• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಹವಾಯಿಯ ಮಾಯಿ ದ್ವೀಪದಲ್ಲಿ ಹಬ್ಬಿದ ಕಾಡ್ಗಿಚ್ಚು: ಮೃತರ ಸಂಖ್ಯೆ 53 ಕ್ಕೆ ಏರಿಕೆ, ಬದುಕುಳಿದವರಿಗಾಗಿ ಶೋಧ, ಲಹೈನಾ ಪಟ್ಟಣ ಸುಟ್ಟು ಕರಕಲು

Rashmitha Anish by Rashmitha Anish
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಹವಾಯಿಯ ಮಾಯಿ ದ್ವೀಪದಲ್ಲಿ ಹಬ್ಬಿದ ಕಾಡ್ಗಿಚ್ಚು: ಮೃತರ ಸಂಖ್ಯೆ 53 ಕ್ಕೆ ಏರಿಕೆ, ಬದುಕುಳಿದವರಿಗಾಗಿ ಶೋಧ, ಲಹೈನಾ ಪಟ್ಟಣ ಸುಟ್ಟು ಕರಕಲು
0
SHARES
326
VIEWS
Share on FacebookShare on Twitter

America : ಅಮೆರಿಕದ ಪೆಸಿಫಿಕ್ ಮಹಾಸಾಗರದ(Pacific Ocean) ಮಧ್ಯಭಾಗದಲ್ಲಿರುವ ಐತಿಹಾಸಿಕ ಪ್ರವಾಸಿ ದ್ವೀಪ ಪಟ್ಟಣವಾದ ಮಾಯಿ ಅರಣ್ಯದ (Hawaiis Maui Island forestfires)

ಸ್ಥಿತಿ ತುಂಬಾ ಕೆಟ್ಟದಾಗಿದೆ. ಮಾಯಿ ಅರಣ್ಯದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಅರಣ್ಯ ಕಾಡ್ಗಿಚ್ಚು ಸದ್ಯಕ್ಕೆ ಆರುವಂತೆ ಕಾಣಿಸುತ್ತಿಲ್ಲ, ವೇಗವಾಗಿ ಅರಣ್ಯದ ತುಂಬೆಲ್ಲಾ ಹಬ್ಬುತ್ತಿದೆ.

ಜನರನ್ನು ಸ್ಥಳಾಂತರಿಸುವ ಸಮಯದಲ್ಲಿ ಲಾಹೈನಾ(Lahaina) ಪಟ್ಟಣದಲ್ಲಿ ಬೆಂಕಿಗೆ ಸಿಲುಕಿ ಕನಿಷ್ಠ 53 ಮಂದಿ ಸಾವನ್ನಪ್ಪಿದ್ದಾರೆ, ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದವರು

ನಿರಂತರ ಪ್ರಯತ್ನಿಸುತ್ತಿದ್ದಾರೆ.ಆಗಸ್ಟ್‌ 9 ರಿಂದ ಹವಾಯಿಯ ಮಾಯಿಯಲ್ಲಿ ಭಾರಿ ಕಾಡ್ಗಿಚ್ಚು ಆವರಿಸಿದೆ.

Hawaiis Maui Island forestfires

ಹವಾಯಿಯ(Hawaii) ಮಾಯಿ ದ್ವೀಪದಲ್ಲಿರುವ(Maui Island) ಐತಿಹಾಸಿಕ ಪಟ್ಟಣವಾದ ಲಹೈನಾವನ್ನು ಕಾಡ್ಗಿಚ್ಚು(Forest Fire) ಸಂಪೂರ್ಣ ನೆಲಸಮಗೊಳಿಸಿದೆ. ಈ ಕಾಡ್ಗಿಚ್ಚಿನಿಂದಾಗಿ

ಕನಿಷ್ಠ 53 ಜನರು ಈವರೆಗೆ ಸಾವನ್ನಪ್ಪಿದ್ದಾರೆ ಮತ್ತು ಈಗಾಗಲೇ ಇಲ್ಲಿಂದ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಅನೇಕ ನೆರೆಹೊರೆಯ ವನ್ಯಜೀವಿಗಳು ಸಹ ಈ ಕಾಡ್ಗಿಚ್ಚಿನೊಂದಿಗೆ

ವೇಗವಾಗಿ ಬೀಸಿದ ಗಾಳಿಯಿಂದ (Hawaiis Maui Island forestfires) ಸುಟ್ಟುಭಸ್ಮವಾಗಿವೆ.

ಈವರೆಗೆ 1,700ಕ್ಕೂ ಹೆಚ್ಚು ಕಟ್ಟಡಗಳು ಮತ್ತು ಶತಕೋಟಿ ಡಾಲರ್ ಆಸ್ತಿ ‘ಕಾಡ್ಗಿಚ್ಚಿಗೆ ನಾಶವಾಗಿದೆ ಎಂದು ಗುರುವಾರ ಸಿಎನ್‌ಎನ್‌ಗೆ(CNN) ಹವಾಯಿ ಗವರ್ನರ್ ಜೋಶ್ ಗ್ರೀನ್ (Josh Green)

ಅವರು ಈ ಬಗ್ಗೆ ಮಾತನಾಡಿ ಹೇಳಿದರು. ಲಹೈನಾ ಎಲ್ಲವೂ ಸುಟ್ಟು ಕರಕಲಾಗಿದೆ”,”ನಾನು ನೋಡಿರದ ಅತ್ಯಂತ ಕೆಟ್ಟ ದುರಂತ ಇದಾಗಿದೆ ಎಂದು ಅಲ್ಲಿಯ ಸ್ಥಳೀಯ ನಿವಾಸಿ ಮೇಸನ್

ಜಾರ್ವಿ (Mason Jarvey) ಲಹೈನಾದಲ್ಲಿ ಕಾಡ್ಗಿಚ್ಚಿನ ಅಪಾಯವನ್ನು ವಿವರಿಸಿ ಹೇಳಿದ್ದಾರೆ.

ಗುರುವಾರ ಬೆಳಗಿನ ವೇಳೆಗೆ 80 ಪ್ರತಿಶತದಷ್ಟು ಲಹೈನಾವನ್ನು ಸುಟ್ಟುಹಾಕಿದ ಬೆಂಕಿಯು ಆವರಿಸಿದೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ಲಹೈನಾ ಮತ್ತು ಅಲ್ಲಿಯ ಸುತ್ತಮುತ್ತಲಿನ

ಕೆಲವು ಪ್ರದೇಶಗಳು ವ್ಯಾಪಕವಾಗಿ ವಿನಾಶ ಆಗುತ್ತಿರುವುದನ್ನು ಗಮನಿಸಿ 14,000 ಕ್ಕೂ ಹೆಚ್ಚು ಜನರನ್ನು ಬುಧವಾರದ ವೇಳೆಗೆ ಮಾಯಿಯಿಂದ ಸ್ಥಳಾಂತರಿಸಿದ್ದಾರೆ. ರಾತ್ರೋರಾತ್ರಿ ಲಹೈನಾನಲ್ಲಿ

ಬೆಂಕಿ ಬಿದ್ದಿದ್ದು ಪಟ್ಟಣದ ಸುಮಾರು ಭಾಗ ಈಗಾಗಲೇ ಬಾರಿ ಗಾಳಿಯಿಂದ ಉರಿದುಹೋಗಿದೆ,ಪೊಲೀಸರು (Police) ಟ್ಟೀಟ್‍ (Tweet) ಮೂಲಕ ಪ್ರವಾಸಿಗರು ಈ ದ್ವೀಪಕ್ಕೆ ಹೋಗಬೇಡಿ ಎಂದು

ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ : ಸಮಸ್ಯೆಗಳ ಸಾಗರದಲ್ಲಿ ನಲುಗಿ ಹೋಗಿರುವ ಪಾಕಿಸ್ತಾನದಲ್ಲಿ ಇದೀಗ ಸಂಸತ್ ವಿಸರ್ಜನೆ, ಮುಂದಿನ ಕಥೆ ಏನು?

ಪಶ್ಚಿಮ ಮಾಯಿಯಲ್ಲಿ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ ಇಲ್ಲಿ ಅತಿದೊಡ್ಡ ಜನ ಸಮುದಾಯ ವಾಸಿಸುತ್ತಿದ್ದಾರೆ ಆದ್ದರಿಂದ ತುರ್ತು ಸಿಬ್ಬಂದಿ ಹೊರತುಪಡಿಸಿ ಎಲ್ಲರಿಗೂ ರಸ್ತೆ ಬಂದ್ ಮಾಡಲಾಗಿದೆ.

ಶುಷ್ಕ ಗಾಳಿ ಇರುವ ಕಾರಣ ಅಲ್ಲಿ ಮಾನವ ಚಟುವಟಿಕೆಯಿಂದ ಉಂಟಾದ ಬೆಂಕಿಯು ಬೇಗನೆ ಪಸರಿಸಿ ಕ್ಷಣ ಮಾತ್ರದಲ್ಲಿ ಇಡೀ ಪಟ್ಟಣದಲ್ಲಿ ವ್ಯಾಪಿಸಿದೆ. ಇಬ್ಬರು ಮಕ್ಕಳು ಬೆಂಕಿ ಮತ್ತು ಹೊಗೆಯ

ವಾತಾವರಣದಿಂದ ತಪ್ಪಿಸಿಕೊಳ್ಳಲು ಸಾಗರಕ್ಕೆ ದುಮುಕಿದ್ದರು ಇದೀಗ ಅಮೆರಿಕ ಕೋಸ್ಟ್ ಗಾರ್ಡ್ (Coast Guard) ಆ ಮಕ್ಕಳೂ ಸೇರಿದಂತೆ 14 ಜನರನ್ನು ರಕ್ಷಿಸಿದ್ದಾರೆ.

Hawaiis Maui Island forestfires

ಈ ಪಟ್ಟಣದಲ್ಲಿ ಇರುವ ಅಗ್ನಿಶಾಮಕ ಠಾಣೆ ಈಗಾಗಲೇ ಬಹುತೇಕವಾಗಿ ಹಾನಿಯಾಗಿದ್ದು ,ಅಲ್ಲದೆ ಬೆಂಕಿಯಿಂದ ಅಗ್ನಿಶಾಮಕ ಹೆಲಿಕಾಪ್ಟರ್ (Helicopter) ಕೂಡ ಬೂದಿಯಾಗಿದೆ. ಪ್ರಸ್ತುತ ದ್ವೀಪದ

ಒಂದು ಭಾಗ ಸಂಪೂರ್ಣ ನಾಶವಾಗಿದೆ ಅಲ್ಲದೆ ಪರಿಸ್ಥತಿ ಸ್ವಲ್ಪ ಹತೋಟಿಗೆ ಬಂದಿದೆ. ವಿನಾಶಕಾರಿ ಬೆಂಕಿಯ ಸರಣಿಯು ಮನೋಹರವಾದ ದ್ವೀಪ ಮಾಯಿಯಲ್ಲಿನ ಜನ ಸಮುದಾಯವನ್ನು ತತ್ತರಿಸುವಂತೆ

ಮಾಡಿದೆ. ಈ ಮಾನವ ಚಟುವಟಿಕೆಯ ಪಾತ್ರದ ಬಗ್ಗೆ ಭಾರಿ ಕಾಡ್ಗಿಚ್ಚು ದುರಂತಕ್ಕೆ ತಜ್ಞರು ಕಳವಳ ವ್ಯಕ್ತಪಡಿಸುವಂತೆ ಮಾಡಿದೆ. ಶುಷ್ಕ ಪರಿಸ್ಥಿತಿಗಳಿಂದಾಗಿ ಮತ್ತು ಬಲವಾದ ಗಾಳಿಯಿಂದಾಗಿ ಇಡೀ

ಮಾಯಿಯನ್ನು ಆವರಿಸಿರುವ ಬೆಂಕಿಯ ಮೂಲ ಯಾವುದು ಎಂದು ಕಂಡು ಹಿಡಿಯಲು ಅಧಿಕಾರಿಗಳು ಈಗಾಗಲೇ ಪರದಾಡುತ್ತಿದ್ಧಾರೆ.

ರಶ್ಮಿತಾ ಅನೀಶ್

Tags: americaforest firelahaina

Related News

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಜಾಬ್ ನ್ಯೂಸ್

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

September 22, 2023
ಗೃಹಲಕ್ಷ್ಮೀ ಯೋಜನೆಯ 2ನೇ ಕಂತು ಬಿಡುಗಡೆ ಯಾವಾಗ..? ಇಲ್ಲಿದೆ ಮಾಹಿತಿ
ಪ್ರಮುಖ ಸುದ್ದಿ

ಗೃಹಲಕ್ಷ್ಮೀ ಯೋಜನೆಯ 2ನೇ ಕಂತು ಬಿಡುಗಡೆ ಯಾವಾಗ..? ಇಲ್ಲಿದೆ ಮಾಹಿತಿ

September 22, 2023
ಮುಸ್ಲಿಂ ಸಂಸದನ ವಿರುದ್ದ ಅಸಂಸದೀಯ ಪದ ಬಳಕೆ ; ಸಂಸದ ರಮೇಶ್ ಬಿಧುರಿಗೆ ಶೋಕಾಸ್ ನೋಟಿಸ್
ದೇಶ-ವಿದೇಶ

ಮುಸ್ಲಿಂ ಸಂಸದನ ವಿರುದ್ದ ಅಸಂಸದೀಯ ಪದ ಬಳಕೆ ; ಸಂಸದ ರಮೇಶ್ ಬಿಧುರಿಗೆ ಶೋಕಾಸ್ ನೋಟಿಸ್

September 22, 2023
6 ಭಾರತೀಯ ಷೇರುಗಳಲ್ಲಿ ಕೆನಡಾ ₹16000 ಕೋಟಿ ಹೂಡಿಕೆ ; ಹೂಡಿಕೆದಾರರ ಗತಿ ಏನು..?
ದೇಶ-ವಿದೇಶ

6 ಭಾರತೀಯ ಷೇರುಗಳಲ್ಲಿ ಕೆನಡಾ ₹16000 ಕೋಟಿ ಹೂಡಿಕೆ ; ಹೂಡಿಕೆದಾರರ ಗತಿ ಏನು..?

September 22, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.