ಮಥುರಾ, ಅ. 16: ರಾಮ ಜನ್ಮಭೂಮಿ ವಿವಾದ ಅಂತ್ಯಗೊಳ್ಳುತ್ತಿದ್ದಂತೆಯೇ ಕೃಷ್ಣ ಜನ್ಮಭೂಮಿ ವಿಚಾರ ಗರಿಗೆದರಿದ್ದು, ಇದೀಗ ಚುರುಕು ಪಡೆದುಕೊಂಡಿದೆ. ಕೃಷ್ಣ ಜನ್ಮಭೂಮಿ ಬಳಿ ನಿರ್ಮಾಣ ಆಗಿರುವ ಮಸೀದಿ ತೆರವಿಗೆ ಕೋರಿ ಸಲ್ಲಿಸಿರುವ ಅರ್ಜಿ ಸ್ಥಳೀಯ ನ್ಯಾಯಾಲಯದಲ್ಲಿ ಸ್ವೀಕೃತಗೊಂಡಿದೆ.
ಮಥುರಾದ ಕೃಷ್ಣ ಜನ್ಮಭೂಮಿ ಬಳಿ ಇರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಅಕ್ಟೋಬರ್ನಲ್ಲಿ ಅಲ್ಲಿನ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಆ ಅರ್ಜಿ ತಿರಸ್ಕೃತವಾಗಿತ್ತು. ಇದೀಗ ಸಲ್ಲಿಕೆ ಆಗಿರುವ ಹೊಸ ಅರ್ಜಿ ಸಂಬಂಧ ಜಿಲ್ಲಾ ನ್ಯಾಯಾಧೀಶ ಸಾಧನಾ ರಾಣಿ ಠಾಕೂರ್ ನವೆಂಬರ್ 18ಕ್ಕೆ ಮುಂದಿನ ವಿಚಾರಣೆ ನಿಗದಿಗೊಳಿಸಿದ್ದಾರೆ.