New Delhi: ಇಸ್ರೇಲ್ (Israel) ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಭೀಕರ ಯುದ್ದದ ಕುರಿತು (Dissatisfaction in Congress party) ಕಾಂಗ್ರೆಸ್ ಕಾರ್ಯಕಾರಿ ಸಮಿತಿ
ಸಭೆಯಲ್ಲಿ ಪ್ಯಾಲೆಸ್ಟೀನ್ ಪರ ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ ಕಾಂಗ್ರೆಸ್ (Congress) ಕಾರ್ಯಕಾರಿ ಸಮಿತಿ ತೆಗೆದುಕೊಂಡಿರುವ ನಿರ್ಣಯದ ಬಗ್ಗೆ ಪಕ್ಷದೊಳಗೆ ಅಸಮಾಧಾನ
ಸ್ಪೋಟಗೊಂಡಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಅಂಗೀಕರಿಸಲಾದ ನಿರ್ಣಯದಲ್ಲಿ, ಇಸ್ರೇಲ್ ನಾಗರಿಕರ ಮೇಲಿನ ಉಗ್ರರ ದಾಳಿಯನ್ನು ಖಂಡಿಸಿಲ್ಲ ಎಂದು ಕೆಲವು ಕಾಂಗ್ರೆಸ್
ನಾಯಕರು ಅಸಮಾಧಾನ (Dissatisfaction in Congress party) ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಕೈಗೊಂಡಿರುವ ನಿರ್ಣಯದಲ್ಲಿ ಇಸ್ರೇಲ್ ಮೇಲೆ ಹಮಾಸ್ (Hamas) ಉಗ್ರರು ನಡೆಸಿದ ಬರ್ಬರ ದಾಳಿಯ ಕುರಿತು ಉಲ್ಲೇಖಿಸಿಲ್ಲ. ಈ ನಿಲುವು ಕಾಂಗ್ರೆಸ್ನ
ಕೆಲವು ನಾಯಕರಲ್ಲಿ ಅಸಮಾಧಾನ ಮೂಡಿಸಿದೆ. ಇದೊಂದು ಅಸಂಬದ್ಧ ಪ್ರಸ್ತಾವನೆಯಾಗಿದೆ. ಉಗ್ರರು ನಡೆಸಿದ ಭಯೋತ್ಪಾದನಾ ದಾಳಿಯನ್ನು ನಾವು ಬೆಂಬಲಿಸಿದಂತೆ ಕಾಣಿಸುತ್ತದೆ.
ಇದರಿಂದ ಕಾಂಗ್ರೆಸ್ ಪಕ್ಷ ಭಯೋತ್ಪಾದನೆಗೆ ಬೆಂಬಲ ನೀಡಿದಂತೆ ಆಗುತ್ತದೆ. ಇದಕ್ಕೆ ತೀವ್ರ ವಿರೋಧ ಎದುರಾಗಲಿದೆ ಎಂದು ಕಾರ್ಯಕಾರಿ ಸದಸ್ಯರೊಬ್ಬರು ಸಭೆಯಲ್ಲಿಯೇ ಹೇಳಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ನಿರ್ಣಯದಲ್ಲಿ ಹಮಾಸ್ ಉಗ್ರರ ಕುರಿತು ಯಾವ ಉಲ್ಲೇಖವಿಲ್ಲ ಹಾಗೂ ಉಗ್ರವಾದ ಪದವೂ ಇರಲಿಲ್ಲ ಹೀಗಾಗಿ ಈ ಬಗ್ಗೆ ಸಂಸದ ಶಶಿ ತರೂರ್ (Shashi Tarur),
ಪವನ್ ಕುಮಾರ್ ಬನ್ಸಾಲ್ ಸೇರಿದಂತೆ ಕೆಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ಯಾಲಸ್ಟೀನ್ (Palestine) ಪರ ಪಕ್ಷದ ಬದ್ಧತೆಯನ್ನು ಪ್ರತಿಪಾದಿಸಿದರೂ, ಹಮಾಸ್ ಉಗ್ರರ ದಾಳಿಯನ್ನು
ಖಂಡಿಸಬೇಕು ಎಂದು ಸಂಸದ ರಮೇಶ್ ಚೆನ್ನಿತಲ ಅವರು ಸಭೆಯಲ್ಲಿ ಒತ್ತಾಯಿಸಿದರು ಎನ್ನಲಾಗಿದೆ.
ಇನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಕೈಗೊಂಡಿರುವ ನಿರ್ಣಯ ಇದೀಗ ಟೀಕೆಗೆ ಗುರಿಯಾಗಿದೆ. ಹಮಾಸ್ ಉಗ್ರರ ದಾಳಿಯನ್ನು ಖಂಡಿಸದ ಕಾಂಗ್ರೆಸ್ ಪಕ್ಷ, ಸಂತ್ರಸ್ತರಾದವರ ಪರ ಧ್ವನಿ
ಎತ್ತುವ ಬದಲಾಗಿ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಸಂಸದ ತೇಜಸ್ವಿಸೂರ್ಯ (Tejaswi Surya) ಅವರು, ಮೋದಿ
(Modi) ಬರುವವರೆಗೂ
ಭಾರತದ ವಿದೇಶಾಂಗ ನೀತಿಯು ಕಾಂಗ್ರೆಸ್ನ ಅಲ್ಪಸಂಖ್ಯಾತ ಮತ ಬ್ಯಾಂಕ್ ರಾಜಕಾರಣಕ್ಕೆ ಹೇಗೆ ಬಂಧಿಯಾಗಿತ್ತು ಎಂಬುದಕ್ಕೆ ಇಸ್ರೇಲ್ ಯುದ್ಧ ಕುರಿತಾದ ಕಾಂಗ್ರೆಸ್ ಸಿಡಬ್ಲ್ಯೂಸಿ (CWD)
ನಿರ್ಣಯವು ಅತ್ಯುಷ್ಕೃಷ್ಟ ಉದಾಹರಣೆಯಾಗಿದೆ. 2024ರಲ್ಲಿ ಜಾಗರೂಕರಾಗಿ ಇರದೇ ಹೋದಲ್ಲಿ ಸಂಗತಿಗಳು ಎಷ್ಟು ತ್ವರಿತವಾಗಿ ಶೂನ್ಯಕ್ಕೆ ಹೋಗುತ್ತವೆ ಎಂಬುದಕ್ಕೂ ಇದು ಒಂದು
ಜ್ಞಾಪನೆಯಾಗಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿ: ಬೆಂಗಳೂರಿನ ಮೊದಲ ಶತ್ರು ಬಿಬಿಎಂಪಿ ಎಂದು ಪಾಲಿಕೆ ವಿರುದ್ಧ ತೀವ್ರ ಅಸಮಾಧಾನ: ಕರ್ನಾಟಕ ಹೈಕೋರ್ಟ್