Kolkata: ಖ್ಯಾತ ಹಿಂದೂಸ್ತಾನಿ ಗಾಯಕ ಉಸ್ತಾದ್ ರಶೀದ್ ಖಾನ್ ((Ustad Rashid Khan) (55) ಅವರು, ಕ್ಯಾನ್ಸರ್ನಿಂದ ಬಳಲುತ್ತಿದ್ದು, ಇದರ ಜೊತೆಗಿನ ಸುದೀರ್ಘ ಕಾಲದ ಹೋರಾಟದ ಬಳಿಕ ಮಂಗಳವಾರ ಮಧ್ಯಾಹ್ನ ಕೋಲ್ಕತಾದ (Kolkata) ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ರಶೀದ್ ಖಾನ್ ಅವರು ಸಂಗೀತರದ ಮೇರು ದಿಗ್ಗಜ ಇನಾಯತ್ ಹುಸೇನ್ ಖಾನ್ ಅವರ ಮರಿ ಮೊಮ್ಮಗ. ಇವರು ರಾಂಪುರ-ಸಹಸ್ವನ್ ಘರಾಣೆ ಶೈಲಿಯ ಗಾಯಕರಾಗಿ ಗುರುತಿಸಿಕೊಂಡಿದ್ದರು. ಆದರೆ ಮಾರಕ ಕಾಯಿಯೆಯಾದ ಕ್ಯಾನ್ಸರ್ (Cancer) ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದ್ದು, ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ಉಸ್ತಾದ್ ರಶೀದ್ ಖಾನ್ ಅವರು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು. ಅವರು ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣುಮಗಳನ್ನು ಅಗಲಿದ್ದಾರೆ.
ತಮ್ಮ ಗಾಯನದ ಮೂಲಕ ಹಲವಾರು ರಾಗಗಳನ್ನು ರಶೀದ್ ಖಾನ್ ಸಂಯೋಜಿಸಿದ್ದು, ವಿಲಂಬಿತ್ ಖಯಾಲ್ ಎಂಬ ಹೊಸ ಶೈಲಿಯ ಮೂಲಕ ಸಂಗೀತ ಪ್ರಿಯರ ಗಮನಸೆಳೆದಿದ್ದರು. ಇನ್ನು 11ನೇ ವಯಸ್ಸಿಗೆ ಸಂಗೀತ ಕಚೇರಿ ನಡೆಸಿಕೊಟ್ಟ ಹೆಗ್ಗಳಿಕೆ ಪಾತ್ರರಾಗಿದ್ದರು. ಅವರು ಮಧ್ಯಾಹ್ನ 3.45ರ ವೇಳೆಗೆ ನಿಧನರಾದರು” ಎಂದು ಖಾನ್ ಅವರನ್ನು ದಾಖಲಿಸಲಾಗಿದ್ದ ಖಾಸಗಿ ಆಸ್ಪತ್ರೆ ಹೇಳಿಕೆ ನೀಡಿದೆ. ಕೋಲ್ಕತಾದ ಪೀಸ್ ಹೆವನ್ನಲ್ಲಿ ಅವರ ಪಾರ್ಥಿವ ಶರೀರವನ್ನು ದರ್ಶನಕ್ಕಾಗಿ ಇರಿಸಲಾಗುತ್ತಿದ್ದು, ಬುಧವಾರ ಅಂತ್ಯ ಸಂಸ್ಕಾರ ನಡೆಯಲಿದೆ.
ಇವರ ಸಾವಿನ ಸುದ್ದಿ ತಿಳಿದು ಹಲವು ಗಣ್ಯರು ಸಂತಾಪ ಸೂಚಿಸಿದ್ದು, ನನಗೆ ತೀವ್ರ ನೋವಾಗಿದೆ” ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamatha Banerjee) ಆಸ್ಪತ್ರೆಯಲ್ಲಿ ಖಾನ್ ಅವರ ಕುಟುಂಬದವರನ್ನು ಭೇಟಿ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi), ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ರಶೀದ್ ಖಾನ್ ಅವರು, ಉತ್ತರ ಪ್ರದೇಶದ (Uttara Pradesh) ಬದಯೂನ್ನಲ್ಲಿ ಜನಿಸಿದ್ದು, ಉಸ್ತಾದ್ ಗುಲಾಂ ಮುಸ್ತಫಾ ಖಾನ್ ಅವರ ಸೋದರಳಿಯ. ತಾಯಿಯ ಸೋದರಮಾವ ಉಸ್ತಾದ್ ನಿಸಾರ್ ಹುಸೇನ್ ಖಾನ್ ಅವರಿಂದ ರಶೀದ್ ಅವರು ಆರಂಭದಲ್ಲಿ ಸಂಗೀತ ಅಭ್ಯಾಸ ಮಾಡಿದ್ದರು. ಇದರ ಬಳಿಕ ಉಸ್ತಾದ್ ಗುಲಾಂ ಮುಸ್ತಫಾ ಖಾನ್ ಅವರು ಮುಂಬಯಿಯಲ್ಲಿ ತರಬೇತಿ ಕೊಡಿಸಿದ್ದರು.
ತಮ್ಮ 11ನೇ ವಯಸ್ಸಿನಲ್ಲಿ ರಶೀದ್ ಅವರು ಮೊದಲ ಸಂಗೀತ ಕಾರ್ಯಕ್ರಮ ನೀಡಿದ್ದರು. ಮರು ವರ್ಷ, 1978ರಲ್ಲಿ ದಿಲ್ಲಿಯ ಐಟಿಸಿ ಕನ್ಸರ್ಟ್ನಲ್ಲಿ ಹಾಡಿದ್ದರು. 1980ರಲ್ಲಿ ನಿಸಾರ್ ಹುಸೇನ್ ಖಾನ್ ಅವರು ಕಲ್ಕತ್ತಾದ ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿಗೆ ತೆರಳಿದಾಗ 14 ವರ್ಷದ ರಶೀದ್ ಕೂಡ ಅವರೊಂದಿಗೆ ತೆರಳಿದ್ದರು.
ರಶೀದ್ ಅವರಿಗೆ ಸರ್ಕಾರಿ ಗೌರವಗಳೊಂದಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಲಾಗುವುದು. ಬುಧವಾರ ಅವರ ಪಾರ್ಥಿವ ಶರೀರವನ್ನು ರವೀಂದ್ರ ಸದನದಲ್ಲಿ ಇರಿಸಲಾಗುವುದು ಎಂದು ಮಮತಾ ತಿಳಿಸಿದ್ದಾರೆ.
ಭವ್ಯಶ್ರೀ ಆರ್ ಜೆ