ಕರಾವಳಿ ಕಂಬಳ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳಕ್ಕೆ ಅಂತಿಮ ಸಿದ್ಧತೆ

Bengaluru: ನಗರದ ಅರಮನೆ ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ (ನ.25 ಮತ್ತು 26) ನಡೆಯಲಿರುವ ಕರಾವಳಿಯ ಪ್ರಸಿದ್ಧ ಕಂಬಳಕ್ಕೆ (final preparations for kambala) ಅಂತಿಮ

ಹಂತದ ಸಿದ್ಧತೆಗಳು (final preparations for kambala) ಭರದಿಂದ ಸಾಗಿದೆ.

ಸುಮಾರು 700 ವರ್ಷ ಇತಿಹಾಸವುಳ್ಳ ಕಂಬಳ ಮಂಗಳೂರಿನಿಂದ ಈಗ ಬೆಂಗಳೂರಿಗೆ ಬಂದಿರುವುದು ರಾಜ್ಯ ರಾಜಧಾನಿಯ ಜನರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದ್ದು, ಕಂಬಳ ಕೇವಲ ಕ್ರೀಡೆಯಲ್ಲ,

ಜಾನಪದ, ಸಾಂಸ್ಕೃತಿಕ ಮತ್ತು ಧಾರ್ವಿುಕ ಹಿನ್ನೆಲೆ ಹೊಂದಿರುವ ಕರಾವಳಿಯ ಮನೋರಂಜನಾ ಉತ್ಸವ. ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ ರೈ (Ashok Rai) ಮಾಹಿತಿ ನೀಡಿದ್ದಾರೆ.

ಖಾಸಗಿ ಹೊಟೇಲ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಸರಗೋಡಿನಿಂದ ಮರವಂತೆವರೆಗಿನ ಎಲ್ಲ ಸಮುದಾಯದ ಕರಾವಳಿ ಭಾಗದ 18 ಲಕ್ಷ ಜನ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಅವರೆಲ್ಲರ ಸಂಕಲ್ಪ ಮತ್ತು ಕನಸು ‘ಬೆಂಗಳೂರು ಕಂಬಳ- ನಮ್ಮ ಕಂಬಳ’ ಕಾರ್ಯಕ್ರಮದ ಮೂಲಕ ಸಾಕಾರಗೊಂಡಿದೆ ಎಂದರು. ಬೆಂಗಳೂರು ಕಂಬಳಕ್ಕೆ ಕರಾವಳಿಯ 69 ವಿವಿಧ ಸಂಘ-ಸಂಸ್ಥೆಗಳು

ಸಹಕಾರ ನೀಡಿವೆ. ಕಂಬಳದಲ್ಲಿ ಪಾಲ್ಗೊಳ್ಳಲು 250ಕ್ಕೂ ಹೆಚ್ಚು ಕೋಣಗಳ ಮಾಲೀಕರು ಹೆಸರು ನೋಂದಾಯಿಸಿದ್ದರು. ಅಂತಿಮವಾಗಿ 200 ಜೋಡಿ ಆಯ್ಕೆ ಮಾಡಲಾಗಿದ್ದು, ಎಲ್ಲ ಸಮುದಾಯದ ಮಾಲೀಕರು

ಇದರಲ್ಲಿ ಒಳಗೊಂಡಿದ್ದಾರೆ ಎಂದು ಪ್ರಕಾಶ್ ಶೆಟ್ಟಿ (Prakash Shetty) ತಿಳಿಸಿದರು.

ಸಿಲಿಕಾನ್ ಸಿಟಿಯಲ್ಲಿ ಕರಾವಳಿ ಸಂಸ್ಕೃತಿ ಅನಾವರಣ
ಕಂಬಳದ ಜತೆಗೆ ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಯಕ್ಷಗಾನ, ಹುಲಿವೇಷ, ವಿವಿಧ ಜಾನಪದ ನೃತ್ಯಗಳು ಸೇರಿ ಸಾಂಸ್ಕೃತಿಕ

ಕಾರ್ಯಕ್ರಮ ಸಂಗೀತ ನಿರ್ದೇಶಕ ಗುರುಕಿರಣ್ (Gurukiran) ಮುಂದಾಳತ್ವದಲ್ಲಿ ನಡೆಯಲಿವೆ.

ವಿಶೇಷವಾಗಿ 180 ಫುಡ್ ಸ್ಟಾಲ್​ಗಳಿಗೆ (Food Street) ಅವಕಾಶ ನೀಡಲಾಗಿದ್ದು, ರಾಜಧಾನಿ ಜನರಿಗೆ ಕರಾವಳಿಯ ತಿಂಡಿ-ತಿನಿಸುಗಳು ಲಭ್ಯವಾಗಲಿವೆ. 24ರಂದು ತುಳುಕೂಟದ ಸುವರ್ಣ ಮಹೋತ್ಸವ

ಅಂಗವಾಗಿ ವಿಶ್ವ ತುಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಖ್ಯಾತನಾಮರ ಆಗಮನ ನಿರೀಕ್ಷೆ
ಕಂಬಳ ನಡೆಯುವ ಎರಡು ದಿವಸದಲ್ಲಿ ಅನೇಕ ಖ್ಯಾತನಾಮರು ಬರುವ ನಿರೀಕ್ಷೆಯಿದೆ. ವಾಣಿಜ್ಯ ಒಪ್ಪಂದ ಇಲ್ಲದಿರುವುದರಿಂದ ಸೆಲೆಬ್ರೆಟಿಗಳ (Celebrities) ಆಗಮನದ ಬಗ್ಗೆ ನಿಖರ ವಾಗಿ

ಹೇಳಲು ಸಾಧ್ಯವಿಲ್ಲ. ಆದರೂ ಅನುಷ್ಕಾ ಶೆಟ್ಟಿ ಬರುವುದು ಖಾತ್ರಿಯಾಗಿದ್ದು, ಕನ್ನಡ ಚಿತ್ರರಂಗದ ಅನೇಕರು ಆಗಮಿಸಲಿದ್ದಾರೆ. ಜತೆಗೆ ಸಿಎಂ, ಡಿಸಿಎಂ, ಮಾಜಿ ಸಿಎಂ, ಸಚಿವರು, ಶಾಸಕರು

ಕಾರ್ಯಕ್ರಮಕ್ಕೆ ಬರಲಿದ್ದಾರೆಂದು ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದರು.

ಕೋಣಗಳ ಸ್ವಾಗತಕ್ಕೆ ಸಿದ್ಧತೆ
ಗುರುವಾರ (ನ.23) ಬೆಳಗ್ಗೆ ಉಪ್ಪಿನಂಗಡಿಯಿಂದ ಹೊರಡುವ ಕೋಣಗಳು ಸಂಜೆ 4 ಗಂಟೆಗೆ ಹಾಸನಕ್ಕೆ ಬರಲಿವೆ. ಹಾಸನದಲ್ಲಿ ಶಾಸಕ ಎಚ್.ಡಿ. ರೇವಣ್ಣ (H. D. Revanna) ಅವರು ಕೋಣಗಳು

ಮತ್ತು ಜೊತೆಗೆ ಬಂದವರಿಗೆ ಆಹಾರ ಮತ್ತು ವಿಶ್ರಾಂತಿಯ ವ್ಯವಸ್ಥೆ ಮಾಡಿದ್ದಾರೆ. ಗುರುವಾರ ರಾತ್ರಿ ಬೆಂಗಳೂರಿಗೆ ಬರುವ ಕೋಣಗಳನ್ನು ಮೆರವಣಿಗೆ ಮೂಲಕ ಅದ್ದೂರಿ ಸ್ವಾಗತದೊಂದಿಗೆ

ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದನ್ನು ಓದಿ: ಏರ್ ಇಂಡಿಯಾಗೆ ೧೦ ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ: ಕಾರಣ ಹೀಗಿದೆ.

Exit mobile version