ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ(Amritha Mahotsav) ಶುಭ ಸಂದರ್ಭದಲ್ಲಿ ಹರ್ ಘರ್ ತಿರಂಗ(Har Ghar Thiranga) ಅಭಿಯಾನದ ಮೂಲಕ ಪ್ರತಿಯೊಬ್ಬರ ಮನೆಯಲ್ಲಿ ಹಾರಲಿರುವ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳು ಒಳಗೊಂಡ ರಾಷ್ಟ್ರಧ್ವಜದ ಪರಿಕಲ್ಪಕರು ಹಾಗೂ ಅದನ್ನು ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ(Pingali Venkaiah) ಅವರು.

ಪತ್ತಿ ವೆಂಕಯ್ಯ ಎಂದೂ ಕರೆಯಲ್ಪಡುವ ವೆಂಕಯ್ಯ ಅವರು ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ. ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.


ಆಗಸ್ಟ್ 2, 1876 ರಂದು ಆಂಧ್ರಪ್ರದೇಶದ(AndraPradesh) ಮಚಲಿಪಟ್ಟಣಂ ಬಳಿ ಜನಿಸಿದ ಪಿಂಗಳಿ ವೆಂಕಯ್ಯ ಅವರು ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು(British Army) ಎನ್ನುವುದು ವಿಶೇಷ. ಬ್ರಿಟಿಷ್ ಸೇನೆಗೆ ಸೇರಿದ್ದ ಪಿಂಗಳಿ ಅವರು ಬ್ರಿಟನ್ ಪರ ಹೋರಾಡಲು ತಮ್ಮ 19ನೇ ವಯಸ್ಸಿಗೆ ದಕ್ಷಿಣ ಆಫ್ರಿಕಾಕ್ಕೆ(South Africa) ತೆರಳಿದ್ದರು. ಅಲ್ಲಿ ಬ್ರಿಟಿಷ್ ಸೇನಾಧಿಕಾರಿ ಬ್ರಿಟನ್ ಧ್ವಜಕ್ಕೆ ವಂದಿಸುವಂತೆ ಒತ್ತಾಯಿಸುತ್ತಿದ್ದ.

ಇದು ಪಿಂಗಳಿ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗದೆ ದಕ್ಷಿಣ ಆಫ್ರಿಕ ಬಿಟ್ಟು ಭಾರತಕ್ಕೆ ವಾಪಸ್ಸಾದರು. ನಂತರ ಭಾರತಕ್ಕೊಂದು ಧ್ವಜ ರೂಪಿಸಬೇಕು ಎಂದು ತಮ್ಮ ಜೀವನವನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಮುಡಿಪಾಗಿಟ್ಟರು, ಉತ್ಸಾಹಭರಿತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಗಾಂಧೀ ವಿಚಾರವಾದಿಯಾಗಿದ್ದ ಇವರು, ಭಾಷಾಶಾಸ್ತ್ರಜ್ಞ, ಭೂವಿಜ್ಞಾನಿ ಮತ್ತು ಬರಹಗಾರರಾಗಿದ್ದರು. ಪಿಂಗಳಿ ವೆಂಕಯ್ಯ ಅವರು ಅತ್ಯಾಸಕ್ತಿಯ ಧ್ವಜ ಉತ್ಸಾಹಿಯಾಗಿದ್ದು, 1916 ರಲ್ಲಿ ‘ಭಾರತಕ್ಕಾಗಿ ರಾಷ್ಟ್ರೀಯ ಧ್ವಜ’ ಎಂಬ ಕಿರುಪುಸ್ತಕವನ್ನು ಸಹ ತಂದರು.

ಅದರಲ್ಲಿ ಅವರು 24 ಧ್ವಜ ವಿನ್ಯಾಸಗಳನ್ನು ಪ್ರಸ್ತುತ ಪಡಿಸಿದರು. 1921ರ ಏಪ್ರಿಲ್(April) 1 ರಂದು ವಿಜಯವಾಡದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(Congress) ಸಭೆಯಲ್ಲಿ ಮಹಾತ್ಮ ಗಾಂಧಿಯವರು(Mahatma Gandhi) ವೆಂಕಯ್ಯ ಅವರ ಧ್ವಜದ ವಿನ್ಯಾಸವನ್ನು ಅನುಮೋದಿಸಿದರು. ಆ ಧ್ವಜನವನ್ನೇ ಇಂದು ನಾವು ಹೆಮ್ಮೆಯಿಂದ ತಲೆ ಎತ್ತಿ ನೋಡಿ ಸೆಲ್ಯುಟ್ ಮಾಡುತ್ತಿರುವುದು.


ಪಿಂಗಳಿ ವೆಂಕಯ್ಯ ಅವರು ಜುಲೈ 4, 1963 ರಂದು ಕೊನೆಯುಸಿರೆಳೆದರು. ಅವರ ಸಾವಿನ ದಿನಗಳಲ್ಲಿಯೂ ಅವರು ತಮ್ಮ ದೇಹದ ಮೇಲೆ ಧ್ವಜವನ್ನು ಮುಚ್ಚಲು ಬಯಸಿದ ನಿಸ್ವಾರ್ಥ ಮಠಾಧೀಶರಾಗಿದ್ದರು. ನಮ್ಮ ಮಹಾನ್ ರಾಷ್ಟ್ರದ ಎಲ್ಲಾ ವಿಜಯಗಳಲ್ಲಿ ಅವರನ್ನು ಸ್ಮರಿಸಲಾಗುವುದು.


ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಾಗಿ 2009 ರಲ್ಲಿ ಪಿಂಗಳಿ ವೆಂಕಯ್ಯ ಅವರನ್ನು ಮರಣೋತ್ತರವಾಗಿ ಅಂಚೆ ಚೀಟಿಯೊಂದಿಗೆ ಗೌರವಿಸಲಾಯಿತು. 2014 ರಲ್ಲಿ ಅವರ ಹೆಸರನ್ನು ಭಾರತ ರತ್ನಕ್ಕೆ ಪ್ರಸ್ತಾಪಿಸಲಾಯಿತು. 2015 ರಲ್ಲಿ, ಆಗಿನ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಅವರು AIR ವಿಜಯವಾಡವನ್ನು ವೆಂಕಯ್ಯ ಅವರ ಹೆಸರಿನಿಂದ ಮರುನಾಮಕರಣ ಮಾಡಿದರು ಮತ್ತು ಅದರ ಆವರಣದಲ್ಲಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

Exit mobile version