ಮಹಾನಾಯಕನಿಗೆ ಬೊಮ್ಮಾಯಿ ಸಾಥ್

ಬೆಂಗಳೂರು ಆ19 : ಕನ್ನಡದಲ್ಲಿ ಮೂಡಿಬರುತ್ತಿರುವ ಜನಪ್ರಿಯ ಧಾರವಾಹಿಯಾದ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಧಾರವಾಹಿಯ ವಿಶೇಷ ಪ್ರೊಮೋವನ್ನು ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡುವುದರ ಮೂಲಕ ಮಹಾನಾಯಕನಿಗೆ ಮುಖ್ಯಮಂತ್ರಿಗಳು ಸಾಥ್ ನೀಡಿದ್ದಾರೆ.

ಇಗಾಗಲೇ ಮಹಾನಾಯಕ ಧಾರವಾಹಿ ಕನ್ನಡ ಕಿರುತೆರೆಯಲ್ಲೇ ವಿಭಿನ್ನ ದಾಖಲೆಯನ್ನು ಕೂಡ ಸೃಷ್ಟಿಸಿದೆ. ಮುಂಚೆ ವಾರದಲ್ಲಿ ಎರಡು ದಿನ ಪ್ರಸಾರವಾಗುತ್ತಿದ್ದ ಧಾರವಾಹಿ ಇದೀಗ ವಾರದ ಎಲ್ಲಾ ದಿನ ಪ್ರಸಾರವಾಗುತ್ತಿದ್ದು, ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ.  ಇವರೆಗೂ ಬಾಲಕ ಭೀಮನಾಗಿದ್ದ ಅಂಬೇಡ್ಕರ್ ಇನ್ನು ಮುಂದೆ ನವಯುವಕ ಅಂಬೆಡ್ಕರ್ ತೆರೆಯ ಮೇಲೆ ಬರಲಿದ್ದು ಈ ಹಿನ್ನಲೆಯಲ್ಲಿ ಅಂಬೇಡ್ಕರ್ ಜೀವನದ  2ನೇ ಘಟ್ಟದ ಪ್ರೋಮೋ ವನ್ನು ಬಸವರಾಜ್ ಬೊಮ್ಮಾಯಿ ಬಿಡುಗಡೆ ಮಾಡಿ ಧಾರವಾಹಿ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ.

ಈ ಬಗ್ಗೆ ಜೀ ಕನ್ನಡ ಬ್ಯುಸಿನೆಸ್ ಹೆಡ್ ಮಾತನಾಡಿ ದೇಶ ಸ್ವಾತಂತ್ರ್ಯ ಪಡೆದ 75ನೇ ವರ್ಷದ ಸಂದರ್ಭದಲ್ಲಿ ಯುವ ಅಂಬೇಡ್ಕರ್ ಅವರ ಜೀವನಗಾಥೆ ಹೇಳುವ ಮಹಾನಾಯಕ ಅಂಬೇಡ್ಕರ್‌ ಧಾರಾವಾಹಿಯ ವಿಶೇಷ ಪ್ರೊಮೋವನ್ನು ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಅಭೂತಪೂರ್ವ ಯಶಸ್ಸು ನೀಡಿದ ಜೀ ಕನ್ನಡ ವೀಕ್ಷಕರಿಗೆ ನಮ್ಮ ಕೃತಜ್ಞತೆಗಳು ಎಂದು ತಿಳಿಸಿದರು.

Exit mobile version