ಸಿಟಿ ಬ್ಯಾಂಕ್ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಭಾರತದಲ್ಲಿರುವ ಪರಿಹಾರ ಕೇಂದ್ರಗಳ (jobs in Citibank) ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಕನಿಷ್ಠ 5000 ಸಿಬ್ಬಂದಿಯನ್ನು ನೇಮಿಸಿಕೊಳ್ಳಲು
ಯೋಜಿಸಿದೆ. ಈ ಸಂಬಂಧ ಸ್ವತಃ ಸಿಟಿ ಬ್ಯಾಂಕ್ನ ಎಚ್.ಆರ್ ವಿಭಾಗದ ಮುಖ್ಯಸ್ಥರಾದ ಸಾರಾ ವೆಚ್ಚರ್ ತಿಳಿಸಿದ್ದಾರೆ. ಇದರಿಂದ ಭಾರತದಲ್ಲಿನ ಸಿಟಿ ಬ್ಯಾಂಕ್ನ ಉದ್ಯೋಗಿಗಳ ಸಂಖ್ಯೆ 32 ಸಾವಿರಕ್ಕೆ

ತಲುಪಲಿದೆ ಎಂದು ಅವರು (jobs in Citibank) ತಿಳಿಸಿದ್ದಾರೆ.
ಅಮೆರಿಕ ಮೂಲದ ಸಿಟಿ ಬ್ಯಾಂಕ್ ಗ್ರೂಪ್ ಭಾರತದಲ್ಲಿ ತನ್ನ ಕಾರ್ಯಪಡೆಯ ಬಲ ಹೆಚ್ಚಿಸಲು ಮುಂದಾಗಿದ್ದು, ದೇಶದಲ್ಲಿ ಜಾಗತಿಕ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಸ್ಕಿಲ್ ವುಳ್ಳ ಪ್ರತಿಭೆಗಳ
ನೇಮಕಾತಿಗೆ ಕಂಪನಿ ಯೋಜಿಸಿದ್ದು. ಭಾರತದಲ್ಲಿನ ಸಿಟಿ ಬ್ಯಾಂಕ್ನ ಉದ್ಯೋಗಿಗಳ ಸಂಖ್ಯೆ 32 ಸಾವಿರಕ್ಕೆ ತಲುಪಲಿದೆ ಎಂದು ಅವರು ತಿಳಿಸಿದ್ದಾರೆ.
ಟೆಕ್ನಾಲಜಿ, ಎಂಜಿನಿಯರಿಂಗ್, ಅನಾಲಿಟಿಕ್ಸ್ , ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ), ರಿಸ್ಕ್ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವವರನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಇದನ್ನು ಓದಿ: ‘ಬಳೆ ತೊಡ ಬೇಡಿ’ ಅಂತ ಬಿಸಿಯೂಟ ತಯಾರಿಸುವವರಿಗೆ ಸರ್ಕಾರ ಆದೇಶಿಸಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ನಮ್ಮ ಡಿಜಿಟಲ್ ಕಾರ್ಯತಂತ್ರವನ್ನು ವೇಗವಾಗಿ ಮುನ್ನಡೆಸಲು ಜಾಗತಿಕವಾಗಿ ಸಿಟಿ ಬ್ಯಾಂಕಿಗೆ ಪರಿಹಾರ ಕೇಂದ್ರಗಳು ಅಗತ್ಯವಾಗಿ ಬೇಕಾಗಿವೆ. ಭಾರತವು ನಮಗೆ ನಮ್ಮ ವ್ಯಾಪಾರ ಮತ್ತು ಗ್ರಾಹಕರ
ದೃಷ್ಟಿಕೋನದಿಂದ ಅತ್ಯಂತ ಪ್ರಮುಖವಾಗಿದೆ ಎಂದು ಸಾರಾ ವೆಚ್ಚರ್ ಹೇಳಿದ್ದಾರೆ.
ಸಿಟಿ ಬ್ಯಾಂಕ್ ತನ್ನ ಪರಿಹಾರ ಕೇಂದ್ರಗಳನ್ನು ಕಳೆದ ಎರಡು ವರ್ಷಗಳಲ್ಲಿ ಶೇ. 60ರಷ್ಟು ಹೆಚ್ಚಿಸಿದೆ. ಈ ಮೂಲಕ ಭಾರತೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಅಮೆರಿಕವನ್ನು ಹೊರತುಪಡಿಸಿ
ಸಿಟಿ ಬ್ಯಾಂಕ್ ಭಾರತದಲ್ಲಿ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ ಎಂದು ಅವರು (jobs in Citibank) ತಿಳಿಸಿದ್ದಾರೆ.

ಬೆಂಗಳೂರಿನಲ್ಲಿರುವ ಸಿಟಿ ಬ್ಯಾಂಕ್ನ ಘಟಕವು ವಿಶ್ಲೇಷಣೆ ಮತ್ತು ಮಾಹಿತಿ ನಿರ್ವಹಣೆಯ ಮೇಲೆ ಕಾರ್ಯನಿರ್ವಹಿಸುತ್ತದೆ. ಇದು ಭಾರತದಲ್ಲಿರುವ ಸಿಟಿ ಬ್ಯಾಂಕಿನ ಅತಿ ದೊಡ್ಡ ವಿಶ್ಲೇಷಣಾ ಕೇಂದ್ರವಾಗಿದೆ.
ಪುಣೆ ಮತ್ತು ಚೆನ್ನೈನಲ್ಲಿರುವ ಕೇಂದ್ರಗಳು ಸಾಫ್ಟ್ವೇರ್ ಡೆವಲಪರ್ (ಎಐ, ಎಂಎಲ್, ಮೊಬೈಲ್, ಡಿಜಿಟಲ್ ಬ್ಯಾಂಕಿಂಗ್, ಕ್ಲೌಡ್, ಬಿಗ್ ಡೇಟಾ ಆ್ಯಂಡ್ ಅನಾಲಿಟಿಕ್ಸ್, ರೊಬೊಟಿಕ್ಸ್ ಪ್ರೊಸೆಸ್ ಆಟೋಮೇಷನ್)ಗೆ
ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತವೆ.
ಈ ಕಂಪನಿಯು ಭಾರತದಲ್ಲಿ ಪರಿಹಾರ ಕೇಂದ್ರಗಳು ಮತ್ತು ಬ್ಯಾಂಕ್ ಸಿಬ್ಬಂದಿ ಸೇರಿ ಸುಮಾರು 29 ಸಾವಿರ ಉದ್ಯೋಗಿಗಳನ್ನು ಹೊಂದಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ನಾಯಕತ್ವ
ಗುಣವುಳ್ಳ ಉದ್ಯೋಗಿಗಳು ಹೆಚ್ಚಿದ್ದಾರೆ. ಏಕೆಂದರೆ ಭಾರತವು ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿದೆ ಎಂದು ಸಾರಾ ವೆಚ್ಚರ್ ಅಭಿಪ್ರಾಯಪಟ್ಟಿದ್ದಾರೆ.
ಇತರೆ ಎಲ್ಲಾ ದೇಶಗಳಿಗಿಂತ ಭಾರತದಲ್ಲಿ ಜಾಗತಿಕ ಅನಿಶ್ಚಿತತೆಯ ಹೊರತಾಗಿಯೂ ಪ್ರತಿಭಾನ್ವಿತರಿಗೆ ಹೆಚ್ಚಿನ ಬೇಡಿಕೆಯಿದೆ. ಯಾಕೆಂದರೆ, ಇಲ್ಲಿರುವ ವಿಶ್ವವಿದ್ಯಾಲಯಗಳು, ಉನ್ನತ ಕಲಿಕಾ ಸಂಸ್ಥೆಗಳಿಂದ
ಪ್ರತಿಭೆಗಳು ಹೊರಬರುತ್ತಲೇ ಇರುತ್ತಾರೆ. ಹಾಗಾಗಿ ನಮ್ಮ ಕಂಪನಿಗೆ ಬೇಕಾದಂತ ಪ್ರತಿಭೆಗಳು ಸುಲಭವಾಗಿ ಸಿಗುತ್ತಾರೆ. ಭಾರತದಲ್ಲಿ ರಾಜಕೀಯ ಸ್ಥಿರತೆ ಮತ್ತು ಆರ್ಥಿಕ ಸ್ಥಿರತೆ ಎರಡೂ ಇವೆ. ಹೀಗಾಗಿ,
ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೂಡಿಕೆ ಹರಿದು ಬರಲಿದೆ ಎಂದು ಅವರು ಹೇಳಿದರು.
- ಭವ್ಯಶ್ರೀ ಆರ್.ಜೆ