ಅವರೇ ಕಾಳಲ್ಲಿ ಅಡಗಿದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಪರೂಪದ ಸತ್ವ

ಅವರೇ ಕಾಳು(Hyacinth Beans) ಅಂದ್ರೆ ಅದು ಪೌಷ್ಟಿಕಾಂಶಗಳ ಗಣಿ ಅಂದ್ರೂ ತಪ್ಪಾಗಲಾರದು. ಇದರ ಮೂರ್ತಿ ಚಿಕ್ಕದಾದ್ರು ಕೀರ್ತಿ ಬಹಳ ದೊಡ್ಡದು. ಯಾಕಂದ್ರೆ ಇದರಲ್ಲಿ (Health benefits hyacinth beans) ವಿಪುಲವಾಗಿ ವಿಟಮಿನ್‌(Vitamin) ಹಾಗೂ ಮಿನರಲ್‌ಗಳಿವೆ(Mineral).

ಅಷ್ಟೇ ಅಲ್ಲ ನಾರಿನಂಶದ ಜೊತೆಗೆ ಕೊಲೆಸ್ಟ್ರಾಲ್‌ ಪ್ರಮಾಣ ಅತ್ಯಂತ ಕಡಿಮೆ ಮಟ್ಟದಲ್ಲಿದೆ. ಒಂದು ಕಪ್‌ ಅವರೇ ಕಾಳಿನಲ್ಲಿ ಎಷ್ಟೆಷ್ಟು ಪೌಷ್ಟಿಕಾಂಶ ಇದೆ ಅಂತ ನೋಡೋಣ

ಚಳಿಗಾಲದಲ್ಲಿ ಹೆಚ್ಚಾಗಿ ಅವರೇಕಾಳುಗಳದ್ದೇ ಕಾರುಬಾರು. ಅದ್ರಲ್ಲೂ ಅವರೇ ಕಾಳು ಮೇಳಗಳು ಪ್ರಾರಂಭವಾದ ಬಳಿಕ ಜನರಿಗೆ ಅವರೇ ಕಾಳಿನ ತರಹೇವಾರಿ ಖಾದ್ಯಗಳ ಪರಿಚಯವಾಯ್ತು.

ಅದು ಅವರೇ ಕಾಳು ಉಪ್ಪಿಟ್ಟಿನಿಂದ ಪ್ರಾರಂಭವಾಗಿ ಅವರೇ ಕಾಳು ಹೋಳಿಗೆ, ಗೊಜ್ಜು, ಪಲ್ಯ, ಸಾರು, ಸಾಂಬಾರು ಹೀಗೆ ಒಂದಾ ಎರಡಾ……..ಮೇಳಕ್ಕೆ ಹೋದವರು

ಅವರೆ ಕಾಳಿನ ನೂರಾರು ಅವತಾರಗಳನ್ನು ಕಂಡು ಅಚ್ಚರಿ ಪಡುವಂತಾಗಿದೆ. ಅಷ್ಟೊಂದು ಬಗೆಯಲ್ಲಿ ಖಾದ್ಯಗಳಲ್ಲಿ ಅವರೆಕಾಳನ್ನು ಬಳಸಿ ತಿನ್ನುತ್ತಿದ್ದಾರೆ.

ಅವರೇಕಾಳು ತುಂಬಾ ರುಚಿಕರವಾದ ಹಾಗೂ ಆರೋಗ್ಯಕ್ಕೆ ಪೂರಕವಾದ ಆಹಾರ. ಇದರಲ್ಲಿ ಅನೇಕ ಆರೋಗ್ಯಕರ ಪೌಷ್ಟಿಕಾಂಶಗಳು(Health benefits hyacinth beans) ಇರೋದ್ರಿಂದ ಇದರ ಬಳಕೆ ಕೂಡ ಅವ್ಯಾಹತವಾಗಿದೆ.

ಹೆಚ್ಚು ನೀರಿಲ್ಲದೆ ಸುಲಭವಾಗಿ ಬೆಳೆಯ ಬಲ್ಲ ಅವರೇ ಕಾಳು ಅತ್ಯಂತ ಪುರಾತನವಾದ ಆಹಾರ ಅಂದ್ರು ತಪ್ಪಾಗಲಾರದು.

ಬಹುತೇಕ ಮಾನವ ಬೇಸಾಯ ಆರಂಭಸಿದ ಕಾಲದಿಂದಲೂ ಬೆಳೆಯಲು ಶುರು ಮಾಡಿದ ಗಿಡಗಳಲ್ಲಿ ಅವರೆಕಾಯಿಯು ಸಹ ಒಂದು.

ಪ್ರಾಚೀನ ಗ್ರೀಕರು & ರೋಮನ್ನರು ಇದನ್ನು ಸೇವಿಸುತ್ತಿದರು ಎಂದು ಇತಿಹಾಸದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಪದ್ಮವಿಭೂಷಣ ಪ್ರಶಸ್ತಿಯನ್ನು ಕರ್ನಾಟಕ ಜನತೆಗೆ ಅರ್ಪಿಸುತ್ತೇನೆ : ಎಸ್. ಎಂ ಕೃಷ್ಣ

ಅವರೇಕಾಳನ್ನು ಇಂಗ್ಲಿಷ್ನಲ್ಲಿ Brad beans, pava beans ಅಂತಲೂ ಕರೆಯುತ್ತಾರೆ.


ಅವರೆಕಾಯಿಯನ್ನು ಸಾಮಾನ್ಯವಾಗಿ ಫೆಬ್ರವರಿ & ಮಾರ್ಚ್ ತಿಂಗಳಲ್ಲಿ ಬೆಳೆಯುತ್ತಾರೆ.

ಜುಲೈ ತಿಂಗಳಿನಲ್ಲಿ ಕಾಯಿ ಬಿಡುತ್ತೆ.ಕರ್ನಾಟಕದಲ್ಲಿ ಇದನ್ನು ಚಳಿಗಾಲದಲ್ಲಿ ಸುಗ್ಗಿಗೆ ಮೊದಲು ಬೆಳೆಯುತ್ತಾರೆ. ಅವರೆಕಾಳನ್ನು ನೀರು ಬಸಿದು ಹೋಗುವಂತಹ ಎಲ್ಲಾ ತರಹದ ಮಣ್ಣುಗಳಲ್ಲಿ ಬೆಳೆಯಬಹುದು.

ಅವರೇಕಾಯಿಯತಳಿಗಳು:

ಬೆಂಗಳೂರಿಗರ ಅಚ್ಚುಮೆಚ್ಚಿನ ಖಾದ್ಯ:

ಅವರೆಕಾಳು ಬೆಂದಕಾಳೂರು ಅಂದ್ರೆ ಬೆಂಗಳೂರಿನ ಮಂದಿಗೆ ಬಹಳ ಪ್ರಿಯವಾದ ಕಾಳು. ಅವರೆಗೆ ಅತೀ ಹೆಚ್ಚು ಗ್ರಾಹಕರು ಇರೋದು ಕೂಡ ಬೆಂಗಳೂರಿನಲ್ಲಿಯೇ.

ಹಾಗಾಗಿಯೇ ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಅವರೇ ಮೇಳ ಅತ್ಯಂತ ಯಶಸ್ವಿಯಾಗಿ ನಡೆಯುತ್ತೆ. 2000 ರಲ್ಲಿ ಆರಂಭಗೊಂಡ ಅವರೆ ಮೇಳ ಇವತ್ತಿಗೂ ಅಷ್ಟೇ ಜನಾಕರ್ಷಣೆ ಹೊಂದಿದೆ.

ಅಷ್ಟು ಮಾತ್ರ ಅಲ್ಲ. ಈ ಅವರೆ ಮೇಳದಲ್ಲಿ ರೈತರು ಯಾವುದೇ ಮಧ್ಯವರ್ತಿಗಳ ಕಾಟವಿಲದ್ದೇ ನೇರವಾಗಿ ಗ್ರಾಹಕರಿಗೆ ತಮ್ಮ ಬೆಳೆಯನ್ನು ಮಾರಾಟ ಮಾಡಬಹುದಾಗಿದೆ.

ಅಲ್ಲದೆ ಈ ಮೇಳದಲ್ಲಿ 120 ಕ್ಕಿಂತ ಹೆಚ್ಚು ಬಗೆ, ಬಗೆಯ ಅವರೇಕಾಳಿನ ರುಚಿ – ರುಚಿಯಾದ ಖಾದ್ಯಗಳು , ಸಿಹಿತಿಂಡಿಗಳು ವಿವಿಧ ರೀತಿಯ ಸಾಂಬಾರನ್ನು ಟೇಸ್ಟ್‌ ಮಾಡಬಹುದು. ಅವರೆಕಾಳನ್ನು ಇಷ್ಟೊಂದು ಇಷ್ಟಪಟ್ಟು ತಿನ್ನುವ ನಾವುಗಳು ಇದರ ಆರೋಗ್ಯಕರ ಅಂಶಗಳನ್ನು ತಿಳಿಯೋಣ.

ಅವರೆಕಾಳು ಸೇವನೆಯಿಂದ ಆಗುವ ಉಪಯೋಗಗಳು :

ಮೆದುಳಿನ ಆರೋಗ್ಯ ವೃದ್ಧಿ : ಅವರೇಕಾಳಲ್ಲಿ ಮನಸ್ಥಿತಿ ಸುಧಾರಣೆಗೆ ಸಹಕಾರಿಯಾದ ಆಂಟಿ ಆಕ್ಷಿಡೆಂಟ್ ಅಂಶ ಇದೆ. ಇದು ಮೆದುಳಿನ ಪ್ರೈಯ್ರಡಿಕಲ್ನಿಂದ ರಕ್ಷಣೆ ಮಾಡುತ್ತೆ.

ರೋಗ ನಿರೋದಕ ಶಕ್ತಿ ಹೆಚ್ಚಿಸುತ್ತದೆ : ಅವರೇಕಾಳುಗಳಲ್ಲಿ ಪೋಲಿಯಟ್ ಹೆಚ್ಚಿನ ಪ್ರಮಾಣದಲ್ಲಿರುತ್ತೆ. ಅವರೇಕಾಳನ್ನು ದಿನನಿತ್ಯ ಆಹಾರದಲ್ಲಿ ಸೇವನೆ ಮಾಡುವದರಿಂದ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸುತ್ತದೆ.

ತಲೆನೋವಿಗೆ ರಾಮಬಾಣ : ಸಾಮಾನ್ಯವಾಗಿ ಕೆಲಸ, ವಾತಾವರಣದ ಒತ್ತಡ ಮಧ್ಯೆ ಎಲ್ಲರೂ ತಲೆನೋವಿನಿಂದ ಬಳಲುತ್ತಿರುತ್ತಾರೆ. ಅವರೇಕಾಯಿಯ ಎಲೆಯನ್ನು ಜಜ್ಜಿ ಇದರ ವಾಸನೆ ನೋಡಿದರೆ ಸಾಕು ತಲೆನೋವು ಕಡಿಮೆಯಾಗುತ್ತದೆ ಎಂಬ ವಾಡಿಕೆಯಿದೆ.

ಚರ್ಮದ ಕಾಂತಿ ಹೆಚ್ಚಿಸುತ್ತದೆ : ಅವರೇಕಾಳುಗಳಲ್ಲಿ ವಿಟಮಿನಸಿ ಇದ್ದು ಕಾಲ್ಜನ ಉತ್ಪಾದನೆಯಲ್ಲಿ ಮಹತ್ವದ ಪಾತ್ರವಹಿಸಿ ಚರ್ಮವು ಹೂಳೆಯುವಂತೆ ಮಾಡುತ್ತದೆ.

Exit mobile version