ಕೆಲಸಕ್ಕಾಗಿ ದುಬೈಗೆ ಹೊರಟಿದ್ದೀರಾ

Karnataka: ಜಾಬ್‌ ಆಸೆ ತೋರಿಸೋ ಭಾರತದ ಸುದೀಪ್(Sudip) ಮತ್ತು ಪ್ರದೀಪ್(Pradeep) ಸಹೋದರರು ನಿಮ್ಮನ್ನು ಪಾಕ್‌ ತಂಡಕ್ಕೆ ಬಲಿ ಕೊಡ್ತಾರೆ. ಹಣದಾಸೆಗೆ ಈ ವಂಚಕರ ಜಾಲಕ್ಕೆ(dubai job scam) ಬೀಳಬೇಡಿ.

ಭಾರತದ ಯುವಕರೇ ಪಾಕ್ ತಂಡದ ಟಾರ್ಗೆಟ್‌ . ಭಾರತದ ಸುದೀಪ್‌ – ಪ್ರದೀಪನಿಂದ ಭಾರತೀಯರಿಗೇ ವಂಚನೆ ನಡೆಯುತ್ತಿದೆ. ಯುವಕರೇ ದುಬೈಗೆ ಜಾಬ್‌ಗೆ ಹೋಗೋ ಮುನ್ನ ಎಚ್ಚರ !

ಕೆಲಸಕ್ಕಾಗಿ ದುಬೈ ಹೊರಟಿದ್ದೀರಾ? ಆರೇ ತಿಂಗಳ ಕೆಲಸ ಕೈತುಂಬಾ ಸಂಬಳ!

ಹಾಗಾದ್ರೆ ಎಚ್ಚರ ! ಇದೊಂದು ದೊಡ್ಡ ವಂಚನಾ ಜಾಲ. ಭಾರತದ ಯುವಕರ ಬಲಿಗಾಗಿ ಕಾಯುತ್ತಿದೆ ಪಾಕಿಸ್ತಾನದ ಖತರ್ನಾಕ್‌ ತಂಡ. ಈ ತಂಡ ಯುವಕರಿಗೆ ಆರೇ ತಿಂಗಳು ಕೆಲಸ ಮಾಡುವ,

ಕೈ ತುಂಬಾ ಸಂಬಳ ಸಿಗುವ ಕೆಲಸ ಕೊಡಿಸ್ತೀವಿ ಅಂತ ಹೇಳುತ್ತೆ. ಕೆಲಸ ಕೊಡೋ ನೆಪದಲ್ಲಿ ಯುವಕರನ್ನು ದುಬೈಗೆ ಕರೆಸುತ್ತೆ, ಊಟ ವಸತಿ ವ್ಯವಸ್ಥೆ ಮಾಡುತ್ತೆ. ಅದ್ರೆ ಆಮೇಲೆ ನಡೆಯೋದೇ ಬೇರೆ.

ಇದನ್ನೂ ಓದಿ: ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧೀಯವರ ಹತ್ಯೆ ಆಕಸ್ಮಿಕ : ಬಿಜೆಪಿ ಸಚಿವ ಗಣೇಶ್ ಜೋಷಿ

ಆದ್ರೆ ಈ ಪಾಪಿಗಳ ತಂಡಕ್ಕೆ ಭಾರತದ ಯುವಕರನ್ನು ಸಪ್ಲೈ ಮಾಡ್ತಿರೋದು ಯಾರು ಗೊತ್ತಾ? ನಮ್ಮದೇ ಭಾರತದ,

ಕುಂದಾಪುರದ ಬೈಂದೂರು-ಶಿರೂರಿನ ಸುದೀಪ್ ಹಾಗೂ ಪ್ರದೀಪ್‌ ಸಹೋದರರು. ಕೆಲಸದ ಹುಡುಕಾಟದಲ್ಲಿರುವ ಸ್ಥಳೀಯ ಯುವಕರೇ ಇವರ ಟಾರ್ಗೆಟ್.

ಬ್ಯಾಂಕ್‌ ಖಾತೆ ತೆಗೆದು ,ಕೋಟಿ ಕೋಟಿ ಲೋನ್‌ ಮಾಡ್ತಾರೆ

ಈ ಪಾಕ್‌ ತಂಡ ನಿಮಗೆ ಗೊತ್ತಿಲ್ಲದೇ ನಕಲಿ ದಾಖಲೆ ಸೃಷ್ಟಿಸಿ ನಿಮ್ಮ ಹೆಸರಲ್ಲಿ ದುಬೈ ಬ್ಯಾಂಕ್‌ಗಳಲ್ಲಿ ಕೋಟಿ ಕೋಟಿ ಲೋನ್‌ ಮಾಡುತ್ತೆ.

ನಿಮಗೆ ಕೆಲಸದ ಸಂಬಳ ಅಂತ ಹೇಳಿ ಬರೀ ಮೂರುವರೆ ಲಕ್ಷ ಹಣ (dubai job scam) ಕೊಟ್ಟು ನಿಮ್ಮನ್ನು ವಾಪಾಸ್‌ ಊರಿಗೆ ಕಳುಹಿಸ್ತಾರೆ.

ಆದ್ರೆ ಊರಿಗೆ ತಲುಪಿದ ಮೇಲೆ ನಿಮ್ಮ ಮನೆಗೆ ಪೊಲೀಸ್‌ ಬಂದಾಗ್ಲೇ ಗೊತ್ತಾಗೋದು ನೀವು ಮೋಸ ಹೋಗಿದ್ದೀರಿ ಅಂತ.

ಒಮ್ಮೆ ಇವರ ವಂಚನಾ ಜಾಲಕ್ಕೆ ಸಿಕ್ರೆ ನೀವು ಬಚಾವಾಗೋದೇ ಕಷ್ಟ. ಒಂದಾ ನೀವು ಪರ್ಮನೆಂಟಾಗಿ ಜೈಲು ಸೇರಬೇಕು,

ಇಲ್ವಾ ಅವರು ಮಾಡಿ ಕೋಟಿ ಸಾಲ ತೀರಿಸಬೇಕು. ಅಲ್ಲದೆ ನೀವು ಆಮೇಲೆ ಅರಬ್ ದೇಶಗಳಿಗೆ ಕಾಲಿಡಲು ಸಾಧ್ಯವೇ ಇಲ್ಲ.

ಸುದೀಪ್‌-ಪ್ರದೀಪ್‌ನಂಥಾ ದೇಶದ್ರೋಹಿಗಳು ಮಾಡಿರುವ ಮೋಸಕ್ಕೆ ಸಾವಿರಾರು ಯುವಕರು ಬಲಿಯಾಗಿದ್ದಾರೆ. ಅದೆಷ್ಟೋ ಕುಟಂಬಗಳು ಬೀದಿ ಪಾಲಾಗಿವೆ. ಕೆಲವರು ಆತ್ಮಹತ್ಯೆ ಕೂಡ ಮಾಡಿದ್ದಾರೆ.

ಆದ್ರೆ ಈ ಖತರ್ನಾಕ್‌ ಸಹೋದರರ ಅಟ್ಟಹಾಸಕ್ಕೆ ಬ್ರೇಕ್ ಬೀಳುತ್ತಲೇ ಇಲ್ಲ. ಯಾಕಂದ್ರೆ ಇವರ ಲಂಚದ ಪ್ರಸಾದ ತಿನ್ನುತ್ತಿರುವ ಪೊಲೀಸರು ಇವರ ವಿರುದ್ಧ ದೂರು ಕೊಟ್ರು ಕ್ರಮಕೈಗೊಳ್ಳುತ್ತಿಲ್ಲ.

Exit mobile version