ಕೋವಿಡ್ ನಿಯಮ ಉಲ್ಲಂಘನೆ ಡಿಕೆಶಿ, ಸಿದ್ದು ವಿರುದ್ಧ ದಾಖಲಾಗಿದ್ದ ಮೇಕೆದಾಟು ಪಾದಯಾತ್ರೆ ಪ್ರಕರಣ ರದ್ದು ಮಾಡಲು ಸಂಪುಟ ಒಪ್ಪಿಗೆ

Bengaluru: ಕೋವಿಡ್ ನಿಯಮ ಉಲ್ಲಂಘನೆ ಮೇಲೆ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (D.K Shivakumar), ವಿರುದ್ಧ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಮೇಕೆದಾಟು (Mekedatu) ಪಾದಯಾತ್ರೆ ವೇಳೆ ಕೇಸ್ ದಾಖಲಿಸಲಾಗಿತ್ತು. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಇಂದಿನ ಸಭೆಯಲ್ಲಿ ಪ್ರಕರಣ ರದ್ದು ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಡಿಕೆ ಶಿವಕುಮಾರ್ ಸಿದ್ದರಾಮಯ್ಯ, ಡಿಕೆ ಸುರೇಶ್ (D.K.Suresh) ಸೇರಿದಂತೆ ಕಾಂಗ್ರೆಸ್ (Congress) ನಾಯಕರ ವಿರುದ್ಧ ಮೇಕೆದಾಟು ಪಾದಯಾತ್ರೆಯ ಸಂದರ್ಭದಲ್ಲಿ ಕೋವಿಡ್ (Covid) ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ರದ್ದು ಮಾಡಲು ಸಂಪುಟ ಒಪ್ಪಿಗೆ ಕೊಟ್ಟಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಕರಣದ ಜೊತೆಗೆ ಒಟ್ಟು ಒಂಬತ್ತು ಪ್ರಕರಣಗಳನ್ನು ರದ್ದುಗೊಳಿಸಲು ಒಪ್ಪಿಗೆ‌‌ ಕೊಡಲಾಗಿದೆ.ಕಾಂಗ್ರೆಸ್ (Congress) ನಾಯಕರ ವಿರುದ್ಧ ಮೇಕೆದಾಟು (Mekedatu) ಪಾದಯಾತ್ರೆಯ ಸಂದರ್ಭದಲ್ಲಿ ದಾಖಲಾಗಿದ್ದ ದೂರು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಸಂಪುಟ ಸಭೆಯಲ್ಲಿ ನಡೆದ ಇತರೆ ತೀರ್ಮಾನಗಳು
1. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹೆಸರು ಬದಲಾವಣೆಗೆ ಸಂಪುಟ ಒಪ್ಪಿಗೆ. ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿ ಎಂದು ಮರುನಾಮಕರಣ.
ಉಡುಪಿ (Udupi), ದಕ್ಷಿಣ ಕನ್ನಡ, ಚಿಕ್ಕಮಗಳೂರು (Chikkamagaluru) ಜಿಲ್ಲೆಗಳು ಕರಾವಳಿ ಪ್ರದೇಶಾಭಿವೃದ್ಧ ಮಂಡಳಿಗೆ ಸೇರಿಸಲು ಸಂಪುಟ ಒಪ್ಪಿಗೆ.
2. ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಡಾ.ಎಂ.ಎಚ್‌. ನಾಗೇಶ್ (Dr. M H Nagesh) ಅವರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡಲು ಸಂಪುಟ
ಒಪ್ಪಿಗೆ. 5 ವರ್ಷ ಕಾರಾಗೃಹ ಶಿಕ್ಷೆಗೆ ಒಳಪಟ್ಟಿರುವ ಕಾರಣದಿಂದ ವಜಾಗೆ ಸಂಪುಟ ಸಮ್ಮತಿ.

3. ಸಿವಿ ರಾಮನ್ (C.V Raman) ಆಸ್ಪತ್ರೆ ಡಾ.ಎಸ್ ಡಿ ನಾಗಮಣಿ (Dr. S.D Nagamani) ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಹಿನ್ನಲೆಯಲ್ಲಿ ಆರೋಪ ಸಾಬೀತಾದ ನಿಟ್ಟಿನಲ್ಲಿ ಕಡ್ಡಾಯ
ನಿವೃತ್ತಿಗೆ ಸಂಪುಟ ಒಪ್ಪಿಗೆ.
4 . ಲೋಕಾಯಕ್ತ ಬಲೆಗೆ ಬಿದ್ದಿದ್ದ ರಾಮನಗರ (Ramanagar) ಮಹಿಳಾ ತಜ್ಞೆ ಡಾ. ಉಷಾ ಕುಂದರಗಿ ಕಡ್ಡಾಯ ನಿವೃತ್ತಿಗೆ ಸಂಪುಟ ಅನುಮೋದನೆ.
5. ಸಾರಿಗೆ ಸಂಸ್ಥೆಗಳ ವಾಹನಗಳಲ್ಲಿ ವಹಿಕಲ್ ಟ್ರ್ಯಾಕಿಂಗ್ ಸಿಸ್ಟಂ (Vehicle Tracking System) ಮತ್ತು ಪ್ಯಾನಿಕ್ ಬಟನ್ ಅಳವಡಿಕೆಗೆ ಕೇಂದ್ರಿಕೃತ ಕಂಟ್ರೋಲ್ ರೂಂ (Control Room)
ಸ್ಥಾಪನೆಗೆ 30.64 ಕೋಟಿ ರೂ. ಯೋಜನೆಗೆ ಅಸ್ತು. ಪ್ರಯಾಣಿಕರ ಮಾಹಿತಿ, ಬಸ್ ಗಾಗಿ ಕಾಯುವುದನ್ನು ಕಡಿಮೆಗೊಳಿಸುವುದು ಹಾಗೂ
ಅಪಘಾತ ಅವಘಡ ನಿಯಂತ್ರಣ ಮಾಡುವ ಉದ್ದೇಶ.

6. ಮೈಸೂರು (Mysore), ಚಿತ್ರದುರ್ಗ, ಇಂದಿರಾ ನಗರ ಸಿ.ವಿ ರಾಮನ್ ಆಸ್ಪತ್ರೆ, ಮಂಗಳೂರಿನ (Mangalore) ವೆನ್ ಲಾಕ್ ಸೇರಿದಂತೆ ಐದು ಜಿಲ್ಲಾ ಸಾರ್ವಜನಿಕ
ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಕೇಂದ್ರ ಆರಂಭ ಹಾಗೂ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ , ಧಾರವಾಡ ಜಿಲ್ಲಾಸ್ಪತ್ರೆ, ಹಾವೇರಿ,
ರಾಮನಗರ (Ramanagar),‌ಯಾದಗಿರಿ, ಮೈಸೂರು (Mysore) ಜಿಲ್ಲಾಸ್ಪತ್ರೆ ಸೇರಿದಂತೆ ಒಟ್ಟು 15 ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್ ಐ (MRI) ಕೇಂದ್ರ ಆರಂಭಕ್ಕೆ ಸಂಪುಟ
ಅನುಮತಿ. 47.41 ಕೋಟಿ ವೆಚ್ಚದಲ್ಲಿ ಪಿಪಿಪಿ (PPP) ಮಾದರಿಯಲ್ಲಿ ಕೇಂದ್ರಗಳ ಆರಂಭಕ್ಕೆ ಒಪ್ಪಿಗೆ.
7. ಬೆಳಗಾವಿ (Belagavi) ವೈದ್ಯಕೀಯ ಕಾಲೇಜಿನಲ್ಲಿ 325 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ (Super Specialty) ಆಸ್ಪತ್ರೆಗೆ 187 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ
ಅನುಮೋದನೆ.
8. ಬೆಂಗಳೂರಿನ (Bengaluru) ಏರೋಸ್ಪೇಸ್ ಹಾಗೂ ರಕ್ಷಣಾ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ ಸಂಪುಟ ಅನುಮೋದನೆ. ಅಂದಾಜು 391 ಕೋಟಿ‌ ರೂ
ಯೋಜನಾ ಮೊತ್ತಕ್ಕೆ ಆಡಳಿತಾತ್ಮಕ ಒಪ್ಪಿಗೆ. ಡೆಸಾಲ್ಟ್ ಕಂಪನಿಯೊಂದಿಗೆ (Desalt Company) ಪಿಪಿಪಿ ಮಾದರಿಯಲ್ಲಿ ಯೋಜನೆ.
9. ಹೂವಿನಹಡಗಲಿ (Hoovinahadagali) ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್. ಹಳ್ಳಿಗುಡಿ ಸೇವೆಯಿಂದ ವಜಾಗೆ ಸಂಪುಟ ಒಪ್ಪಿಗೆ. ಫೋಸ್ಕೋ ಕೇಸ್ನಲ್ಲಿ (Fosco Case) ಇವರ ವಿರುದ್ಧ
ಕೇಸ್ ದಾಖಲಾಗಿತ್ತು.

ಭವ್ಯಶ್ರೀ ಆರ್.ಜೆ

Exit mobile version