ಬೆಚ್ಚಿ ಬೀಳಿಸುವ ಸುದ್ದಿ ! ರಾಜ್ಯದಲ್ಲಿ 5 ವರ್ಷಗಳಲ್ಲಿ 10,687ಮಕ್ಕಳು ನಾಪತ್ತೆ

Bengaluru : ನಿಜವಾಗ್ಲೂ ಇದೊಂದು ಶಾಕಿಂಗ್ ನ್ಯೂಸ್‌ ! ರಾಜ್ಯದಲ್ಲಿ ಮಕ್ಕಳ ಕಳ್ಳತನದ ಪ್ರಕರಣ ಹೆಚ್ಚಾಗುತ್ತಿದ್ದು, ರಾಜ್ಯ ಗೃಹ (Childrens Missing In Karnataka) ಇಲಾಖೆ ಇದರ ಕುರಿತು

ಆತಂಕಕಾರಿ ಮಾಹಿತಿಯನ್ನು ಹೊರಹಾಕಿದೆ. ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ 10,687 ಮಕ್ಕಳು ನಾಪತ್ತೆಯಾಗಿದ್ದು, ಇದರಲ್ಲಿ 1578 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ಪೊಲೀಸ್ (Police)

ಇಲಾಖೆ ತನಿಖೆ ನಡೆಸುತ್ತಿದ್ರು ಅವರು ಎಲ್ಲಿದ್ದಾರೆ ಎಂಬವುದು ಕಂಡು ಬಂದಿಲ್ಲ. ಈವರೆಗೆ ಪತ್ತೆಯಾಗದ ಮಕ್ಕಳ ಪೈಕಿ ಗಂಡು ಮಕ್ಕಳ ಸಂಖ್ಯೆ 383 ರಷ್ಟಾದರೆ, ಹೆಣ್ಣು ಮಕ್ಕಳ ಸಂಖ್ಯೆ 1195ರಷ್ಟಿದೆ.


ಮಕ್ಕಳ ಮಾರಾಟ ಮತ್ತು ಮಕ್ಕಳ ಕಳ್ಳತನದ ಪ್ರಕರಣಗಳು ದಿನೇ ದಿನೇ ರಾಜ್ಯದಲ್ಲಿ ಹೆಚ್ಚಾಗುತ್ತಿವೆ. ಮಕ್ಕಳ ಕಳ್ಳತನ ಹಾಗೂ ಮಾರಾಟದ ಜಾಲದ ಬಗ್ಗೆ ಆತಂಕಕಾರಿ ವರದಿಗಳು ಕೇಳಿಬರುತ್ತಿವೆ.

ಇದಕ್ಕೆ ಪೂರಕ ಎಂಬಂತೆ ರಾಜ್ಯ ಸರ್ಕಾರವೇ ಅಧಿಕೃತವಾಗಿ ನೀಡಿರುವ ಮಾಹಿತಿಗಳ ಪ್ರಕಾರ ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ 10687ಮಕ್ಕಳ ನಾಪತ್ತೆ ಪ್ರಕರಣ ವರದಿಯಾಗಿದೆ. ವಿಧಾನಪರಿಷತ್

ಸದಸ್ಯ ಡಾ. ಡಿ ತಿಮ್ಮಯ್ಯ (Dr .D .Timmahaih) ಅವರು ಕೇಳಿದ ಪಾಯಿಂಟ್ (Point) ಇಲ್ಲದ ಪ್ರಶ್ನೆಗೆ, ಉತ್ತರ ನೀಡಿರುವ ಗೃಹ ಇಲಾಖೆ ವರ್ಷದಲ್ಲಿ ಎಷ್ಟು ಮಕ್ಕಳ ನಾಪತ್ತೆ ಪ್ರಕರಣ ವರದಿಯಾಗಿದೆ

ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು (Childrens Missing In Karnataka) ನೀಡಿದೆ.

ಯಾವ ವರ್ಷದಲ್ಲಿ ಎಷ್ಟು ಮಕ್ಕಳು ನಾಪತ್ತೆ ?
2018 ರಲ್ಲಿ ಗಂಡು ಮಕ್ಕಳು-404, ಹೆಣ್ಣು ಮಕ್ಕಳ- 468
2019 ರಲ್ಲಿ ಗಂಡು ಮಕ್ಕಳು- 835, ಹೆಣ್ಣು ಮಕ್ಕಳು- 1317,
2020 ಗಂಡು ಮಕ್ಕಳು- 432, ಹೆಣ್ಣು ಮಕ್ಕಳು- 1150 ,
2021– ಗಂಡು ಮಕ್ಕಳು – 501, ಹೆಣ್ಣು ಮಕ್ಕಳು- 1647,
2022– ಗಂಡು ಮಕ್ಕಳು – 753, ಹೆಣ್ಣು ಮಕ್ಕಳು – 1860,
2023– ಗಂಡು ಮಕ್ಕಳು – 352, ಹೆಣ್ಣು ಮಕ್ಕಳು- 968 ಪ್ರಕರಣಗಳು ದಾಖಲಾಗಿದೆ. ಈ ಮೂಲಕ 3277 ಗಂಡು ಮಕ್ಕಳು ನಾಪತ್ತೆಯಾದರೆ, ಹೆಣ್ಣು ಮಕ್ಕಳು ಒಟ್ಟು ನಾಪತ್ತೆ ಪ್ರಕರಣಗಳ ಸಂಖ್ಯೆ

7410 ರಷ್ಟಾಗಿದೆ. ಇದು ನಿಜಕ್ಕೂ ಆತಂಕಕಾರಿ ವಿಚಾರವಾಗಿದೆ.

ಒಟ್ಟು ಬಾಕಿ ಇರುವ ಪ್ರಕರಣಗಳು?
ಒಟ್ಟು ನಾಪತ್ತೆಯಾದ 10,687 ಮಕ್ಕಳ ಪ್ರಕರಣಗಳಲ್ಲಿ ಬಹುತೇಕ ಮಕ್ಕಳು ಪತ್ತೆಯಾದರೆ ಇನ್ನೂ 1578 ಮಕ್ಕಳು ಪತ್ತೆಯಾಗಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದ್ದು, ಅವರು ಎಲ್ಲಿದ್ದಾರೆ

ಎಂಬುವುದು ಇನ್ನೂ ತಿಳಿದುಬಂದಿಲ್ಲ. ಈವರೆಗೆ ಪತ್ತೆಯಾಗದ ಮಕ್ಕಳ ಪೈಕಿ ಗಂಡು ಮಕ್ಕಳ ಸಂಖ್ಯೆ 383 ರಷ್ಟಾದರೆ, ಹೆಣ್ಣು ಮಕ್ಕಳ ಸಂಖ್ಯೆ 1195 ರಷ್ಟಿದೆ.

ರಾಜ್ಯದಲ್ಲಿ ಮಕ್ಕಳ ಮಾರಾಟ ಮತ್ತು ಕಳ್ಳತನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ರಾಜ್ಯ ಸರ್ಕಾರಕ್ಕೆ ಈ ಹಿಂದೆ ಪತ್ರವನ್ನೂ ಬರೆದಿತ್ತು. ಮಕ್ಕಳ ಕಳ್ಳತನ,

ಮಾರಾಟದ ಬಗ್ಗೆ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ಆಯೋಗ ಮನವಿ ಮಾಡಿತ್ತು.

ನಿಯಂತ್ರಣಕಿರುವ ಕ್ರಮಗಳು ?
ನಿರ್ಭಯ ನಿಧಿ (Nirbhaya Nidhi) ಅಡಿಯಲ್ಲಿ 35 ಮಾನವ ಕಳ್ಳ ಸಾಗಾಣಿಕೆ ನಿಷೇಧ ಘಟಕಗಳನ್ನು ರಾಜ್ಯದಲ್ಲಿ ಮಾನವ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಸ್ಥಾಪಿಸಿದೆ.

ಜೊತೆಗೆ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಅರಿವು ಮೂಡಿಸುವ ಪ್ರೋಗ್ರಾಮ್ ಗಳನ್ನು (Program) ಯೋಜಿಸಲಾಗುತ್ತಿದೆ. ಶಾಲಾ, ಕಾಲೇಜು, ಬಸ್ ನಿಲ್ದಾಣಗಳಲ್ಲಿ ಮಹಿಳೆಯರು ಮತ್ತು ಮಕ್ಕಳು

ಓಡಾಡುವ ಸ್ಥಳಗಳಲ್ಲಿ ಹೆಚ್ಚಿನ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದೂ ಗೃಹ ಇಲಾಖೆ ತಿಳಿಸಿದೆ.

ಭವ್ಯಶ್ರೀ ಆರ್.ಜೆ

Exit mobile version