• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಕ್ಯಾನ್ಸರ್ ನಿಂದ ಸಂಪೂರ್ಣವಾಗಿ ಗುಣಮುಖರಾದ ಟಾಪ್ 3 ವ್ಯಕ್ತಿಗಳು ಇವರೇ ನೋಡಿ!

Mohan Shetty by Mohan Shetty
in ಪ್ರಮುಖ ಸುದ್ದಿ
cancer
0
SHARES
19
VIEWS
Share on FacebookShare on Twitter

ಸೋನಾಲಿ ಬೇಂದ್ರೆ:

Sonali

ಜುಲೈ 2018 ರಲ್ಲಿ ಸೋನಾಲಿ ಬೇಂದ್ರೆ ಅವರು ಟ್ವಿಟರ್‌ನಲ್ಲಿ ತನಗೆ ಮೆಟಾಸ್ಟಾಟಿಕ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಮತ್ತು ನ್ಯೂಯಾರ್ಕ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಬಹಿರಂಗಪಡಿಸಿದರು. ಮೆಟಾಸ್ಟಾಸಿಕ್ ಕ್ಯಾನ್ಸರ್ನಲ್ಲಿ, ಕ್ಯಾನ್ಸರ್ ಕೋಶಗಳು ದುಗ್ಧರಸ ವ್ಯವಸ್ಥೆ ಅಥವಾ ರಕ್ತಪ್ರವಾಹದ ಮೂಲಕ ದೇಹದ ಹೊಸ ಪ್ರದೇಶಗಳಿಗೆ ಹರಡುತ್ತವೆ. ಕ್ಯಾನ್ಸರ್ ದೇಹದ ಮೂಲ ಭಾಗಗಳಿಂದ ಇತರ ಸ್ಥಳಗಳಿಗೆ ಹರಡಿದಾಗ ಅದನ್ನು ಮೆಟಾಸ್ಟಾಟಿಕ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ.

Sonali Bendre

ನ್ಯೂಯಾರ್ಕ್‌ನಲ್ಲಿ ಸೋನಾಲಿಗೆ ಇದು ನಾಲ್ಕನೇ ಹಂತವಾಗಿದೆ ಮತ್ತು ಆಕೆ ಬದುಕುಳಿಯುವ ಯಾವ ಸಾಧ್ಯತೆ ಇಲ್ಲ. ಇದ್ದರೆ ಅದು ಶೇ.30% ಮಾತ್ರ ಎಂದು ಹೇಳಲಾಯಿತು. ಪಾಸಿಟಿವ್ ಆಗಿ ಇದ್ದ ಪರಿಣಾಮ ತಮ್ಮ ಕ್ಯಾನ್ಸರ್ ಚಿಕಿತ್ಸೆಯನ್ನು ನಿಭಾಯಿಸಲು ಸಹಾಯ ಮಾಡಿತು ಎಂದು ಸೋನಾಲಿ ಬೇಂದ್ರೆ ಅವರು ತಿಳಿಸಿದರು. ಕ್ಯಾನ್ಸರ್ ಎಂಬ ಮಾರಕ ಖಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖರಾಗಿ ಮತ್ತೆ ಹೊಸ ಜಗ್ಗತ್ತು ನೋಡಿದವರಲ್ಲಿ ಇವರು ಒಬ್ಬರು.

ಯುವರಾಜ್ ಸಿಂಗ್ :

Yuvraj

2011ರ ವಿಶ್ವಕಪ್ ವಿಜಯದ ನಂತರ ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಎಡ ಶ್ವಾಸಕೋಶದಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು
ಪತ್ತೆಯಾಯಿತು. ಇದು ಸೆಮಿನೋಮಾ ಶ್ವಾಸಕೋಶದ ಕ್ಯಾನ್ಸರ್ ಆಗಿತ್ತು. ಯುವರಾಜ್ ಸಿಂಗ್ ಅವರು US ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದು ಮಾರ್ಚ್ 2012 ರಲ್ಲಿ, ಕಿಮೋಥೆರಪಿಯ ಮೂರನೇ ಮತ್ತು ಅಂತಿಮ ಚಿಕಿತ್ಸೆಯನ್ನು ಪೂರ್ಣಗೊಳಿಸಿ ಸಂಪೂರ್ಣ ಗುಣಮುಕ್ತರಾಗಿ ಆಸ್ಪತ್ರೆಯಿಂದ ಹೊರಬಂದರು. ಯುವರಾಜ್ ಅವರೇ ಹೇಳುವಂತೆ, ಪಂದ್ಯಗಳ ಸಮಯದಲ್ಲಿ ಅವರು ತಮ್ಮ ಗಮನವನ್ನು ಆಟದ ಮೇಲೆ ಕೇಂದ್ರೀಕರಿಸಲು ಯೋಚಿಸುತ್ತಿದ್ದರಂತೆ. ಖಾಯಿಲೆಯ ಆರಂಭಿಕ ರೋಗಲಕ್ಷಣಗಳನ್ನು ನಿರ್ಲಕ್ಷಿಸಿದ್ದರಂತೆ. ಯುವಿ ಅವರು 2011ರ ಆರಂಭದಲ್ಲಿ ತೀವ್ರವಾದ ಉಸಿರಾಟದ ತೊಂದರೆಯನ್ನು ಅನುಭವಿಸಿದರು. ರಕ್ತವನ್ನು ಉಗುಳುವ ಮೂಲಕ ಕ್ಯಾನ್ಸರ್ ಇರುವುದನ್ನು ಖಚಿತಪಡಿಸಕೊಂಡಿದ್ದರು. ಇದು ಅವರ ಆಟದ ಜೀವನಕ್ಕೆ ಕೊಂಚ ಅಡ್ಡಿ ಪಡಿಸಿತು.

God

ಯುವರಾಜ್ ಸಿಂಗ್ ಅವರು ಹಲವು ಮಾಧ್ಯಮ ಸಂದರ್ಶನಗಳಲ್ಲಿ, ರೋಗಲಕ್ಷಣದ ಹಂತದಲ್ಲಿ ಕ್ಯಾನ್ಸರ್ ಅನ್ನು ಸ್ವೀಕರಿಸುವುದು, ರೋಗನಿರ್ಣಯವನ್ನು ಒಪ್ಪಿಕೊಳ್ಳುವುದು, ಕ್ಯಾನ್ಸರ್ ವಿರುದ್ಧ ಹೋರಾಡಲು ಸರಿಯಾದ ಮಾರ್ಗವನ್ನು ಅನುಸರಿಸುವುದು ಮತ್ತು ಚಿಕಿತ್ಸೆಯ ಉದ್ದಕ್ಕೂ ಆಶಾವಾದಿಯಾಗಿರುವುದರ ಪ್ರಾಮುಖ್ಯತೆಯನ್ನು ಒತ್ತಿಹೇಳಿದ್ದಾರೆ. ಒಮ್ಮೆ ನಾನು ಕ್ಯಾನ್ಸರ್ ಅನ್ನು ಒಪ್ಪಿಕೊಂಡರೆ ಮಾತ್ರ ನಾನು ಅದನ್ನು ಸೋಲಿಸಲು ಸಾಧ್ಯವಾಗುವುದು. ಜೀವನವು ಕುಸಿದಾಗ ನಿಮಗೆ ಎದ್ದೇಳಲು ಆಯ್ಕೆಯಿರುತ್ತದೆ ಎಂಬ ಆಶಾವಾದಿ ಮಾತುಗಳನ್ನು ಹೇಳಿ ಕ್ಯಾನ್ಸರ್ ಪೀಡಿತರಿಗೆ ಹಾಗು ಕ್ಯಾನ್ಸರ್ ಪೀಡಿತ ಕುಟುಂಬಸ್ತರಿಗೆ ಧೈರ್ಯತುಂಬಿದರು.

ಸದ್ಗುರು ಜಗ್ಗಿ ವಾಸುದೇವ:

Sadhguru Jaggi Vasudev ji - IYA Governing Council


ಸದ್ಗುರು ಜಗ್ಗಿ ವಾಸುದೇವ ಅವರು ಕೂಡ ಕ್ಯಾನ್ಸರ್ ಎಂಬ ಮಾರಕ ಖಾಯಿಲೆಗೆ ಗುರಿಯಾಗಿ ಸಂಪೂರ್ಣವಾಗಿ ಗುಣಮುಖರಾದವರೆ. ಸದ್ಗುರು ಜಗ್ಗಿ ವಾಸುದೇವ ಅವರು ಹೇಳುವ ಪ್ರಕಾರ ಆರೋಗ್ಯವು ಆಧ್ಯಾತ್ಮಿಕತೆಯ ಅಡ್ಡ ಪರಿಣಾಮವಾಗಿದೆ. ನಿಮ್ಮೊಳಗೆ ನೀವು ಸಂಪೂರ್ಣರಾಗಿದ್ದರೆ, ಆರೋಗ್ಯವಾಗಿರುವುದು ಸಹಜ.
ಯೋಗದ ದೃಷ್ಟಿಕೋನದಿಂದ, ವ್ಯವಸ್ಥೆಯು ಒಳಗಿನಿಂದ ಉತ್ಪಾದಿಸುವ ಕ್ಯಾನ್ಸರ್ ಮತ್ತು ಇತರ ಅಡಚಣೆಗಳು ಅಥವಾ ರೋಗಗಳು ಶಕ್ತಿಯ ದೇಹದಲ್ಲಿನ ಅಸಮತೋಲನದಿಂದ ಉಂಟಾಗುತ್ತವೆ ಎಂದು ಹೇಳಿದರು. ಪ್ರತಿಯೊಬ್ಬರ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಇರುತ್ತವೆ. ಆದರೆ ಕೆಲವು ಕ್ಯಾನ್ಸರ್ ಕೋಶಗಳು ಅಸ್ತವ್ಯಸ್ತಗೊಂಡಿರುವುದು ನಿಮ್ಮ ಜೀವನ ಅಥವಾ ಆರೋಗ್ಯದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ.

  • ರಮಿತ ಕಾಮನಾಯಕನ ಹಳ್ಳಿ
Tags: cancercelebrityHealthsadgurusonalibendrestruggletypesyuvarajsingh

Related News

ಬೆಂಗಳೂರು ವಕೀಲರ ಸಂಘದಿಂದ ವಿಜಯಲಕ್ಷ್ಮಿ ಶಿಬರೂರು ಅವರಿಗೆ ಗೌರವಾರ್ಪಣೆ
ಪ್ರಮುಖ ಸುದ್ದಿ

ಬೆಂಗಳೂರು ವಕೀಲರ ಸಂಘದಿಂದ ವಿಜಯಲಕ್ಷ್ಮಿ ಶಿಬರೂರು ಅವರಿಗೆ ಗೌರವಾರ್ಪಣೆ

April 1, 2023
ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ಮಾಡಬೇಡಿ ಎಚ್ಚರ! ಕಲ್ಲು ಹೊಡೆದ್ರೆ 5 ವರ್ಷ ಜೈಲು
ದೇಶ-ವಿದೇಶ

ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ಮಾಡಬೇಡಿ ಎಚ್ಚರ! ಕಲ್ಲು ಹೊಡೆದ್ರೆ 5 ವರ್ಷ ಜೈಲು

March 31, 2023
ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.
ಆರೋಗ್ಯ

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.

March 31, 2023
10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!
ಪ್ರಮುಖ ಸುದ್ದಿ

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!

March 31, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.