ತುಂಬೆ ಗಿಡದ ಆರೋಗ್ಯಕರ ಲಾಭಗಳು ಇಲ್ಲಿವೆ ನೋಡಿ!

health

ತುಂಬೆ ಗಿಡವು ಆಯುರ್ವೇದ ಅಂಶಗಳನ್ನು ಹೊಂದಿದ್ದು, ಇದರ ಆರೋಗ್ಯ ಪ್ರಯೋಜನಗಳು ಬಹಳಾನೇ ಇದೆ.

ಆದರೆ ಇದರ ಸಂತತಿ ಇತ್ತೀಚಿನ ದಿನಗಳಲ್ಲಿ ನಾಶವಾಗ್ತಿದೆ. ಹಳ್ಳಿಯ ಜನರು ಸಾಮಾನ್ಯ ಶೀತ, ಜ್ವರ, ಕೆಮ್ಮು, ಕಫಕ್ಕೆ ತುಂಬೆಯ ರಸವನ್ನೇ ಉಪಯೋಗಿಸಿ ಸಣ್ಣಪುಟ್ಟ ಖಾಯಿಲೆಗಳನ್ನು ದೂರ ಮಾಡಿಕೊಳ್ಳುತ್ತಿದ್ರು. ಈ ತುಂಬೆ ಗಿಡದ ಪ್ರತಿ ಅಂಶವು ಕೂಡ ಖಾಯಿಲೆಗಳನ್ನು ಗುಣಪಡಿಸುವ ರಾಮಬಾಣವಾಗಿದೆ.

ತುಂಬೆ ಗಿಡದಿಂದ ದೊರೆಯುವ ಆರೋಗ್ಯಕರ ಲಾಭಗಳೇನು? :

ಸಾಮಾನ್ಯ, ಶೀತ, ಕೆಮ್ಮು, ಜ್ವರ, ಕಫ ಕಡಿಮೆಯಾಗುತ್ತದೆ. ತುಂಬೆಯ ರಸವನ್ನು ರುಬ್ಬಿ ಅದಕ್ಕೆ ಸ್ವಲ್ಪ ಉಪ್ಪನ್ನು ಬೆರೆಸಿ ಕುಡಿಯುವುದರಿಂದ
ಕೆಮ್ಮು, ಶೀತ, ಕಫ ಕಡಿಮೆಯಾಗುತ್ತದೆ. ಅದರಲ್ಲೂ ಮಕ್ಕಳಿಗೆ ಜೇನುತುಪ್ಪದಲ್ಲಿ ಸ್ವಲ್ಪ ತುಂಬೆರಸ ಹಾಕಿ ಕುಡಿಸಿದರೆ ಮಕ್ಕಳಿಗೆ ಗಂಟಲು ಶುದ್ದಿಯಾಗುತ್ತದೆ.

ಚರ್ಮದ ಕಾಯಿಲೆಗಳ ನಿವಾರಣೆ : ಕೆಲವರಿಗೆ ಮೈಯೆಲ್ಲ ತುರಿಕೆ ಇರುತ್ತದೆ. ಅಂಥವರು ತುಂಬೆಯನ್ನು ಜಜ್ಜಿ ಅದರ ರಸವನ್ನು ತುರಿಕೆಯ ಜಾಗಕ್ಕೆ ಹಚ್ಚುವುದರಿಂದ ತುರಿಕೆ ಸಮಸ್ಯೆ ನಿವಾರಣೆಯಾಗುತ್ತದೆ.

ದೇಹದ ಜೀರ್ಣ ಪ್ರಕ್ರಿಯೆ ಸುಲಭವಾಗುತ್ತದೆ : ತುಂಬೆಗಿಡದ ರಸವನ್ನು ಪ್ರತಿನಿತ್ಯ ಸೇವಿಸಿದರೆ ಜೀರ್ಣಕ್ರಿಯೆ ಸುಲಭವಾಗುವ ಮೂಲಕ ದೇಹವು ನಿರಾಳವಾಗುತ್ತದೆ.

ಕಣ್ಣಿನ ಸಮಸ್ಯೆ ನಿವಾರಣೆ : ಕಣ್ಣಿನ ಉರಿ, ಕಣ್ಣು ನೋವು, ಇರುವವರು ಇದರ ರಸವನ್ನು ಉಗುರು ಬೆಚ್ಚನೆಯ ನೀರಿನೊಂದಿಗೆ ಬೇರೆಸಿ, ಇದರ ರಸವನ್ನು ಕಣ್ಣಿನ ಸುತ್ತ ಹಚ್ಚುವುದರಿಂದ ಕಣ್ಣಿನ ಉರಿ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ಕಣ್ಣು ಕೂಡ ಆರೋಗ್ಯತವಾಗಿರುತ್ತದೆ.

ಮದುಮೇಹ ನಿವಾರಣೆ : ತುಂಬೆಯನ್ನು ಜಜ್ಜಿ ಆ ರಸಕ್ಕೆ ಸ್ವಲ್ಪ ಕಾಳುಮೆಣಸು , ಜೀರಿಗೆ, ಉಪ್ಪನ್ನು ಬೆರೆಸಿ ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮದುಮೇಹ ನಿವಾರಣೆ ಮಾಡಬಹುದು.

ಕೀಲುನೋವು ಸಮಸ್ಯೆಗೆ ಉತ್ತಮ : ತುಂಬೆರಸ ಮತ್ತು ಎಳ್ಳೆಣ್ಣೆಯನ್ನು ಕುದಿಸಿ ಅದನ್ನು ಸೋಸಿ ಎಣ್ಣೆ ತೆಗೆದು ಅದಕ್ಕೆ ಸ್ವಲ್ಪ ಅರಿಶಿಣ ಮತ್ತು ಕರ್ಪೂರ ಮಿಕ್ಸ್ ಮಾಡಿ ಅದನ್ನು ಒಂದು ಬಾಕ್ಸ್ ನಲ್ಲಿ ಶೇಖರಣೆ ಮಾಡಿ ಕಾಲಿಗೆ ಹಚ್ಚುವುದರಿಂದ ಕೀಲು ನೋವು ಮಾಯವಾಗುತ್ತದೆ.

ರೋಗ ನಿರೋದಕ ಶಕ್ತಿ ಹೆಚ್ಚುತ್ತದೆ : ಮನುಷ್ಯನ ದೇಹಕ್ಕೆ ಯಾವಾಗ ಬೇಕಾದರೂ ರೋಗ ಆವರಿಸಬಹುದು. ಹೀಗಾಗಿ ಪ್ರತಿನಿತ್ಯವೂ ತುಂಬೆಯ ಕಷಾಯ ಕುಡಿಯುವುದರಿಂದ ದೇಹದಲ್ಲಿ ರೋಗನಿರೋದಕ ಶಕ್ತಿ ಹೆಚ್ಚಾಗುತ್ತದೆ. ಜ್ವರ ಕಡಿಮೆಯಾಗುತ್ತದೆ.

Exit mobile version