Mandya : 2019ರ ಲೋಕಸಭಾ ಚುನಾವಣೆಯಲ್ಲಿ (D’Boss support congress leader) ಸುಮಲತಾ ಅಂಬರೀಶ್ (Sumalatha Ambrish) ಪರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್
(Darshan) ಅಬ್ಬರದ ಪ್ರಚಾರ ಮಾಡಿದ್ದರು. ಸುಮಲತಾ ಅಂಬರೀಶ್ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಈ ಬಾರಿ ನಟ ದರ್ಶನ್ ಮಂಡ್ಯದಲ್ಲಿ ಕಾಂಗ್ರೆಸ್ (Congress)
ಅಭ್ಯರ್ಥಿ ಪರ (D’Boss support congress leader) ಮತಬೇಟೆ ನಡೆಸಲಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ (Mandya Lok Sabha Constituency) ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರನ್ನು ಹೇಗಾದರೂ ಸೋಲಿಸಲೇಬೇಕೆಂದು
ಹಠಕ್ಕೆ ಬಿದ್ದಿರುವ ಕಾಂಗ್ರೆಸ್ (Congress ) ಇದೀಗ ಪ್ರಚಾರದ ಅಖಾಡಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ರನ್ನು ಕರೆತರುತ್ತಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸುಮಲತಾ (Sumalatha)
ಅವರ ಬೆನ್ನಿಗೆ ನಿಂತಿದ್ದ ನಟ ದರ್ಶನ್ ಈ ಬಾರಿ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ಮಾಡಲು ಮುಂದಾಗಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ
ಅವರ ವಿರುದ್ಧವಾಗಿ ಮಂಡ್ಯದಲ್ಲಿ ನಟ ದರ್ಶನ್ ಅವರು ಪ್ರಚಾರಕ್ಕೆ ಧುಮುಕಿದ್ದಾರೆ.
ಇಂದು ಮಂಡ್ಯ ಲೋಕಸಭಾ (Mandya Lok Sabha) ಕ್ಷೇತ್ರದ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಶಾಸಕ ನರೇಂದ್ರಸ್ವಾಮಿ ಜೊತೆಗೂಡಿ ನಟ ದರ್ಶನ್ ಪ್ರಚಾರ ಮಾಡಲಿದ್ದಾರೆ.
ಇಂದು ಬೆಳಗ್ಗೆ 9:45ರಿಂದ ಸಂಜೆ 4:45ರವರೆಗೆ 17 ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ದರ್ಶನ್ ಮತಯಾಚನೆ ಮಾಡಲಿದ್ದಾರೆ. ದರ್ಶನ್ ಪ್ರಚಾರ ನಡೆಸುವ ಸಮಯ ಮತ್ತು ಗ್ರಾಮಗಳ ವಿವರ ಇಲ್ಲಿದೆ.
9:45 – ಹಲಗೂರು
10:15 – ಟಿ.ಕೆ.ಹಳ್ಳಿ
11:00 – ಹುಸ್ಕೂರು
11:45 – ಹಾಡ್ಲಿ ಸರ್ಕಲ್
12:15 – ಬೆಳವಾಡಿ
12.45 – ಬಿಜಿ ಪುರ
1:00 – ಸರಗೂರು ಹ್ಯಾಂಡ್ ಪೋಸ್ಟ್
1:15 – ಪೂರಿಗಾಲಿ
2:30 – ಟಿ.ಕಾಗೇಪುರ
2:45 – ದುಗ್ಗನಹಳ್ಳಿ
3:00 – ಬಂಡೂರು
3:15 – ಹಿಟ್ಟನಹಳ್ಳಿ ಕೊಪ್ಪಲು
3:30 – ಮಿಕ್ಕೆರೆ
3:45 – ಕಿರುಗಾವಲು
4:00 – ಕಿರುಗಾವಲು ಸಂತೇಮಾಳ
4:30 – ಚನ್ನಪಿಳ್ಳೆ ಕೊಪ್ಪಲು
4:45 – ಮಳವಳ್ಳಿ ಟೌನ್
ಇದನ್ನು ಓದಿ: ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ..!