ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ, ನಾಯಕತ್ವ ಬದಲಾಗಬೇಕು: ವಿಶ್ವನಾಥ್

ಬೆಂಗಳೂರು,ಜೂ.17: ರಾಜ್ಯ ಬಿಜೆಪಿಯಲ್ಲಿ ಎದುರಾಗಿರುವ ನಾಯಕತ್ವ ಬದಲಾವಣೆ ಕೂಗಿಗೆ ದನಿಗೂಡಿಸಿರುವ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಯಸ್ಸಾಗಿರುವ ಕಾರಣ ನಾಯಕತ್ವ ಬದಲಾಗಬೇಕು ಎಂದು ಬಹಿರಂಗವಾಗಿಯೇ ಬಂಡಾಯದ ಬಾವುಟ ಹಾರಿಸಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಯಡಿಯೂರಪ್ಪ ಪರ ಬ್ಯಾಟ್ ಬೀಸುತ್ತಿರುವ ಮಠಾಧೀಶರು ಬಸವಣ್ಣನವರ ತತ್ವ ಮರೆಯಬಾರದು ಎಂದು ಸಲಹೆ ನೀಡುವ ಮೂಲಕ ಮಠಾಧಿಪತಿಗಳು ರಾಜಕೀಯಕ್ಕೆ ಎಂಟ್ರಿ ಆಗುವುದು ತರವಲ್ಲ ಎಂದು ಕಿಡಿಕಾರಿದ್ದಾರೆ.

ಹೊಸ ಮುಖ್ಯಮಂತ್ರಿ ಆಯ್ಕೆ ಮಾಡಿದ ನಂತರ ಯಡಿಯೂರಪ್ಪ ಅವರು ಮಾರ್ಗದರ್ಶನ ನೀಡಲಿ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೆ ಪರ್ಯಾಯ ನಾಯಕತ್ವವೆ ಇಲ್ಲ ಎಂಬುದು ಅರ್ಥಹೀನ ಎಂದು ಆಕ್ರೋಶದ ನುಡಿಗಳ್ನಾಡಿದ ಅವರು, ಈ ಎಲ್ಲಾ ವಿಚಾರದ ಬಗ್ಗೆ ಅರುಣ್ ಸಿಂಗ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

Exit mobile version