ಸಾಮಾಜಿಕ ಹೋರಾಟಗಾರ ಬಿ. ಡಿ ಹಿರೇಮಠ ಅಸ್ವಸ್ಥ

ಹುಬ್ಬಳ್ಳಿ, ಡಿ. 17: ಸಾಮಾಜಿಕ ಹೋರಾಟಗಾರ, ವಕೀಲ ಬಿ. ಡಿ. ಹಿರೇಮಠ ತೀವ್ರ ಅಸ್ವಸ್ಥರಾಗಿದ್ದಾರೆ. ಇದಕ್ಕೆ ಕಾರಣ ಉಪವಾಸ ಸತ್ಯಾಗ್ರಹ, ಸತತ 14 ದಿನ ರಟ್ಟಿಹಳ್ಳಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಬಿ. ಡಿ. ಹಿರೇಮಠ. ಇದರಿಂದ ಡಯಾಬಿಟೀಸ್‌ ಹಾಗೂ ರಕ್ತದೊತ್ತಡ ವ್ಯತ್ಯಯವಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಟ್ಟಿಹಳ್ಳಿಯಲ್ಲಿ ರೈತರು ತಾಳೆಗುಂದ ಕೆರೆ ತುಂಬಿಸುವ ನೀರಾವರಿ ಯೋಜನೆಗೆ ಪೈಪ್‌ಲೈನ್‌ ಅಳವಡಿಸಲು ರೈತರ ಜಾಮೀನುಗಳ ಸ್ವಾಧೀನ ವಿರೋಧಿಸಿ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದರು. ಈ ಸತ್ಯಾಗ್ರಹದ ನೇತೃತ್ವವನ್ನು ಬಿ. ಡಿ ಹಿರೇಮಠ ಅವರೇ ವಹಿಸಿದ್ದರು.

ಗೃಹ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಭೇಟಿ ನೀಡಿ ರೈತರ ಬೇಡಿಕೆಗಳನ್ನು ಇಡೇರಿಸುವುದಾಗಿ ಭರವಸೆ ನೀಡಿರುವುದರಿಂದ ಉಪವಾಸ ಸತ್ಯಾಗ್ರಹ ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ.    

Exit mobile version