ಗುಜರಾತ್ ಮಾದರಿ ಸೌರಫಲಕ ಬಳಸಿ ವಿದ್ಯುತ್ ಉತ್ಪಾದಿಸಿ; ನಟ ಅನಿರುದ್ಧ್ ಮನವಿ

ಬೆಂಗಳೂರು, ಡಿ. 31: ರಾಜ್ಯದಲ್ಲೂ ಸೌರ ಫಲಕಗಳನ್ನು ಬಳಸಿಕೊಂಡು ‌ವಿದ್ಯುತ್ ಉತ್ಪಾದನೆ ಮಾಡುವ ನಿಟ್ಟಿನಲ್ಲಿ
ಗುಜರಾತ್ ಮಾದರಿಯನ್ನು ಅನುಸರಿಸುವಂತೆ ನಟ ಅನಿರುದ್ಧ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮನವಿ ಮಾಡಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಲೇಖನವೊಂದನ್ನು ಶೇರ್‌ ಮಾಡಿರುವ ಅನಿರುದ್ಧ್, ನಮ್ಮ ರಾಜ್ಯದಲ್ಲಿ ತೆರೆದ ಕಾಲುವೆಗಳನ್ನು ಮುಚ್ಚಿ ಗುಜರಾತ್‌ ಮಾದರಿಯಲ್ಲಿ ವಿದ್ಯುತ್ಚಕ್ತಿ ಉತ್ಪಾದನೆಗೆ ಸೌರಫಲಕಗಳನ್ನ ಬಳಸಬಹುದು ಮತ್ತು ಎರಡೂ ಬದಿಯಲ್ಲಿ ಗೋಡೆಗಳನ್ನು ಕಟ್ಟಿ ಅವುಗಳ ಮೇಲೆ ವರ್ಟಿಕಲ್‌ ಗಾರ್ಡನಿಂಗ್‌ ಮಾಡಬಹುದು.‌ ಈ ನಿಟ್ಟಿನಲ್ಲಿ ‌ಕ್ರಮವಹಿಸುವ ಕುರಿತು ಮುಖ್ಯಮಂತ್ರಿಗಳಿಗೆ ಸಲಹೆ ಜತೆಗೆ ಮನವಿಯನ್ನು ಮಾಡಿಕೊಂಡಿದ್ದಾರೆ.

Exit mobile version