Bengaluru : ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು(Bengaluru) ಮಹಾನಗರವು ಇದೀಗ ಮತ್ತೊಂದು ವಂದೇ ಭಾರತ್(in bangalore another vandebharath) ಎಕ್ಸ್ಪ್ರೆಸ್ ರೈಲನ್ನು ಪಡೆಯಲು ಸಿದ್ಧವಾಗಿದೆ.
ಈ ಬಾರಿ ಕಾಚಿಗೂಡ-ಬೆಂಗಳೂರು ಮಾರ್ಗಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ದೊರೆಯಲಿದೆ. ದಕ್ಷಿಣ ಭಾರತದಲ್ಲಿ ಸೇವೆ ಸಲ್ಲಿಸಲು ಇನ್ನೂ ಎರಡು ರೈಲುಗಳನ್ನು ನಿಯೋಜಿಸಲಾಗಿದ್ದು,
ಅವುಗಳು ತೆಲಂಗಾಣದ ಸಿಕಂದರಾಬಾದ್ನಿಂದ ಆಂಧ್ರಪ್ರದೇಶದ ತಿರುಪತಿ ಮತ್ತು ಮಹಾರಾಷ್ಟ್ರದ ಪುಣೆ ಮಾರ್ಗಕ್ಕೆ ಎಂದು ಸುದ್ದಿ ಸಂಸ್ಥೆ ಪಿಟಿಐ(PTI) ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ದಕ್ಷಿಣ ಭಾರತವು ತನ್ನ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಪಡೆದುಕೊಂಡಿತು.
ಇದನ್ನು ನವೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಧ್ವಜಾರೋಹಣ ಮಾಡುವ ಮೂಲಕ ದಕ್ಷಿಣ ಭಾರತಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದರು.
ಮತ್ತೊಂದು ವಂದೇ ಭಾರತ್ ರೈಲನ್ನು ನೈಋತ್ಯ ರೈಲ್ವೆ (SWR) ಕರ್ನಾಟಕದ ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಪ್ರಸ್ತಾಪಿಸಿದೆ.
ವಂದೇ ಭಾರತ್ ರೈಲುಗಳು ಅದರ ವೇಗ, ಸೌಕರ್ಯ ಮತ್ತು ವಿಮಾನದಂತಹ ವೈಶಿಷ್ಟ್ಯಗಳಿಂದಾಗಿ ಹಲವಾರು ಭಾಗಗಳಿಂದ ಪ್ರಶಂಸೆಯನ್ನು ಪಡೆದಿದ್ದರೂ ಸಹ, ಜಾನುವಾರು ಅಪಘಾತಗಳು ಮತ್ತು ಕಲ್ಲು ತೂರಾಟದ ಘಟನೆಗಳ ನಂತರ ವಿವಾದಗಳ ಪಟ್ಟಿಗೆ ಸೇರಿತ್ತು!
ಇದನ್ನೂ ಓದಿ: ನಿಮ್ಮದು ಉತ್ತರ ಕುಮಾರನ ಪೌರುಷ ಎಂದು ಮತ್ತೆ ನಿರೂಪಿಸದಿರಿ: ಸಿದ್ದು ವಿರುದ್ದ ಕಟೀಲ್ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 15 ರಂದು ತೆಲಂಗಾಣದ ಸಿಕಂದರಾಬಾದ್ ಮತ್ತು ಆಂಧ್ರಪ್ರದೇಶದ(Andhra Pradesh) ವಿಶಾಖಪಟ್ಟಣಂ ಅನ್ನು ಸಂಪರ್ಕಿಸುವ ಈ ವರ್ಷದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಿದರು.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪೈಕಿ ಇದು ದೇಶದ ಎಂಟನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಾಗಿದೆ.
100 ಪ್ರತಿಶತ ಆಕ್ಯುಪೆನ್ಸಿಯೊಂದಿಗೆ ಇದು ಸಂಚರಿಸುತ್ತದೆ.. ವರ್ಷಾಂತ್ಯದ ವೇಳೆಗೆ 75 ಮತ್ತು ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳನ್ನು ಕೊಡುಗೆಯಾಗಿ ನೀಡುವ ಗುರಿಯನ್ನು ರೈಲ್ವೇ ಇಲಾಖೆ ಹೊಂದಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಮಿಡ್ ಹೈ ಸ್ಪೀಡ್ ರೈಲು ಆಗಿದ್ದು, ಕೇಂದ್ರದ ಪ್ರಮುಖ ಮೇಕ್-ಇನ್-ಇಂಡಿಯಾ(Make in India) ಉಪಕ್ರಮದ ಅಡಿಯಲ್ಲಿ ಇದನ್ನು ತಯಾರಿಸಲಾಗುತ್ತದೆ.
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಇರುವುದರಿಂದ ಕೇಂದ್ರ ಸರ್ಕಾರ ಜನರ ಜನವೊಲಿಸಲು ಈ ರೈಲು ಕೊಟ್ಟಿದ್ದಾರೆ.
ಚುನಾವಣೆ ಕಾಲಿಡುತ್ತಿದ್ದಂತೆ ಬಿಜೆಪಿ ಪಕ್ಷ ಇಂಥಾ ಗಿಮಿಕ್ಗಳನ್ನು ಮಾಡಿ ಮದಾರರನ್ನು ಮೋಡಿ ಮಾಡುತ್ತಿದೆ ಅನ್ನೋದು ವಿಪಕ್ಷಗಳ ಟೀಕೆಯಾಗಿದೆ.