ್ಷ ನಡೆದಿದ್ದ ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದಕ್ಕೆ ಬಿಜೆಪಿಯ ಹೈಕಮಾಂಡ್ ನ ತಪ್ಪು ನಿರ್ಧಾರಗಳೇ ಕಾರಣ ಎಂದು ಅವರು ಹೇಳಿದ್ದರು. ಇತ್ತೀಚೆಗೆ ಬಿಜೆಪಿಯೊಳಗಿನ
ವಾತಾವರಣ ಸರಿಯಿಲ್ಲವೆಂದರೂ, ವಿಪಕ್ಷ ನಾಯಕರ ಆಯ್ಕೆ ಇನ್ನೂ ಆಗಿಲ್ಲವೆಂದು ಬಿಜೆಪಿ ಹೈಕಮಾಂಡ್ (High Command) ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ.
ಇದನ್ನು ಓದಿ: ಸನಾತನ ಧರ್ಮ ವಿರುದ್ಧ ಉದಯನಿಧಿ ಸ್ಟಾಲಿನ್ ನೀಡಿದ್ದ ಹೇಳಿಕೆ: ನನ್ನ ನಿಲುವು ಬದಲಾಗದು
- ಭವ್ಯಶ್ರೀ ಆರ್.ಜೆ