ಬೆಂಗಳೂರು ಪೋಲಿಸರ ಸಹಾಯ ಕೋರಿದ ಮುಜರಾಯಿ ಸಚಿವರ ಮಗಳು!

tamilnadu

ತಮಿಳುನಾಡಿನ ಮುಜರಾಯಿ ಸಚಿವರಾದ ಶೇಖರ್ ಬಾಬು ಅವರ ಮಗಳು ಕರ್ನಾಟಕ ರಾಜ್ಯದ ಬೆಂಗಳೂರು ಪೊಲೀಸರ ರಕ್ಷಣೆ ಕೋರಿದ್ದಾರೆ. ಮುಜರಾಯಿ ಸಚಿವ ಶೇಖರ್ ಬಾಬು ಅವರ ಮಗಳು ಜಯ ಕಲ್ಯಾಣಿ ಬೆಂಗಳೂರಿನ ಸತೀಶ್ ಕುಮಾರ್ ಅವರನ್ನು ಪ್ರೀತಿಸಿದ್ದರು. ಹೀಗಾಗಿ ಪ್ರೀತಿಸಿದ ಈ ಜೋಡಿ ಮದುವೆ ಮಾಡಿಕೊಳ್ಳಲು ಹಿಂದೆ ಮುಂದೆ ಯೋಚಿಸದೆ ಮನೆಯವರ ಕಣ್ತಪ್ಪಿಸಿ ಓಡಿ ಹೋಗಿ ಮದುವೆಯಾಗಿದ್ದಾರೆ.

ಸತೀಶ್ ಕುಮಾರ್ ಅವರನ್ನು ಪ್ರೀತಿ ಮಾಡಿದ್ದರು, ಇದನ್ನು ಮನೆಯಲ್ಲಿ ಹೇಳಿದರೆ ಒಪ್ಪುವುದಿಲ್ಲ ಎಂಬ ಅನುಮಾನದಿಂದ ಮನೆಬಿಟ್ಟು ಹೋಗಿ ಪ್ರೇಮಿಗಳು ಮದುವೆಯಾಗಿದ್ದಾರೆ. ಈ ಒಂದು ಸುದ್ದಿ ತಮಿಳುನಾಡಿನಲ್ಲಿ ಗದ್ದಲ ಉಂಟು ಮಾಡಿದ್ದು, ಭಯಗೊಂಡು ಜೋಡಿ ಬೆಂಗಳೂರು ಪೊಲೀಸರ ರಕ್ಷಣೆ ಕೋರಿ ಕರ್ನಾಟಕಕ್ಕೆ ಬಂದಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಜಯಕಲ್ಯಾಣಿ ಅವರು, ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ಧರ್ಮದತ್ತಿ ಸಚಿವ ಪಿ.ಕೆ ಶೇಖರ್ ಬಾಬು ಅವರ ಪುತ್ರಿ.

ಶೇಖರ್ ಬಾಬು ಅವರು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಆಪ್ತರು ಎಂದು ಮೂಲಗಳು ತಿಳಿಸಿವೆ. ಕುಟುಂಬದವರ ತೀವ್ರ ವಿರೋಧದ ನಡುವೆಯೂ ಜಯಕಲ್ಯಾಣಿ ಅವರು ಡಿಪ್ಲೊಮಾ ಪದವೀಧರರಾಗಿದ್ದು, ಉದ್ಯಮಿಯಾಗಿರುವ ಸತೀಶ್ ಕುಮಾರ್ ಅವರನ್ನು ವಿವಾಹವಾಗಿರುವುದು ಕುಟುಂಬಕ್ಕೆ ಇಷ್ಟವಿಲ್ಲ! ಕರ್ನಾಟಕದ ವಿಜಯನಗರ ಜಿಲ್ಲೆಯ ಹಿರೇಹಡಗಲಿಯ ಹಾಲಸ್ವಾಮಿ ಮಠದಲ್ಲಿ ವಿವಾಹವಾಗಿದ್ದಾರೆ. ನಂತರ ಮಾಧ್ಯಮಗಳ ಹಾಜರಾದ ಜಯಕಲ್ಯಾಣಿ ಮತ್ತು ಸತೀಶ್ ನಾವು ಸುಮಾರು ಆರು ವರ್ಷಗಳಿಂದ ಪ್ರೀತಿಸುತ್ತಿದ್ದೆವು ಮತ್ತು ಮದುವೆಯಾಗಲು ಬಯಸಿದ್ದೆವು. ಆದರೆ ನಮ್ಮ ಮನೆಯವರು ಒಪ್ಪದ ಕಾರಣ ಹೊರನಡೆದಿದ್ದೇವೆ ಎಂದು ಹೇಳಿದರು.

ನಾವಿಬ್ಬರೂ ಮೇಜರ್ ಆಗಿದ್ದೇವೆ ಮತ್ತು ಇಬ್ಬರು ಪರಸ್ಪರ ಒಪ್ಪಿಗೆಯೊಂದಿಗೆ ಮದುವೆ ಮಾಡಿಕೊಂಡಿದ್ದೇವೆ. ಸತೀಶ್ ಅವರ ಕುಟುಂಬಕ್ಕೆ ಈಗಾಗಲೇ ಸಾಕಷ್ಟು ಬೆದರಿಕೆ ಕರೆಗಳು ಬಂದಿದೆ ಎಂದು ಹೇಳಿಕೊಂಡಿದ್ದಾರೆ. ಜಯಕಲ್ಯಾಣಿಗೆ 24 ವರ್ಷ ಮತ್ತು ಸತೀಶ್‌ಗೆ 27 ವರ್ಷ ವಯಸ್ಸು. ಸದ್ಯ ಈ ಜೋಡಿ ಈಗ ಬೆಂಗಳೂರು ಪೊಲೀಸರ ರಕ್ಷಣೆ ಕೋರಿ, ಬೆಂಗಳೂರಿನ ಕಮೀಷನರ್ ಕಛೇರಿಗೆ ಆಗಮಿಸಿ ರಕ್ಷಣೆ ನೀಡಿ ಎಂದು ಮನವಿ ಮಾಡಿದ್ದಾರೆ.

Exit mobile version