ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಆಸ್ಪತ್ರೆಗೆ ದಾಖಲು!

kc rao

ತೆಲಂಗಾಣ(Telangana) ರಾಜ್ಯದ ಮುಖ್ಯಮಂತ್ರಿಗಳಾದ(Chief Minister) ಕೆ. ಚಂದ್ರಶೇಖರ್ ರಾವ್(K. Chandrashekhar Rao) ಅವರು ಅನಾರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 68 ವರ್ಷ ವಯಸ್ಸಿನ ಕೆ. ಚಂದ್ರಶೇಖರ್ ರಾವ್ ಅವರು ಕಳೆದ ವಾರದಿಂದ ಕೆಲಸಗಳಲ್ಲಿ ತೀವ್ರ ನಿರತರಾಗಿದ್ದರು ಜೊತೆಗೆ ದೆಹಲಿ, ಮುಂಬೈ, ಜಾರ್ಖಂಡ್ ದೇಶಗಳಿಗೆ ಫೆಡರಲ್ ಫ್ರಂಟ್ ರಚನೆಯ ಕಾರಣ, ಹೆಚ್ಚಾಗಿ ಪ್ರವಾಸ ಮಾಡಿದ್ದರು. ಪ್ರವಾಸ ಮುಗಿಸಿಕೊಂಡು ಬಂದ ಬಳಿಕ ಅವರ ಎಡಗೈನಲ್ಲಿ ತೀವ್ರ ನೋವು ಕಾಣಸಿದೆ.

ಕೂಡಲೇ ಕುಟುಂಬದವರು ಅವರನ್ನು ಹೈದ್ರಾಬಾದ್ ನಲ್ಲಿರುವ ಯಶೋಧಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಗೆ ಒಳಪಡಿಸಿದ ವೈದ್ಯರು, ಆಂಜಿಯೋಗ್ರಾಂ ಪರೀಕ್ಷೆ ನಡೆಸಿರುವುದಾಗಿ ತಿಳಿಸಿದ್ದಾರೆ. ಹೃದಯ ಸ್ಕ್ಯಾನ್ ಮತ್ತು ಎಂ.ಆರ್.ಐ ಸ್ಕ್ಯಾನ್ ಮಾಡಲು ಸಜ್ಜಾಗಿರುವುದಾಗಿ ಮಾಹಿತಿ ವರದಿಯಲ್ಲಿ ತಿಳಿದುಬಂದಿದೆ. ಚಂದ್ರಶೇಖರ್ ರಾವ್ ಅವರಿಗೆ ಮತ್ತಷ್ಟು ಸ್ಕ್ಯಾನ್ ಮಾಡುವುದು ಅಗತ್ಯವಾಗಿದೆ. ಹೆಚ್ಚು ಪ್ರಯಾಣ ಮಾಡಿರುವ ಕಾರಣ ಅವರಿಗೆ ಸ್ವಲ್ಪ ತೊಂದರೆಯಾಗಿದೆ ಬಿಟ್ಟರೆ, ತೀರ ಗಾಬರಿಪಡುವಂತ ವಿಷಯವೇನಿಲ್ಲ! ಕೆಸಿಆರ್ ಆರೋಗ್ಯದಲ್ಲಿ ಭಯಪಡುವಂತದ್ದೇನಿಲ್ಲ, ಶೀಘ್ರವೇ ಚೇತರಿಸಿಕೊಳ್ಳುತ್ತಾರೆ ಎಂದು ವೈದ್ಯರು ಹೇಳಿದರು.

Exit mobile version