ಜಾತಿ ಗಣತಿ ಜಟಾಪಟಿ: ಬಿಹಾರ ಬಳಿಕ ಕರ್ನಾಟಕ ಸರದಿ, ಜಾತಿ ಗಣತಿ ಮಾಡುವುದರಿಂದ ಲಾಭ ಏನು?

Bihar: ಬಿಹಾರದಲ್ಲಿ ಜಾತಿ ಗಣತಿ ವರದಿ ಪ್ರಕಟವಾಗಿದ್ದು, ಬಿಹಾರ ರಾಜ್ಯದ ಒಟ್ಟು ಜನಸಂಖ್ಯೆ ಪೈಕಿ ಒಬಿಸಿ (Caste Census in Bihar) ಸಮುದಾಯವೇ ಬಹು ಸಂಖ್ಯಾತರು ಅನ್ನೋ

ಮಹತ್ವದ ಮಾಹಿತಿ ಹೊರಬಿದ್ದಿದೆ. ಮತ್ತು ದೇಶಾದ್ಯಂತ ಜಾತಿ ಗಣತಿ ಮಾಡಬೇಕೇ, ಬೇಡವೇ ಎಂಬ ಚರ್ಚೆಗಳೂ ಶುರುವಾಗಿವೆ. ಜಾತಿ ಗಣತಿ ಮಾಡೋದ್ರಿಂದ ಲಾಭವೇನು? ನಷ್ಟವೇನು?

ಎಂಬ ಪ್ರಶ್ನೆಯೂ ಇದೆ. ಇನ್ನು ಕರ್ನಾಟಕದಲ್ಲಿ (Karnataka) ಈಗಾಗಲೇ ಮಾಡಲಾಗಿದ್ದ ಜಾತಿ ಗಣತಿ ವರದಿಯನ್ನು ಇನ್ನೂ ಏಕೆ ಬಿಡುಗಡೆ ಮಾಡ್ತಿಲ್ಲ ಎಂಬ ಆಗ್ರಹವೂ ಕೇಳಿ ಬಂದಿದೆ.

ಜನಗಣತಿ ನಮ್ಮೆಲ್ಲರಿಗೂ ಗೊತ್ತು ಪ್ರತಿ 10 ವರ್ಷಕ್ಕೊಮ್ಮೆ ದೇಶಾದ್ಯಂತ ಎಷ್ಟು ಜನ ಇದ್ದಾರೆ ಅನ್ನೋ ಲೆಕ್ಕಾಚಾರ ಹಾಕಲಾಗುತ್ತೆ. 2021ರಲ್ಲೂ ಜನಗಣತಿ ನಡೆಯಬೇಕಿತ್ತು. ಆದರೆ ಕೋವಿಡ್

(Covid) ಕಾರಣದಿಂದ ಮುಂದೂಡಿಕೆ ಆಗಿದೆ. ಈ ಮಧ್ಯೆ ಜಾತಿ ಗಣತಿ (Caste Census in Bihar) ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿವೆ.

ಬಿಹಾರ ರಾಜ್ಯದಲ್ಲಿ ಎಲ್ಲಾ ರೀತಿಯ ರಾಜಕೀಯ ಅಡೆತಡೆಗಳ ಮಧ್ಯದಲ್ಲೂ ಬಿಹಾರ “ಸಿಎಂ ನಿತೀಶ್ ಕುಮಾರ್”(Nitish Kumar) ತಮ್ಮ ರಾಜ್ಯದಲ್ಲಿ ಜಾತಿ ಗಣತಿ ಮಾಡಿಸಿದ್ದಾರೆ. ಜಾತಿ ಗಣತಿಯ

ಅಂಕಿ ಅಂಶಗಳು ಸದ್ದು ಮಾಡುತ್ತಿದೆ. ಜಾತಿ ಗಣತಿ ಮಾಡುವುದರಿಂದ ಸಾಕಷ್ಟು ಲಾಭಗಳಿವೆ ಎಂದಿದೆ ಬಿಹಾರ ಸರ್ಕಾರ. ಜಾತಿ ಗಣತಿ ಮಾಡೋದ್ರಿಂದ ಯಾವ ಸಮುದಾಯದಲ್ಲಿ ಎಷ್ಟು ಜನ ಇದ್ದಾರೆ

ಅನ್ನೋ ನಿಖರ ಮಾಹಿತಿ ಲಭ್ಯವಾಗುತ್ತದೆ.

ಮಾಹಿತಿಯ ಆಧಾರದ ಮೇಲೆ ಮೀಸಲಾತಿ ಕೋಟಾ ಹೆಚ್ಚು – ಕಡಿಮೆ ಮಾಡಬಹುದು. ಹಾಗೂ ಒಟ್ಟಾರೆ ಮೀಸಲಾತಿ ಪ್ರಮಾಣ ಏರಿಕೆ ಮಾಡೋದಕ್ಕೂ ಜಾತಿ ಗಣತಿ ನೆರವಾಗುತ್ತೆ. ದೇಶಾದ್ಯಂತ ಜಾತಿ

ಗಣತಿ ನಡೆದರೆ ದೇಶಾದ್ಯಂತ ನೀಡಲಾಗಿರುವ ಒಟ್ಟು ಮೀಸಲಾತಿ ಪ್ರಮಾಣವನ್ನು ಏರಿಕೆ ಮಾಡೋಕೆ ಅನುಕೂಲ ಆಗುತ್ತೆಎಂದಿದ್ದಾರೆ ಬಿಹಾರ್ ಮುಖ್ಯ ಮಂತ್ರಿ ತಿಳಿಸಿದ್ದಾರೆ.

ಆಯಾ ಸಮುದಾಯಗಳ ಜನಸಂಖ್ಯೆಗೆ ತಕ್ಕ ಹಾಗೆ ವೈಜ್ಞಾನಿಕ ಅಂಕಿ ಅಂಶಗಳ ಆಧಾರದ ಮೇಲೆ ಮೀಸಲಾತಿ ನೀಡೋದಕ್ಕೆ ನೆರವಾಗುತ್ತೆ. ಇನ್ನು ಮಹಿಳೆಯರಿಗೂ ಒಳ ಮೀಸಲಾತಿ ನೀಡೋಕೆ

ಈ ಜಾತಿ ಗಣತಿ ನೆರವಾಗುತ್ತೆ. ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಬಹುಸಂಖ್ಯಾತ ಜಾತಿ ಅಥವಾ ಸಮುದಾಯಕ್ಕೆ ತನ್ನ ಪ್ರಣಾಳಿಕೆಯಲ್ಲಿ ಪ್ರತ್ಯೇಕ ಯೋಜನೆಗಳನ್ನ ಘೋಷಣೆ ಮಾಡೋದಕ್ಕೂ

ಜಾತಿ ಗಣತಿ ನೆರವಾಗುತ್ತೆ ಅನ್ನೋದು ಜಾತಿ ಗಣತಿ ಪರ ಇರುವವರ ವಾದ..

ಬಿಹಾರ ರಾಜ್ಯದ ಒಟ್ಟು ಜನಸಂಖ್ಯೆ 13.07 ಕೋಟಿ. ಈ ಪೈಕಿ ಇತರ , ಅತ್ಯಂತ ಹಿಂದುಳಿದ ವರ್ಗಗಳ ಜನಸಂಖ್ಯೆ 4.70 ಕೋಟಿ. ಹಿಂದುಳಿದ ವರ್ಗಗಳ ಜನಸಂಖ್ಯೆ 3.54 ಕೋಟಿ ಇವೆರಡೂ ಸಮುದಾಯಗಳ

ಜನಸಂಖ್ಯೆಯು ಬಿಹಾರದ ಒಟ್ಟು ಜನಸಂಖ್ಯೆಯ ಶೇಕಡಾ 63.13 ಕೋಟಿ ಯಷ್ಟಿದೆ. ಇನ್ನು ಬಿಹಾರದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ 2.56 ಕೋಟಿ ಇದೆ. ಪರಿಶಿಷ್ಟ ಪಂಗಡದ ಜನಸಂಖ್ಯೆ 21.99 ಲಕ್ಷ ಇದೆ.

ಸಾಮಾನ್ಯ ವರ್ಗದವರ ಜನಸಂಖ್ಯೆ 2.02 ಕೋಟಿ ಇದೆ.

ಬಿಹಾರದಲ್ಲಿ ಜಾತಿವಾರು
ಬಿಹಾರದ ಆಡಳಿತಾರೂಢ ಮಹಾಘಟಬಂಧನ ಸರ್ಕಾರದ ಅಂಗ ಪಕ್ಷ ಆರ್‌ಜೆಡಿ (RJD) ನಾಯಕ ತೇಜಸ್ವಿ ಯಾದವ್‌ಗೆ (Tejaswi Yadav) ಬಿಹಾರದ ಉಪ ಮುಖ್ಯಮಂತ್ರಿ ಪಟ್ಟ ಸಿಕ್ಕಿದೆ.

ಜಾತಿ ಗಣತಿ ಪ್ರಕಾರ, ಬಿಹಾರ ರಾಜ್ಯದಲ್ಲಿ ಯಾದವರೇ ಬಹುಸಂಖ್ಯಾತರು. ಬಿಹಾರದ ಒಟ್ಟು ಜನಸಂಖ್ಯೆ ಪೈಕಿ ಕುರ್ಮಿ ಸಮುದಾಯ 37.22 ಲಕ್ಷ, ಯಾದವರ ಜನಸಂಖ್ಯೆ 1.86 ಕೋಟಿ,

ಕುಶ್ವಾಹ 55.05 ಲಕ್ಷ, ರಜಪೂತ 45.10 ಲಕ್ಷ, ಭೂಮಿಹಾರ 37.5 ಲಕ್ಷ,ಬ್ರಾಹ್ಮಣ 47.81 ಲಕ್ಷ, ಕಾಯಸ್ಥ 7.85 ಲಕ್ಷ ಜನಸಂಖ್ಯೆ ಇದೆ.

ಇದಲ್ಲದೆ ಧರ್ಮವಾರು ಜನಸಂಖ್ಯೆಯನ್ನು ನೋಡಿದರೆ ಬಿಹಾರದಲ್ಲಿ 2.31 ಕೋಟಿ ಮುಸ್ಲಿಮರು, 10.71 ಕೋಟಿ ಹಿಂದೂಗಳು. 75 ಲಕ್ಷ ಕ್ರೈಸ್ತರಿದ್ದಾರೆ, 1.11 ಲಕ್ಷ ಬೌದ್ಧರು ಹಾಗೂ 14 ಲಕ್ಷ ಸಿಖ್ಖರಿದ್ದಾರೆ

ಇನ್ನು ಜೈನ ಸಮುದಾಯದ ಒಟ್ಟು ಸಂಖ್ಯಾ ಬಲ 12 ಲಕ್ಷ. ಇತರೆ ಧರ್ಮಗಳ ಜನರು ಬಿಹಾರದಲ್ಲಿ 1.66 ಲಕ್ಷ ಇದ್ದರೆ, ಧರ್ಮಾತೀತರ ಸಂಖ್ಯೆ 2 ಸಾವಿರದಷ್ಟಿದೆ.

ಜಾತಿ ಗಣತಿಗೆ ಬಿಜೆಪಿ ವಿರೋಧ ಏಕೆ?
ಬಿಹಾರದಲ್ಲಿ ರಾಜಕೀಯ ಅಡೆತಡೆಗಳ ನಡುವೆಯೂ ಜಾತಿ ಗಣತಿ ವರದಿ ಬಿಡುಗಡೆ ಆಗಿದೆ. ರಾಷ್ಟ್ರ ಮಟ್ಟದಲ್ಲೂ ಜಾತಿ ಗಣತಿ ನಡೆಯಬೇಕು ಅನ್ನೋ ಆಗ್ರಹ ಕೇಳಿ ಬಂದಿದೆ. ಒಂದು ಲೆಕ್ಕಾಚಾರದ ಪ್ರಕಾರ

ಭಾರತ ದೇಶದಲ್ಲಿ ಒಬಿಸಿ ಸಮುದಾಯದ ಸಂಖ್ಯಾ ಬಲ ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 84 ರಷ್ಟು ಇದೆ ಅಂತಾ ಹೇಳಲಾಗ್ತಿದೆ. ಆದರೆ ಕೇಂದ್ರ ಸರ್ಕಾರದ 90 ಕಾರ್ಯದರ್ಶಿಗಳ ಪೈಕಿ ಒಬಿಸಿ

ಸಮುದಾಯವರು ಕೇವಲ ಮೂರೇ ಜನ ಇದ್ದಾರೆ ಅಂತಾ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಈ ವಾದಕ್ಕೆ ತಿರುಗೇಟು ನೀಡಿರುವ ಪ್ರಧಾನಿ ಮೋದಿ, ಜಾತ್ಯತೀತ ಭಾರತದಲ್ಲಿ ವಿರೋಧ ಪಕ್ಷಗಳು ಜಾತಿಯ ಆಧಾರದ ಮೇಲೆ ದೇಶವನ್ನು ವಿಭಜನೆ

ಮಾಡಲು ಯತ್ನಿಸುತ್ತವೆ ಅಂತಾ ಹರಿಹಾಯ್ದಿದ್ದಾರೆ. ಬಡವರ ಭಾವನೆಗಳ ಜೊತೆ ಆಟ ಆಡಬೇಡಿ ಎಂದಿರುವ ಪ್ರಧಾನಿ ಮೋದಿ(Modi), ವಿರೋಧ ಪಕ್ಷಗಳು ಪಾಪ ಮಾಡುತ್ತಿವೆ ಅಂತಾ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಬಿಹಾರ ಬಿಜೆಪಿ ಘಟಕ ಹೊಸ ವಾದವನ್ನ ಮುಂದಿಟ್ಟಿದೆ. ಬಿಹಾರದಲ್ಲಿ ಒಬಿಸಿ ಜನಸಂಖ್ಯೆ ಹೆಚ್ಚಾಗಿರಬಹುದು. ಆದರೆ ಈ ಸಮೀಕ್ಷೆಯಲ್ಲಿ ಹಲವು ಸಮುದಾಯಗಳ ಆರ್ಥಿಕ ಸ್ಥಿತಿ ಬಗ್ಗೆ ಯಾವುದೇ

ಮಾಹಿತಿ ಇಲ್ಲ ಅಂತಾ ಹೇಳಿದೆ. ಮತ್ತು ಕೇವಲ ಜಾತಿಯ ಪ್ರಾಬಲ್ಯತೆ ಆಧಾರದ ಮೇಲೆ ಮೀಸಲಾತಿ ಕೊಡಬೇಕೇ? ಅಥವಾ ಆಯಾ ಸಮುದಾಯಗಳ ಆರ್ಥಿಕ ಸ್ಥಿತಿಗತಿಯನ್ನೂ ಪರಿಗಣನೆಗೆ

ತೆಗೆದುಕೊಳ್ಳಬೇಕೇ ಅನ್ನೋ ಪ್ರಶ್ನೆ ಉದ್ಭವಿಸಿದೆ.

ಕರ್ನಾಟಕದಲ್ಲಿ ಮತ್ತೆ ಜಾತಿ ಗಣತಿ ಯಾವಾಗ
ಕರ್ನಾಟಕ ರಾಜ್ಯದಲ್ಲಿ ಬಿಹಾರಕ್ಕೂ ಮೊದಲೇ ಜಾತಿ ಗಣತಿ ನಡೆದಿತ್ತು. ಈ ಹಿಂದೆ ಸಿದ್ದರಾಮಯ್ಯ (Siddaramaiah) ಸಿಎಂ ಆಗಿದ್ದ ಅವಧಿಯಲ್ಲೇ 2015ರಲ್ಲಿ ಜಾತಿ ಗಣತಿ ನಡೆದಿತ್ತು. ಹಿಂದುಳಿದ

ವರ್ಗಗಳ ಆಯೋಗ ರಾಜ್ಯಾದ್ಯಂತ ಮನೆ ಮನೆಗೆ ತೆರಳಿ ಗಣತಿ ನಡೆಸಿತ್ತು. ಆದ್ರೆ, ಆಯೋಗ ತನ್ನ ವರದಿಯನ್ನ ಇನ್ನೂ ಸರ್ಕಾರಕ್ಕೆ ಸಲ್ಲಿಕೆ ಮಾಡಿಲ್ಲ.

ಇದೀಗ ಬಿಹಾರದಲ್ಲಿ ಜಾತಿ ಗಣತಿ ವರದಿ ಬಿಡುಗಡೆ ಆಗಿರುವ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲೂ ವರದಿ ಪ್ರಕಟಿಸಿ ಅನ್ನೋ ಆಗ್ರಹಗಳು ಕಾಂಗ್ರೆಸ್ ಪಕ್ಷದಲ್ಲೇ ಕೇಳಿ ಬರ್ತಿದೆ. ಬಿ. ಕೆ. ಹರಿಪ್ರಸಾದ ಅವರು

ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಡ ಹೇರ್ತಿದ್ಧಾರೆ. ಇಂಡಿಯಾ ಮೈತ್ರಿ ಕೂಟದ ಅಂಗಪಕ್ಷವಾದ ಜೆಡಿಯು ಬಿಹಾರದಲ್ಲಿ ವರದಿ ಬಿಡುಗಡೆ ಮಾಡಿರುವಾಗ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಏಕೆ ಜಾತಿ ಗಣತಿ

ವರದಿ ರಿಲೀಸ್ ಮಾಡಬಾರದು ಅನ್ನೋದು ಅವರ ಪ್ರಶ್ನೆ. ಆದರೆ ಸರ್ಕಾರ ಈ ವಿಚಾರದಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತೆ ಅನ್ನೋದು ಇನ್ನೂ ನಿಗೂಢವಾಗಿದೆ.

ಇದನ್ನು ಓದಿ: ರೈಲು ದುರಂತ: ಬಿಹಾರದಲ್ಲಿ ಹಳಿ ತಪ್ಪಿದ ದೆಹಲಿ-ಗುವಾಹಟಿ ಮಾರ್ಗದ ಈಶಾನ್ಯ ಎಕ್ಸ್‌ಪ್ರೆಸ್‌ ರೈಲು

Exit mobile version