ಕೋವಿಡ್ ಲಸಿಕೆಯ ಕೊರತೆಗೆ ಆಯಾ ರಾಜ್ಯಗಳೆ ನೇರ ಹೊಣೆ: ಕೇಂದ್ರ ಸಚಿವ ಹರ್ಷವರ್ಧನ್ ಗರಂ

ಹೊಸದಿಲ್ಲಿ, ಜು. 01: ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ಬಗ್ಗೆ ಚರ್ಚೆಯ ಜೊತೆಗೆ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿರುವ ಬೆನ್ನಲ್ಲೇ, ಲಸಿಕೆ ಕೊರತೆ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹರ್ಷವರ್ಧನ್, ಕೋವಿಡ್ ಲಸಿಕೆಗಳ ಕೊರತೆ ಇದ್ದಲ್ಲಿ ಆಯಾ ರಾಜ್ಯಗಳೇ ನೇರ ಹೊಣೆ ಎಂದು ಕಿಡಿಕಾರಿದ್ದಾರೆ.

ಕೊರೊನಾ ಲಸಿಕೆ ಕೊರತೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಯಾವುದೇ ರಾಜ್ಯದಲ್ಲಿ ಕೋವಿಡ್ ಲಸಿಕೆಗಳ ಕೊರತೆ ಇದ್ದಲ್ಲಿ ಆಯಾಯ ರಾಜ್ಯಗಳು ನೇರ ಹೊಣೆಯಾಗಲಿದೆ.

ಲಸಿಕೆ ವಿತರಣೆಯನ್ನು ಸೂಕ್ತ ಕ್ರಮದಲ್ಲಿ ಯೋಜಿಸಬೇಕೆಂದು ಕೋವಿಡ್-19 ಲಸಿಕೆಗಳ ಕುರಿತಾಗಿ ಕೆಲವು ರಾಜ್ಯಗಳ ನಾಯಕರು ನೀಡಿರುವ ಬೇಜವಾಬ್ದಾರಿ ಹೇಳಿಕೆಯ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಗುಡುಗಿದ್ದಾರೆ.

Exit mobile version