Bangalore : ಬೆಂಗಳೂರಿನಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಭಾರಿ (Bangalore cyber scam) ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಈ ವರ್ಷ ನವೆಂಬರ್ ಅಂತ್ಯಕ್ಕೆ
ಬರೋಬ್ಬರಿ 16,300 ಸೈಬರ್ ವಂಚನೆ ಕೇಸ್ಗಳು ದಾಖಲಾಗಿದ್ದು, 2022ರಲ್ಲಿ 9,940 ಕೇಸ್ ಹಾಗೂ 2021ರಲ್ಲಿ 6,423 ಕೇಸ್ ದಾಖಲಾಗಿದ್ದವು. ಆದರೆ ಸುಲಭವಾಗಿ ಹಣ ಸಂಪಾದನೆ
ಮಾಡಬೇಕು ಎನ್ನುವ ಜನರ ಆಸೆಯನ್ನೇ (Bangalore cyber scam) ವಂಚಕರು ಪ್ರಮುಖವಾಗಿ ಅಸ್ತ್ರವನ್ನಾಗಿಸಿಕೊಂಡಿದ್ದಾರೆ.
ಇತ್ತೀಚೆಗೆ ಆನ್ಲೈನ್ ವಂಚಕರು ಹೆಚ್ಚಾಗಿದ್ದು, ಅದೇ ರೀತಿ ಮೂವತ್ತಾರು ವರ್ಷದ ಗೃಹಿಣಿ ಪ್ರಮೀಳಾ (ಹೆಸರು ಬದಲಾಯಿಸಲಾಗಿದೆ) ಅವರ ವಾಟ್ಸ್ಆ್ಯಪ್ ಸಂಖ್ಯೆಗೆ ಅಪರಿಚಿತರ ನಂಬರ್ನಿಂದ
ಪಾರ್ಟ್ ಟೈಂ ಕೆಲಸ ಕೊಡುವ ಸಂದೇಶ ಬಂದಿತ್ತು. ಮನೆಯಲ್ಲಿಯೇ ಹಣ ಸಂಪಾದಿಸಬಹುದು ಎಂದು ಊಹಿಸಿದ ಪ್ರಮೀಳಾ, ಸಂದೇಶದ ಲಿಂಕ್ ಕ್ಲಿಕ್ ಮಾಡಿದ್ದೆ ತಡ. ಇಷ್ಟಕ್ಕೇ ಕಾದು ಕುಳಿತಿದ್ದ
ಸೈಬರ್ ವಂಚಕರು ಕೆಲವೇ ನಿಮಿಷಗಳಲ್ಲಿ ಪ್ರಮೀಳಾ ಅವರ ಬ್ಯಾಂಕ್ ಖಾತೆಯಲ್ಲಿದ್ದ ಎರಡು ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡಿದ್ದರು.
ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡ ಬಳಿಕವಷ್ಟೇ ತಾನು ಮೋಸ ಹೋಗಿರುವ ಬಗ್ಗೆ ಎಚ್ಚೆತ್ತುಕೊಂಡ ಪ್ರಮೀಳಾ, ದಿಕ್ಕು ತೋಚದೆ ಕಂಗಾಲಾಗಿ ಉತ್ತರ ವಿಭಾಗದ ಸೈಬರ್ ಪೊಲೀಸರಿಗೆ ದೂರು
ನೀಡಿದ್ದಾರೆ. ಇದು ಪ್ರಮೀಳಾ ಒಬ್ಬರ ಕಥೆಯಲ್ಲ ನಗರದಲ್ಲಿ ನಿತ್ಯ ಹತ್ತಾರು ಮಂದಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಪರಿಣಾಮ ರಾಜಧಾನಿಯಲ್ಲಿ ಈ
ವರ್ಷ ನವೆಂಬರ್ ಅಂತ್ಯಕ್ಕೆ ಬರೋಬ್ಬರಿ 16,300 ಸೈಬರ್ ವಂಚನೆ ಕೇಸ್ಗಳು ದಾಖಲಾಗಿವೆ. 2021ರಲ್ಲಿ 6,423 ಕೇಸ್ ದಾಖಲಾಗಿತ್ತು. 2022ರಲ್ಲಿ 9,940 ಕೇಸ್ ಹಾಗೂ ಕಳೆದ ವರ್ಷಗಳಿಗೆ
ಹೋಲಿಸಿದಲ್ಲಿ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿವೆ.
ಕಮಿಷನ್ ಆಸೆ, ಭಯವೇ ವಂಚಕರ ಬಂಡವಾಳ:
ಸುಲಭವಾಗಿ ಹಣ ಸಂಪಾದನೆ ಮಾಡಬೇಕು ಎನ್ನುವ ಜನರ ಆಸೆಯನ್ನೇ ವಂಚಕರು ಅಸ್ತ್ರವನ್ನಾಗಿಸಿಕೊಂಡು. ಮನೆಯಲ್ಲಿಯೇ ಕುಳಿತು ಹೋಟೆಲ್, ರೆಸ್ಟೋರೆಂಟ್, ಪ್ರವಾಸಿ ತಾಣಗಳಿಗೆ ರೇಟಿಂಗ್
ನೀಡಿದರೆ ಕಮಿಷನ್ ಸಿಗುವ ಭರವಸೆಯಲ್ಲಿ ಹಣ ದೋಚುತ್ತಿದ್ದಾರೆ,ಆದ್ದರಿಂದ ಲಾಭ ಸಂಪಾದನೆ ಅವಕಾಶ, ವಿದೇಶದಿಂದ ದುಬಾರಿ ಮೌಲ್ಯದ ಉಡುಗೊರೆ, ಹಣಕಾಸು ನೆರವಿನ ಬಗ್ಗೆ ಆಸೆಗಳನ್ನು
ಭಿತ್ತಿ ಜನರ ಅಕೌಂಟ್ಗಳಲ್ಲಿರುವ ಹಣವನ್ನು ವಂಚಕರು ದೋಚುತ್ತಿದ್ದಾರೆ ಎಂದು ಕ್ರಿಪ್ಟೋ ಕರೆನ್ಸಿಯಲ್ಲಿ ಕೋಟ್ಯಂತರ ರೊಪಾಯಿಯನ್ನು.ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೈಬರ್ ಲೂಟಿಕೋರರು:
ಹೊರರಾಜ್ಯ, ವಿದೇಶಗಳಿಗೆ ಕೊರಿಯರ್ ಕಳುಹಿಸುವವರನ್ನು ಟಾರ್ಗೆಟ್ ಮಾಡಿರುವ ವಂಚಕರು ಕಾಲಕ್ಕೆ ತಕ್ಕಂತೆ ವಂಚನೆ ಸ್ವರೂಪವನ್ನು ಬದಲಿಸಿರುವ ಸೈಬರ್ ಲೂಟಿಕೋರರು,ಮುಂಬಯಿ
ಸೈಬರ್ ಪೊಲೀಸರ ಹೆಸರು ದುರ್ಬಳಕೆ ಮಾಡಿಕೊಂಡು ಯಾರದ್ದೋ ಹೆಸರಿನಲ್ಲಿ ಬುಕ್ ಆಗಿರುವ ಕೊರಿಯರ್ನಲ್ಲಿ ಡ್ರಗ್ಸ್ ಇದೆ.ಅಂತ ಹೇಳಿ ಜತೆಗೆ, ಹಣವಿದೆ.ಅಂತ ತಿಳಿಸಿ ಉಗ್ರಗಾಮಿಗಳು ಹೆಸರಿನಲ್ಲಿ
ಸಿಮ್ ಖರೀದಿಸಿ ಬಳಕೆ ಮಾಡುತ್ತಿದ್ದಾರೆ’ ಎಂದು ಹೆದರಿಸಿ ಕೋಟ್ಯಂತರ ರೂಪಾಯಿ .ವರ್ಗಾಯಿಸಿಕೊಳ್ಳುತ್ತಿದ್ದು. ಇತ್ತೀಚೆಗೆ ಉತ್ತರ ವಿಭಾಗದ ಸೈಬರ್ ಪೊಲೀಸರು ಇದೇ ಮಾದರಿಯಲ್ಲಿ ವಂಚಿಸುತ್ತಿದ್ದು
ಎಂಟು ಮಂದಿಯನ್ನು ಬಂಧಿಸಿದಾಗ ಅದೇ ಆರೋಪಿಗಳು ಮುಂಬಯಿ ಪೊಲೀಸರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಅಧಿಕಾರಿಗಾಳೆ ಬಯಲುಮಾಡಿದ್ದಾರೆ.
ಎಐ ಧ್ವನಿ ಮೂಲಕವೂ ಗಾಳ !
ಯಾವುದೇ ವ್ಯಕ್ತಿಯ ಧ್ವನಿಯನ್ನು ಎಐನಿಂದ ಅನುಕರಿಸಿ ಅವರ ಪರಿಚಯಸ್ಥರಿಗೆ ವಾಟ್ಸ್ಆ್ಯಪ್ನಲ್ಲಿ ಕರೆ ಮಾಡಿ ವಂಚಕರು ಮಾತನಾಡಿ ತುರ್ತು ಸಂದರ್ಭದ ನೆಪವೊಡ್ಡಿ ಹಣ ಕೇಳುತ್ತಿದ್ದು.ಆರ್ಟಿಫಿಶಿಯಲ್
ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನವನ್ನು ವಂಚನೆಗೆ ಬಳಕೆ ಮಾಡಿಕೊಂಳ್ಳುತ್ತಿದ್ದಾರೆ.ಜನರು ನಮ್ಮವರೇ ಮಾತನಾಡುತ್ತಿದ್ದಾರೆ ಎಂದು ಭಾವಿಸಿ ಹಲವರು ಹಣ ವರ್ಗಾವಣೆ ಮಾಡಿ ಮೋಸ ಹೋಗುತ್ತಿದ್ದಾರೆ.
ಈ ನಿಟ್ಟಿನಲ್ಲಿ ಯಾರೇ ವಾಟ್ಸ್ಆ್ಯಪ್ ಕರೆ ಮೂಲಕ ಹಣ ಕೇಳಿದರೆ ತಕ್ಶಣಕ್ಕೆ ಹಣ ನೀಡಬಾರದು. ಅನುಮಾನ ಬಂದ ತಕ್ಷಣ ಕರೆಯನ್ನು ಸ್ಥಗಿತಗೊಳಿಸಿ ಪುನಃ ಅದೇ ನಂಬರ್ಗೆ ಕರೆ ಮಾಡಿದಾಗ ಅದು
ಎಐ ತಂತ್ರಜ್ಞಾನದ ಕ್ಲೋನಿಂಗ್ ಎಂಬುದು ಖಚಿತಪಡಲಿದ್ದು ಹಣ ಕಳೆದುಕೊಳ್ಳುವುದು ತಪ್ಪಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಶದಲ್ಲೇ ಮೊದಲ ಸ್ಥಾನ
ರಾಷ್ಟ್ರೀಯ ಅಪರಾಧಗಳ ದತ್ತಾಂಶ ಕ್ರೋಢಿಕರಣ ಘಟಕ (ಎನ್ಸಿಆರ್ಬಿ) ಇತ್ತೀಚೆಗೆ ಅಂಕಿ ಅಂಶ ಬಿಡುಗಡೆ ಮಾಡಿದ್ದು,ದೇಶದ ಮಹಾನಗರಗಳ ಪೈಕಿ ಬೆಂಗಳೂರು ಅಗ್ರಸ್ಥಾನ ಪಡೆದಿದೆ 2022ರಲ್ಲಿ
ಸೈಬರ್ ವಂಚನೆ ಅತಿ ಹೆಚ್ಚು ನಡೆದ ಎಂದು ವಿವರಿಸಲಾಗಿದೆ.
ಹೆಚ್ಚಾಗಿ ವಂಚನೆ ನಡೆಯುವ ಪ್ರಕರಣಗಳು
- ಡೆಬಿಟ್/ಕ್ರೆಡಿಟ್ ಕಾರ್ಡ್ ಒಟಿಪಿ
- ಆನ್ಲೈನ್ ಉದ್ಯೋಗದ ಆಮಿಷ
- ಬಿಟ್ಕಾಯಿನ್ ಹೂಡಿಕೆಯಲ್ಲಿ ದುಪ್ಪಟ್ಟು ಲಾಭ
- ವ್ಯವಹಾರಿಕ ಪಾಲುದಾರಿಕೆ ಭರವಸೆ
- ಕಡಿಮೆ ಬಡ್ಡಿಗೆ ತತ್ಕ್ಷಣ ಸಾಲ ಕೊಡುವುದು
- ಪೊಲೀಸರ ಹೆಸರಲ್ಲಿ ಕರೆ ಮಾಡಿ ಹಣಕ್ಕೆ ಬೇಡಿಕೆ.
ಇದನ್ನು ಓದಿ: ನಕಲಿ ವೈದ್ಯರ ಹಾವಳಿ: ಕಾರ್ಯಾಚರಣೆಗೆ ಇಳಿದ ಆರೋಗ್ಯ ಇಲಾಖೆ, 1,434ಕ್ಕೂ ಹೆಚ್ಚು ವೈದ್ಯರ ವಿರುದ್ಧ ದೂರು ದಾಖಲು
- ಮೇಘಾ ಮನೋಹರ ಕಂಪು