ಕಾಬೂಲ್, ಆ. 16: ಅಫ್ಘಾನಿಸ್ತಾನವನ್ನು ಇಗಾಗಲೇ ತಾಲಿಬಾನ್ ಉಗ್ರರು ವಶವಡಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಅಫ್ಘಾನ ಸರ್ಕಾರಕ್ಕೆ ಭಾರತ ಸಹಾಯ ಮಾಡಲು ಸೇನೆ ಕಳುಹಿಸಿದರೆ ಅದರ ಪರಿಸ್ಥಿತಿ ನೆಟ್ಟಗಿರೋದಿಲ್ಲ ಎಂದು ತಾಲಿಬಾನಿಗಳು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ತಾಲಿಬಾನ್ ವಕ್ತಾರ ಮಾತನಾಡಿ ಬೇರೆ ದೇಶಗಳು ಇಗಾಗಲೇ ಸೇನೆ ಕಳುಹಿಸಿ ಪರಿಣಾಮವನ್ನು ಎದುರಿಸಿದ್ದಾರೆ. ಭಾರತವು ಸೇನೆ ಕಳುಹಿಸಿದರೆ ಕೆಟ್ಟ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೂಡ ನೀಡಿದೆ. ಜೊತೆಗೆ ಭಾರತ ಅಣೆಕಟ್ಟು, ರಸ್ತೆ ಹೀಗೆ ಮುಂತಾದ ಮೂಲಸೌಕರ್ಯ ಯೋಜನೆಗಳನ್ನು ಕೈಗೊಂಡಿದೆ. ಇದುಉತ್ತಮ ವಾದ ಕಾರ್ಯ, ಆದರೆ ಸೇನೆ ಕಳುಹಿಸದಂತೆ ಪರೋಕ್ಷ ಎಚ್ಚರಿಕೆ ಕೂಡ ನೀಡದೆ. ಜೊತೆಗೆ ಬೇರೆ ದೇಶದ ರಾಜತಾಂತ್ರಿಕರಿಗೆ ನಮ್ಮಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಾಲಿಬಾನ್ ವಕ್ತಾರ ತಿಳಿಸಿದ್ದಾರೆ.