ಬಿಹಾರದಲ್ಲೂಬ್ಬ ಡಿಜಿಟಲ್‌ ಭಿಕ್ಷುಕ!

beggar

ದೇಶಾದ್ಯಂತ ಡಿಜಿಟಲೀಕರಣ ವಾಗುತ್ತಿರುವ ಹಿನ್ನೆಲೆಯಲ್ಲಿ ಭಿಕ್ಷುಕರೂ ಕೂಡ ಡಿಜಿಟಲಿಕರಣದತ್ತ ವಾಲಿದ್ದು, ಭಿಕ್ಷುಕರ ಕೈಯಲ್ಲೂ ಕ್ಯೂ ಆರ್‌ ಕೋಡ್‌ ಬಂದಿದೆ. ಇಂತಹ ಒಬ್ಬ ಡಿಜಿಟಲ್ ಭಿಕ್ಷುಕ ಬಿಹಾರದಲ್ಲಿ ಕಾಣಿಸಿಕೊಂಡಿದ್ದು,ಈ ಡಿಜಿಟಲ್​ ಭಿಕ್ಷುಕನ ಹೆಸರು ರಾಜು. ಬಿಹಾರದ ಬೆಟ್ಟಿಯಾ ರೈಲ್ವೆ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಿರುತ್ತಾನೆ. ಕೊರಳಿನಲ್ಲಿ ಕ್ಯೂಆರ್​ ಕೋಡ್ ಫಲಕ ಮತ್ತು ಟ್ಯಾಬ್​​ ಹಿಡಿದುಕೊಂಡು ಭಿಕ್ಷಾಟನೆ ಮಾಡುತ್ತಿದ್ದಾನೆ.

ಭಿಕ್ಷೆ ಬೇಡುವುದು ಮಾತ್ರವಲ್ಲದೆ, ಲಾಲು ಪ್ರಸಾದ್​ ಯಾದವ್​ ಅವರನ್ನು ರಾಜು ಅನುಕರಣೆ ಕೂಡ ಮಾಡುತ್ತಿದ್ದರಂತೆ. ಲಾಲು ಅವರ ಕಾರ್ಯಕ್ರಮಗಳು ಎಲ್ಲೇ ನಡೆದರೂ ರಾಜು ಅಲ್ಲಿ ಹಾಜರಾಗುತ್ತಿದ್ದರಂತೆ. ಈ ವಿಷಯ ತಿಳಿದ ಲಾಲು ಪ್ರಸಾದ್​ ಯಾದವ್​ ಅವರು ಎರಡು ಹೊತ್ತಿನ ಊಟಕ್ಕೆ ರೈಲ್ವೆ ಕ್ಯಾಂಟೀನ್​ನಲ್ಲಿ ಪಾಸ್​ ಮಾಡಿಸಿಕೊಟ್ಟಿದ್ದರು ಎಂದು ಡಿಜಿಟಲ್​ ಭಿಕ್ಷುಕ ರಾಜು ತಿಳಿಸಿದ್ದಾರೆ.

ಡಿಜಿಟಲ್‌ ಭಿಕ್ಷುಕನಾದ ಕಥೆ : ರಾಜು ಸುಮಾರು  30 ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದು ಇತ್ತೀಚಿನ ದಿನಗಳಲ್ಲಿ ಜನರು ‘ಚಿಲ್ಲರೆ ಇಲ್ಲ’ ಎಂದು ಹೇಳಿ ಕಳುಹಿಸುತ್ತಿದ್ದರು. ಇದರಿಂದ ಹಣ ಸಿಗದೇ ತೊಂದರೆಗೀಡಾದ ರಾಜುವಿಗೆ ಡಿಜಿಟಲ್‌ ಮೊರೆಹೋಗಿದ್ದಾರೆ.

ಬಿಹಾರದ ಬೆಟ್ಟಿಯಾದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಖಾತೆ ಆರಂಭಿಸಲು ಹೋದ ರಾಜುವಿಗೆ ಬ್ಯಾಂಕ್​ ಸಿಬ್ಬಂದಿ ಆಧಾರ್​, ಪ್ಯಾನ್​ ಕಾರ್ಡ್​ ಕೇಳಿದ್ದಾರೆ. ಆಧಾರ್​ ಹೊಂದಿದ್ದ ರಾಜು 6 ತಿಂಗಳ ಬಳಿಕ ಪ್ಯಾನ್​ ಕಾರ್ಡ್​ ಮಾಡಿಸಿಕೊಂಡು ಬ್ಯಾಂಕ್​ ಖಾತೆ ಪಡೆದುಕೊಂಡಿದ್ದಾರೆ. ಅಲ್ಲದೇ, ಇ-ವ್ಯಾಲೆಟ್​(ಕ್ಯೂಆರ್​ ಕೋಡ್​) ಅನ್ನೂ ಇದೇ ಶಾಖೆಯಿಂದಲೇ ಪಡೆದಿದ್ದಾರೆ.

ಬಳಿಕ ಬೆಟ್ಟಿಯಾ ರೈಲ್ವೆ ನಿಲ್ದಾಣ ಸೇರಿ ಹಲವೆಡೆ ಭಿಕ್ಷಾಟನೆ ಮಾಡುವಾಗ ಯಾರಾದರೂ ಚಿಲ್ಲರೆ ಹಣ ಇಲ್ಲ ಎಂದರೆ ತಮ್ಮಲ್ಲಿರುವ ಕ್ಯೂ ಆರ್​ ಕೋಡ್​ ಸ್ಕ್ಯಾನ್​ ಮಾಡಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಲು ಕೇಳಿಕೊಳ್ಳುತ್ತಾರಂತೆ. ಮೊದಲಿಗಿಂತಲೂ ‘ಡಿಜಿಟಲ್​ ಭಿಕ್ಷೆ’ಯಿಂದಲೇ ಗಳಿಕೆ ಹೆಚ್ಚಿದೆ ಎಂದು ರಾಜು ತಿಳಿಸಿದ್ದಾರೆ.

ಡಿಜಿಟಲ್​ ಭಿಕ್ಷುಕ ರಾಜು ಪ್ರಧಾನಿ ನರೇಂದ್ರ ಮೋದಿ, ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್​ ಯಾದವ್​ ಅವರ ಅಭಿಮಾನಿಯಾಗಿದ್ದಾರೆ. ಕೇಂದ್ರ ಸರ್ಕಾರ ಡಿಜಿಟಲ್​ ಇಂಡಿಯಾ ಘೋಷಿಸಿದ ಬಳಿಕ ಎಲ್ಲರಿಗೂ ಬ್ಯಾಂಕ್​​ ಖಾತೆ ಸಿಕ್ಕಿದ್ದರಿಂದ ನಾನು ಈ ರೀತಿ ಭಿಕ್ಷೆ ಬೇಡಲು ಸಹಾಯವಾಯಿತು ಎಂದು ರಾಜು ಹೇಳಿಕೊಂಡಿದ್ದಾರೆ.

Exit mobile version