ನಿಮ್ಮನ್ನು ಸಿಎಂ ಮಾಡ್ತೀವಿ 2500 ಕೋಟಿ ರೆಡಿ ಮಾಡಿ ಇಡಿ ಅಂತ ಹೇಳಿದ್ರು : ಬಸವನಗೌಡ ಯತ್ನಾಳ್!

basavana gowda

ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ವಾದ-ವಿವಾದಗಳ ನಡುವೆ ತಮ್ಮದೊಂದು ಹೊಸ ಹೇಳಿಕೆ ನೀಡುವ ಮೂಲಕ ಬಿಜೆಪಿ ಶಾಸಕ(BJP MLA) ಬಸವನಗೌಡ ಪಾಟೀಲ್ ಯತ್ನಾಳ್(Basavanagowda Patil Yathnal) ಮತ್ತೊಂದು ಸ್ಪೋಟಕ ವಿವಾದವನ್ನು ಹುಟ್ಟುಹಾಕಿದ್ದಾರೆ.

ದೆಹಲಿಯಿಂದ(Delhi) ನಮ್ಮ ರಾಜ್ಯಕ್ಕೆ ಬಂದ ಕೆಲ ವ್ಯಕ್ತಿಗಳು ನಾವು ನಿಮ್ಮನ್ನು ಮುಖ್ಯಮಂತ್ರಿ(Chiefminister) ಮಾಡ್ತೀವಿ, ಆದ್ರೆ ನೀವು 2500 ಕೋಟಿ ರೂ. ರೆಡಿ ಮಾಡಿ ಎಂದು ಅಂತ ಹೇಳಿದ್ದರು ಎಂದು ಬಸವನಗೌಡ ಯತ್ನಾಳ್ ಹೇಳಿದ್ದಾರೆ. ರಾಮದುರ್ಗ ಪಟ್ಟಣದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರೂ ಮೋಸ ಹೋಗಬೇಡಿ ದಯವಿಟ್ಟು!

ನನಗೆ ದೆಹಲಿಗೆ ಹೋಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಬಿಜೆಪಿ ರಾಷ್ಟ್ರಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿಸ್ತಿವಿ ಅಂತೆಲ್ಲಾ ಹೇಳಿದ್ರು,. ನನ್ನ ಬಳಿ ಬಂದು ನಿಮ್ಮನ್ನು ಮುಖ್ಯಮಂತ್ರಿ ಮಾಡಿಸ್ತೇವೆ 2500 ಕೋಟಿ ರೆಡಿ ಮಾಡಿ ಎಂದು ಹೇಳುತ್ತಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸುವ ಮುಖೇನ ವಾಗ್ದಾಳಿ ನಡೆಸಿದ್ದಾರೆ. ಅವರೆಲ್ಲಾ ನನಗೆ 2500 ಕೋಡಿ ರೆಡಿ ಮಾಡಿ ಇಡಿ ಎಂದು ಹೇಳಿದಾಗ,

ನಾನು 2500 ಕೋಟಿ ಅಂದ್ರೆ ಏನು ಎಂಬುದು ತಿಳಿದಿದೆಯಾ? ಅದನ್ನು ಕೊಠಡಿಯಲ್ಲಿ ಇಡೋದಾ? ಇಲ್ಲ ಗೋದಾಮಿನಲ್ಲಿ ಶೇಖರಿಸದೋ? ಎಂದು ಪ್ರಶ್ನೆ ಮಾಡಿದೆ ಎಂದು ಹೇಳಿದರು.

Exit mobile version