ನಗರಗಳಲ್ಲಿ ವಾಸಿಸುವವರಿಗೆ ಮಧುಮೇಹ ಅಂದರೆ ಸಕ್ಕರೆ ಕಾಯಿಲೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ವಯಸ್ಸು 30 ದಾಟಿದ (dryfruits uses for diabetes) ಮೇಲೆ ಮಧುಮೇಹ
ಸಮಸ್ಯೆ ಹೆಚ್ಚಾಗಿ ಜನರಲ್ಲಿ ಕಾಡುತ್ತಿದ್ದು, ಇನ್ನು ತಜ್ಞರು ಹೇಳುವ ಪ್ರಕಾರ ಈ ಕಾಯಿಲೆ ಕೆಲವರಿಗೆ ಹುಟ್ಟುವಾಗಲೇ ಅನುವಂಶೀಯವಾಗಿ ಬಂದು ಬಿಟ್ಟಿರುತ್ತದೆ ಮತ್ತು ಇನ್ನೂ ಕೆಲವರಿಗೆ
ತಾವು ಅನುಸರಿಸುತ್ತಿರುವ ಜೀವನಶೈಲಿ, ಆಹಾರ ಪದ್ಧತಿಯಿಂದಾಗಿ, ಮಧುಮೇಹ (dryfruits uses for diabetes) ಹುಟ್ಟಿಕೊಳ್ಳುತ್ತದೆ.
ಮಧುಮೇಹಕ್ಕೆ ಕಾರಣಗಳು
1) ನಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿಯಾಗಿ, ಇನ್ಸುಲಿನ್ (Insulin) ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದಾಗ ಇದನ್ನು ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಎಂದು ಹೇಳಲಾಗುತ್ತದೆ.
2) ದೇಹದಲ್ಲಿ ಸಮರ್ಪಕ ಪ್ರಮಾಣದಲ್ಲಿ ಇನ್ಸುಲಿನ್ ಮತ್ತು ಪ್ಯಾಂಕ್ರಿಯಾಸ್ (Pancreas) ಗ್ರಂಥಿ ದೇಹಕ್ಕೆ ಅಗತ್ಯಕ್ಕೆ ಬೇಕಾಗುವಷ್ಟು,ಇನ್ಸುಲಿನ್ ಉತ್ಪತ್ತಿಯ ಪ್ರಕ್ರಿಯೆಯನ್ನು ಮಾಡದೇ ಇದ್ದರೆ ರಕ್ತದಲ್ಲಿನ
ಸಕ್ಕರೆಯ ಮಟ್ಟ ನಿಧಾನವಾಗಿ ಹೆಚ್ಚಾಗುತ್ತಾ ಹೋಗುತ್ತದೆ. ಇದನ್ನೇ ಸಕ್ಕರೆ ಕಾಯಿಲೆ ಎನ್ನಲಾಗುತ್ತದೆ.
3) ಗ್ಲೂಕೋಸ್ ಅಂಶ ನಾವು ಪ್ರತಿದಿನ ಸೇವನೆ ಮಾಡುವ ಆಹಾರದಿಂದ ನಮ್ಮ ದೇಹದ ರಕ್ತಕ್ಕೆ ಸೇರುತ್ತದೆ. ಇದನ್ನು ಇನ್ಸುಲಿನ್ ಪ್ರಮಾಣ ನಿಯಂತ್ರಣ ಮಾಡುತ್ತದೆ.
ಡ್ರೈ ಫ್ರೂಟ್ ಸೇವಿಸುವ ವಿಧಾನ
ನೆನೆಸಿಟ್ಟ ಬಾದಾಮಿ ಬೀಜಗಳಲ್ಲಿ ಅಧಿಕ ಪ್ರಮಾಣದ ಪ್ರೋಟೀನ್ (Protein) ಅಂಶ ಇದ್ದು, ಅಧಿಕ ಪ್ರಮಾಣಲ್ಲಿ ಸೆಲೆನಿಯಂ ,ನಾರಿನಾಂಶ, ತಾಮ್ರ ಜಿಂಕ್, ಇರುವುದರಿಂದ ನಮ್ಮ ರಕ್ತದಲ್ಲಿನ ಸಕ್ಕರೆ
ಪ್ರಮಾಣವನ್ನು ನಿಯಂತ್ರಣ ಮಾಡುವಲ್ಲಿ ಸಹಾಯ ಮಾಡುತ್ತದೆ.
ಪಿಸ್ತಾ ಬೀಜಗಳಲ್ಲಿ, ಆಂಟಿ ಆಕ್ಸಿಡೆಂಟ್ಸ್ (Antioxidants) ಅಂಶಗಳು ಅಧಿಕವಾಗಿದ್ದು ಇತರ ನಟ್ಸ್ ಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಮತ್ತುಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಗಳಿರುವುದರಿಂದ
ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಪಿಸ್ತಾ ಬೀಜಗಳನ್ನು ಮಿತವಾಗಿ ಸೇವನೆ ಮಾಡಿದರೆ ಒಳ್ಳೆಯದು.
ಮಧುಮೇಹಿಗಳಿಗೆ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಅತೀ ನಿಧಾನವಾಗಿ ಬಿಡುಗಡೆ ಮಾಡಲು ವಾಲ್ ನಟ್ಸ್ (Walnuts) ಅಥವಾ
ಅಕ್ರೋಟನ್ನು ನೆನೆಸಿಟ್ಟು ಸೇವಿಸುವ ಅಭ್ಯಾಸ ಮಾಡಿ ಕೊಂಡರೆ, ಮಧುಮೇಹವನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ.
ಮಧುಮೇಹ ಇರುವವರು ಒಣದ್ರಾಕ್ಷಿಯಲ್ಲಿ ನೈಸರ್ಗಿಕ ಸಿಹಿ ಮತ್ತು ನಾರಿನಾಂಶ ಆಗಾಧ ಪ್ರಮಾಣದಲ್ಲಿ ಇರುವುದರಿಂದ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ಮಿತ
ಪ್ರಮಾಣದಲ್ಲಿ ಸೇವಿಸಿದರೆ ಒಳ್ಳೆಯದು ಎಂದು ಆರೋಗ್ಯ ತಜ್ಞರೇ ಹೇಳುತ್ತಾರೆ.
ಹಾಗೆ ಸೇವಿಸುವ ಬದಲು ರಾತ್ರಿ ಮಲಗುವ ಮುನ್ನ, ಒಂದು ಲೋಟ ನೀರಿನಲ್ಲಿ ಮೂರು – ನಾಲ್ಕು ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು, ಮರುದಿನ ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ ಒಳ್ಳೆಯದು.
ಇದನ್ನು ಓದಿ: ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ತುರ್ತು ಸರ್ಕಾರ ರಚನೆ: ಯುದ್ದಕ್ಕಾಗಿ ಒಂದಾದ ಇಸ್ರೇಲ್ ರಾಜಕಾರಣಿಗಳು
- ಮೇಘಾ ಮನೋಹರ ಕಂಪು