ಎನ್ಕೌಂಟರ್‌ಗೆ ಉಗ್ರ ಬಲಿ

ಶ್ರೀನಗರ ಸೆ 23 :  ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕನನ್ನು ಹತ್ಯೆಮಾಡಲಾಗಿದ್ದು ಆತನಿಂದ ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಡಿಸಿಕೊಂಡಿರುವ ಘಟನೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದೆ.

ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಬಲ್ಲಿ ಬುಧವಾರ ರಾತ್ರಿ ನಡೆದ ಘಟನೆಯಲ್ಲಿ ಹತನಾದವನನ್ನು ಅನಾಯತ್ ಅಶ್ರಫ್ ದಾರ್ ಎಂದು ಗುರುತಿಸಲಾಗಿದೆ. ಈ ಹಿಂದೆ ಈತ ಸಕ್ರಿಯ ಭಯೋತ್ಪಾದಕನಾಗಿದ್ದ ಮತ್ತು ಉಗ್ರಗಾಮಿಗಳ ಓವರ್ ಗ್ರೌಂಡ್ ವರ್ಕರ್ (ಒಜಿಡಬ್ಲ್ಯೂ) ಆಗಿದ್ದ.ಜೊತೆಗೆ  ನಾಗರಿಕ ಜಿವರ್ ಹಮೀದ್ ಭಟ್ ಮೇಲೆ ಈತ ಈ ಮುಂಚೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದ.

ಉಗ್ರಗಾಮಿಯಾಗಿದ್ದ ಇತನು ತನ್ನ ಹಳ್ಳಿಯಲ್ಲಿ ಮತ್ತು ಸುತ್ತಮುತ್ತಲಿನ ಇತರ ಜನರನ್ನು ತನ್ನ ಅಕ್ರಮ ಶಸ್ತ್ರಾಸ್ತ್ರಗಳಿಂದ ಬೆದರಿಸುತ್ತಿದ್ದ. ಹಲವಾರು ಶಂಕಿತರ ಸಂಪೂರ್ಣ ವಿಚಾರಣೆ ಮತ್ತು ಮೂಲಗಳ ವರದಿಯ ಆಧಾರದ ಮೇಲೆ , ಕೇಶ್ವಾ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಈ ವೇಳೆ ಈತ ಜಂಟಿ ಶೋಧತಂಡದ ಮೇಲೆ ಗುಂಡು ಹಾರಿಸಿದ್ದ ಆದರೆ ಪೊಲೀಸರು ಅತನಿಗೆ ಶರಣಾಗಲು ಅವಕಾಶ ನೀಡಿದ್ದರು ಆದರೆ ಆತ ಅದಕ್ಕೆ ಒಪ್ಪದ್ದಿದ್ದಾಗ ಸುತ್ತಮುತ್ತಲಿನ ಮನೆಯಲ್ಲಿದ್ದ ನಾಗರಿಕರನ್ನು ಸ್ಥಳಾಂತರ ಮಾಡಿ ನಂತರ ಆತನ್ನು ಎನ್ಕೌಂಟರ್‌ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರನಿಂದ ಒಂದು ಪಿಸ್ತೂಲ್ ಮತ್ತು ಅಪಾರ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version