Bengaluru: ಬೆಂಗಳೂರು ಕಂಬಳ (Chetan against kambala) ಈ ಊಳಿಗಮಾನ್ಯ/ಫ್ಯೂಡಲ್ ಪದ್ಧತಿಯ ಮುಂದುವರಿಕೆಯಾಗಿ/ಮುಂದುವರಿಕೆಯಂತೆ ಎದ್ದು ಕಾಣುತ್ತದೆ ಎಂದು ನಟ ಹಾಗೂ
ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ (Chetan Ahimsa) ಟೀಕಿಸಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಬೆಂಗಳೂರಿನಲ್ಲಿ ನಡೆಯುವ ಕಂಬಳಕ್ಕೆ ಕರ್ನಾಟಕ ರಾಜ್ಯ ಸರ್ಕಾರವು 1 ಕೋಟಿ ರೂಪಾಯಿ ನೀಡಿದೆ.
ಊಳಿಗಮಾನ್ಯ/ಫ್ಯೂಡಲ್ ಕಂಬಳ ಕ್ರೀಡೆಯನ್ನು ಪ್ರಜಾಪ್ರಭುತ್ವಗೊಳಿಸುವುದು ಒಳ್ಳೆಯದು – ಆದರೆ ಪ್ರಜಾಪ್ರಭುತ್ವೀಕರಣದ ಆಧಾರವಾಗಿರುವ ಒಳಗೊಳ್ಳುವಿಕೆ ಇದರಲ್ಲಿ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.
69 ಆಹ್ವಾನಿತ ಗುಂಪುಗಳಲ್ಲಿ ಇದರಲ್ಲಿ ಒಂದೇ ಒಂದು ದಲಿತ ಅಥವಾ ಆದಿವಾಸಿ (ಕೊರಗ) ಗುಂಪು ಇಲ್ಲ. ದಲಿತರು ಮತ್ತು ಕೊರಗರು ಕಂಬಳದಲ್ಲಿ ಪದ್ಧತಿಗಳಿಂದ ಸಾಂಪ್ರದಾಯಿಕವಾಗಿ ತಾರತಮ್ಯಕ್ಕೊಳಗಾದ
ಗುಂಪುಗಳಾಗಿವೆ. ಬೆಂಗಳೂರು ಕಂಬಳ ಈ ಊಳಿಗಮಾನ್ಯ/ಫ್ಯೂಡಲ್ (Feudal) ಪದ್ಧತಿಯ ಮುಂದುವರಿಕೆಯಾಗಿ/ಮುಂದುವರಿಕೆಯಂತೆ ಎದ್ದು ಕಾಣುತ್ತದೆ ಎಂದು ಟೀಕಿಸಿದ್ದಾರೆ.
ಇನ್ನೊಂದು ಪೋಸ್ಟ್ನಲ್ಲಿ, ಜಾತಿ ಗಣತಿ ಬಿಡುಗಡೆಯಾಗಿ ಆಗ್ರಹಿಸಿ, ಎಲ್ಲಾ 3 ಮುಖ್ಯವಾಹಿನಿಯ ಪಕ್ಷಗಳ ಒಕ್ಕಲಿಗ ರಾಜಕಾರಣಿಗಳು (ಡಿಕೆ ಶಿವಕುಮಾರ್ (D.K.Shivakumar) , ಎಚ್ಡಿ ಕುಮಾರಸ್ವಾಮಿ,
ಎಸ್ಎಂ ಕೃಷ್ಣ, ಇತ್ಯಾದಿ) ಮತ್ತು ವೀರಶೈವ-ಲಿಂಗಾಯತ ಲಾಬಿಯು 2015 ರ ‘ಜಾತಿ ಗಣತಿ’ಯನ್ನು ಬಿಡುಗಡೆ ಮಾಡುವ ಮೊದಲೇ ಅದನ್ನು ತಿರಸ್ಕರಿಸಿದ್ದಾರೆ. ಗೌಡ-ಲಿಂಗಾಯತ ಲಾಬಿಗಳು ಯಾವುದಕ್ಕೆ
ಹೆದರುತ್ತಿದ್ದಾರೆ? — ಅವರು ಎಷ್ಟು ಅಸಮಾನವಾಗಿ ಸವಲತ್ತುಗಳನ್ನು ಹೊಂದಿದ್ದಾರೆಂದು ಇಡೀ ರಾಷ್ಟ್ರವು ಅರಿತುಕೊಳ್ಳುತ್ತದೆ, ಎಂದು ಹೆದರಿಕೆಯೇ? ಜಾತಿ ಗಣತಿಯನ್ನು ಬಿಡುಗಡೆ ಮಾಡಬೇಕು ಎಂದಿದ್ದಾರೆ.
ಇನ್ನು ಹಿಂದೂಗಳಲ್ಲದವರು ದೇವಸ್ಥಾನಗಳಲ್ಲಿ ಕೆಲಸ ಮಾಡುವಂತಿಲ್ಲ ಎಂದು ಆಂಧ್ರ ಹೈಕೋರ್ಟ್ (High Court) ತೀರ್ಪು ನೀಡಿದೆ. ಹಾಗಾದರೆ ಹಿಂದೂ ಅಲ್ಲದವರು ಯಾರು? ದಲಿತರು/ಆದಿವಾಸಿಗಳು/ಬೌದ್ಧರು/
ಕ್ರೈಸ್ತರು/ಮುಸ್ಲಿಮರು/ಲಿಂಗಾಯತರು/ಜೈನರು/ಸಿಖ್ಖರು/ಪಾರ್ಸಿಗಳು ಎಲ್ಲರೂ ಹುಟ್ಟಿನಿಂದ ಹಿಂದೂ ಅಲ್ಲ. ತಮ್ಮನ್ನು ತಾವು ‘ಹಿಂದೂ ಅಲ್ಲದವರು’ ಎಂದು ಪ್ರತಿಪಾದಿಸುವವರು ಸಹ ಹಿಂದೂ ಅಲ್ಲ. ಆದ್ದರಿಂದ,
ಎಲ್ಲಾ ದೇವಾಲಯದ ನೌಕರರು ಸಂಪೂರ್ಣ ಅರ್ಜಿ ಪ್ರಕ್ರಿಯೆಗೆ (Chetan against kambala) ಒಳಗಾಗಬೇಕೇ? ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ: ಬೆಂಗಳೂರು ಕಂಬಳ ಊಳಿಗಮಾನ್ಯ ಪದ್ಧತಿಯ ಮುಂದುವರಿಕೆಯಂತೆ ಎದ್ದು ಕಾಣುತ್ತದೆ – ನಟ ಚೇತನ್ ಟೀಕೆ