`ಸಿದ್ದರಾಮೋತ್ಸವʼ ; ಕಾಂಗ್ರೆಸ್ ಈಗ ಬೂದಿ ಮುಚ್ಚಿದ ಕೆಂಡ : ಬಿಜೆಪಿ ವ್ಯಂಗ್ಯ

Siddaramaiah

ಜುಲೈ 3 ರಂದು ದಾವಣಗೆರೆಯಲ್ಲಿ(Davanagere) ನಡೆಯಲಿರುವ `ಸಿದ್ದರಾಮೋತ್ಸವʼ ಕಾಯಕ್ರಮದ ನಂತರ ರಾಜ್ಯ ಕಾಂಗ್ರೆಸ್ನಲ್ಲಿ(State Congress) ಕುರ್ಚಿಗಾಗಿ ಕಿತ್ತಾಟ ಶುರುವಾಗಲಿದೆ. ಸಿದ್ದರಾಮಯ್ಯ(Siddaramaiah) ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವುದಕ್ಕಾಗಿಯೇ ಈ ಸಮಾವೇಶ ನಡೆಸಲಾಗುತ್ತಿದೆ. ಈ ಸಮಾವೇಶದ ನಂತರ ಕಾಂಗ್ರೆಸ್ನಲ್ಲಿ ಖುರ್ಚಿ ಕಾಳಗ ಶುರುವಾಗಲಿದೆ ಎಂದು ಬಿಜೆಪಿ(BJP) ಲೇವಡಿ ಮಾಡಿದೆ.


ಈ ಕುರಿತು ಸರಣಿ ಟ್ವೀಟ್(Tweet) ಮಾಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷವೀಗ ಬೂದಿ ಮುಚ್ಚಿದ ಕೆಂಡವಾಗಿದೆ. ಕೆಂಡಕ್ಕೆ ಸಿದ್ದರಾಮೋತ್ಸವ ತುಪ್ಪ ಸುರಿಯುವುದರಲ್ಲಿ ಸಂದೇಹವಿಲ್ಲ. ಸಿದ್ದರಾಮೋತ್ಸವದ ಬಳಿಕ ರಾಜ್ಯ ಕಾಂಗ್ರೆಸ್ ಕಲಹ ತಾರ್ಕಿಕ ಅಂತ್ಯ ತಲುಪಲಿದೆ. ಕರ್ನಾಟಕ ಕಾಂಗ್ರೆಸ್ ಮುಕ್ತವಾಗುವುದು ಶತಸಿದ್ಧ.ಮಾಧ್ಯಮದ ಮುಂದೆ ಮಾತ್ರ ಒಬ್ಬರ ಮುಖವನ್ನುಒಬ್ಬರು ನೋಡಿಕೊಳ್ಳದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಶಕ್ತಿ ಪ್ರದರ್ಶನ ವೇದಿಕೆಯಲ್ಲೇ ಅಕ್ಕಪಕ್ಕ ಕುಳಿತುಕೊಳ್ಳಲು ಸಾಧ್ಯವೇ ? ಕುರ್ಚಿ ಕಾಳಗದ ಸಮಾವೇಶದಲ್ಲಿ ಕಾಳಗ ನಡೆಯದಿರಲು ಹೇಗೆ ಸಾಧ್ಯ?


ಸಿದ್ದರಾಮೋತ್ಸವದ ಉದ್ದೇಶವೇ ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡುವುದು. ಇದರ ಸುಳಿವರಿತ ಡಿ.ಕೆ.ಶಿವಕುಮಾರ್ ಬಣ ಸಮಾವೇಶ ತಡೆಯಲು ಎಲ್ಲಾ ಪ್ರಯತ್ನ ನಡೆಸುತ್ತಿದೆ. ಅಸಲಿ ಆಟ ಈಗ ಶುರುವಾಗಿದೆ. ಸಿದ್ದರಾಮಯ್ಯನವರೇ, ಚಾಮುಂಡೇಶ್ವರಿಯಲ್ಲಿ ನೀವು ಸೋತದ್ದೇಗೆ.? ಬಾದಾಮಿಯಲ್ಲಿ ಉಸಿರು ಗಟ್ಟಿದ್ದೇಗೆ? 122 ರಿಂದ 70 ಕ್ಕೆ ಬಂದಿಳಿದಿದ್ದು ಹೇಗೆ ಶಾಸಕರು ಕಾಂಗ್ರೆಸ್‍ ತೊರೆಯುತ್ತಿರುವುದೇಕೆ? ಸಂತೆ ಭಾಷಣ ಮಾಡುವುದು ಬಿಡಿ, ಕೊನೆಯ ಪಕ್ಷ ನೀವಾದರೂ ಮುಂದಿನ ಚುನಾವಣೆಯಲ್ಲಿಗೆಲ್ಲಲು ಪ್ರಯತ್ನಿಸಿ ಎಂದು ವ್ಯಂಗ್ಯವಾಡಿದೆ.

Exit mobile version