ಆನೇಕಲ್‌ನಲ್ಲಿ IT ದಾಳಿ : ಕೈಗಾರಿಕಾ ಸಂಘದ ಅಧ್ಯಕ್ಷರ ಮನೆ ಹಾಗೂ ಕಂಪೆನಿ ಮೇಲೆ ದಾಳಿ

Bengaluru : ಚುನಾವಣೆ (Election) ಹತ್ತಿರ ಬರುತ್ತಿದ್ದಂತೆ ಐಟಿ (IT), ಈಡಿ (ED) ದಾಳಿಗಳ ಭರಾಟೆ ಹೆಚ್ಚುತ್ತಿದೆ. ಇಂದು ಮುಂಜಾನೆ ಆದಾಯ ತೆರಿಗೆ ಅಧಿಕಾರಿಗಳು (Income Tax Officer) ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಪುರಸಭಾ (Bommasandra Municipality) ಸದಸ್ಯರಾಗಿರುವ ಎ ಪ್ರಸಾದ್ (A Prasad) ಹಾಗೂ ಸಹೋದರ ಛಲಪ್ರಸಾದ್ (Chalaprasad) ಅವಳಿ (IT Ride on Anekal) ಸಹೋದರರ ಮನೆ ಮೇಲೆ ಶನಿವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿದರು.

ಇದನ್ನೂ ಓದಿ : https://vijayatimes.com/scary-truth-about-healthy-drinks/


ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳ (Income Tax Officer) ತಂಡದಲ್ಲಿ 20ಕ್ಕೂ ಹೆಚ್ಚು ಸದಸ್ಯರಿದ್ದರು. ಕೆಲವು ದಿನಗಳಿಂದ ಎ.ಪ್ರಸಾದ್‌ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು, ಇಂದು ಏಕಾಏಕಿ ದಾಳಿ ನಡೆಸಿ ಅಚ್ಚರಿ ಮೂಡಿಸಿದರು.

ಬೊಮ್ಮಸಂದ್ರ ಪುರಸಭೆಯ ಪ್ರಭಾವಿ ಬಿಜೆಪಿ (BJP) ನಾಯಕರಾಗಿರುವ ಎ.ಪ್ರಸಾದ್ ಹಾಗೂ ಛಲಪ್ರಸಾದ್ ಅವರ ಕೈಗಾರಿಕಾ ಸಂಘದ (IT Ride on Anekal) ಕಚೇರಿ ಹಾಗೂ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಏಕಕಾಲದಲ್ಲಿ ಎರಡು ಕಡೆಯಲ್ಲೂ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : https://vijayatimes.com/fir-registered-against-brijbhushan/


ಎ.ಪ್ರಸಾದ್ ರವರ ಬೊಮ್ಮಸಂದ್ರ ನಿವಾಸ ಹಾಗೂ ಅವರ ಸಹೋದರ ಛಲಪ್ರಸಾದ್ ರವರ ಆರ್.ಎಸ್ ಗಾರ್ಡೇನಿಯ ಕೈಗಾರಿಕಾ ಸಂಘದ (Industrial Association of RS Gardeni) ಕಚೇರಿ ಸೇರಿದಂತೆ ಕಂಪನಿ ಮೇಲೆ ಬೇರೆ ಬೇರೆ ತಂಡಗಳನ್ನು ಮಾಡಿ ದಾಳಿ ಮಾಡಿದರು.

https://youtube.com/shorts/RLfENVSN1B8?feature=share

ತೆರಿಗೆ ಪಾವತಿಯಲ್ಲಿ ಮೋಸ ಹಾಗೂ ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ದಾಳಿ ನಡೆಸಿ ನಾನಾ ದಾಖಲೆಗಳನ್ನು ವಶಪಡಿಸಿಕೊಂಡರು. ಇನ್ನು ದಾಳಿ ವೇಳೆ ಏನೆಲ್ಲಾ ಸಿಕ್ಕಿವೆ, ಯಾವ ದಾಖಲೆಗಳೆಲ್ಲಾ ಲಭ್ಯವಾಗಿವೆ ಅನ್ನೋದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Exit mobile version