Bengaluru: ಸದ್ಯ ರಾಜಕೀಯ ಸನ್ನಿವೇಶ ಕರ್ನಾಟಕದಲ್ಲಿ ಬದಲಾಗಿದೆ ಇದೀಗ ಈ ಸಂದರ್ಭದಲ್ಲಿ ಜೆಡಿಎಸ್ (about BJP JDS alliance) ಮತ್ತು ಬಿಜೆಪಿ(BJP) ಪಕ್ಷಗಳು ಮೈತ್ರಿ ಮಾಡಿಕೊಳ್ಳಲಿವೆಯೇ ಎಂಬ
ಕುತೂಹಲ ಹೆಚ್ಚಾಗಿದೆ. ಈ ಮಧ್ಯೆ ಸಂಸದೀಯ ಮಂಡಳಿ ಸದಸ್ಯರೂ ಆಗಿರುವಮತ್ತು ಬಿಜೆಪಿ ಹಿರಿಯ ನಾಯಕ, ಬಿಎಸ್ ಯಡಿಯೂರಪ್ಪ (BS Yediyurappa) ಅವರು, ತಮ್ಮ ಪಕ್ಷ ಮತ್ತು ಜೆಡಿಎಸ್
ಜತೆಯಾಗಿ ಕಾಂಗ್ರೆಸ್ (Congress) ಮತ್ತು ಅದರ ಸರ್ಕಾರದ ವಿರುದ್ಧ ಆಡಳಿತಾರೂಢ ಹೋರಾಡಲಿವೆ ಎಂದು (about BJP JDS alliance) ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳನ್ನು (Media) ಉದ್ದೇಶಿಸಿ ಮಾತನಾಡಿದ ಅವರು, ಹೆಚ್ ಡಿ ಕುಮಾರಸ್ವಾಮಿ (H.D Kumaraswamy) ಅವರು ಭ್ರಷ್ಟಾಚಾರದ ಆರೋಪ ಹೊತ್ತಿರುವ ನೂತನ ಕಾಂಗ್ರೇಸ್ ಸರ್ಕಾರದ
ಮೇಲೆ ವಾಗ್ದಾಳಿ ನಡೆಸಿರುವುದನ್ನು ಬೆಂಬಲಿಸಿದರು. ಅಧಿಕಾರಿಗಳ ವರ್ಗಾವಣೆಗೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಲಂಚ ವಸೂಲಿ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸುತ್ತಿದ್ದಾರೆ ಅಷ್ಟೇ ಅಲ್ಲದೆ
ಭ್ರಷ್ಟಾಚಾರದ ಆರೋಪವನ್ನು ಸಿದ್ದರಾಮಯ್ಯನವರ (Siddaramaiah) ಪುತ್ರ ಡಾ.ಯತೀಂದ್ರ (Dr Yatheendra) ವಿರುದ್ಧ ಹೊರಿಸಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ಹೆಚ್ಡಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ ಅವರು ಹೇಳಿದ್ದೆಲ್ಲ ಸತ್ಯ ಮತ್ತು ಮುಂದೆಯೂ ನಾವು ಒಗ್ಗಟ್ಟಾಗಿ ಹೋರಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಯಡಿಯೂರಪ್ಪ ಅವರ
ಮೈತ್ರಿ ಕುರಿತ ಸುಳಿವಿಗೆ ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿ ಬಹುಶಃ ಇದು ಲೋಕಸಭೆ ಚುನಾವಣೆಯ (Loksabha Election) ನಂತರ ಅಥವಾ ವರ್ಷಾಂತ್ಯದಲ್ಲಿ ಆಗಬಹುದು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕುಮಾರಸ್ವಾಮಿ ಒಂದೆರಡು ದಿನಗಳ ಹಿಂದೆ ರಾಜ್ಯದಲ್ಲಿ ಈಗಾಗಲೇ ಜಿಎಸ್ಟಿ (GST) ಇದೆ ಮತ್ತು ಇದೀಗ ಇದರ ಜೊತೆಗೆ ಜತೆಗೆ ವೈಎಸ್ಟಿಯೂ (YST) (ಯತೀಂದ್ರ ವಿಶೇಷ ತೆರಿಗೆ) ಇದೆ ಎಂದು ಹೇಳಿದ್ದರು.
ಕೆಎಸ್ಆರ್ಟಿಸಿ (KSRTC) ಮತ್ತು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ (Sub Register Office) ವರ್ಗಾವಣೆಗಾಗಿ ಸಿಂಡಿಕೇಟ್ಗಳಿವೆ ಎಂದಿದ್ದರು. ಇದೀಗ ಕುಮಾರಸ್ವಾಮಿ ಆರೋಪವನ್ನು ಬಿಜೆಪಿಯ ಫೈರ್ಬ್ರಾಂಡ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagaowda Patil Yatnal) ಕೂಡ ಬೆಂಬಲಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಇತ್ತೀಚಿನ ಚುನಾವಣೆಯಲ್ಲಿ (Election) ತಮ್ಮ ಪಕ್ಷದ ಪತನದ ನಂತರ, ವಿಶೇಷವಾಗಿ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ.ಕುಮಾರಸ್ವಾಮಿ ಅವರ ತಂದೆ ಮತ್ತು
ಪಕ್ಷದ ವರಿಷ್ಠ ಹೆಚ್ಡಿ ದೇವೇಗೌಡ (H.D Deve Gowda) ಅವರು ಬಿಜೆಪಿಯೇತರ 19 ಪಕ್ಷಗಳು ಬಹಿಷ್ಕರಿಸಿರುವ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಈ ಮೂಲಕವಾಗಿ
ಮೂಲಕ ಬಿಜೆಪಿಗೆ ಹತ್ತಿರವಾಗುವ ಮೊದಲ ಸುಳಿವನ್ನು ನೀಡಿದ್ದರು.
ರಶ್ಮಿತಾ ಅನೀಶ್