ಪೋಕ್ಸೊ ಕಾಯ್ದೆಯಡಿ ಪ್ರಧಾನಿ ಮೋದಿ ಕೂಡಾ ಶಿಕ್ಷಾರ್ಹ : ನಟ ಕಿಶೋರ್ ಗಂಭೀರ ಆರೋಪ

ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ತೀವ್ರ ವಾಗ್ದಾಳಿ (Kishore slams narendra modi) ನಡೆಸಿರುವ ನಟ ಕಿಶೋರ್,

4ಪಿ.ಎಮ್. ಸುದ್ದಿ ವಾಹಿನಿಯ ಸಂಪಾದಕ ಸಂಜಯ್ ಶರ್ಮಾ ಅವರಿಗೆ ಧನ್ಯವಾದಗಳು POCSO ಕಾಯ್ದೆಗೊಳಗಿನ ಇಣುಕು ನೋಟ ಬೀರುವ ಕಾರ್ಯಕ್ರಮ ಮಾಡುವ ಧೈರ್ಯ ಮಾಡಿದ್ದಕ್ಕೆ.

ಪೋಕ್ಸೊ ಕಾಯ್ದೆಯಡಿ ಯಾರಾದರೂ ಅಪ್ರಾಪ್ತ ವಯಸ್ಕರ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿಯನ್ನು ಮುಚ್ಚಿಟ್ಟರೆ ಅವರು ವ್ಯಕ್ತಿಯಾಗಿದ್ದರೆ 6 ತಿಂಗಳು ಮತ್ತು ಅದು ಸಂಸ್ಥೆ ಅಥವಾ ಸಮಿತಿಯಾಗಿದ್ದರೆ

1 ವರ್ಷ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. ಕುಸ್ತಿಪಟುಗಳ ಪ್ರಕರಣದಲ್ಲಿ ವಿನೇಶ್ ಫೋಗಟ್ ಅವರು ಅಪ್ರಾಪ್ತ ವಯಸ್ಕ ಬಾಲಕಿಯೂ ಸೇರಿದಂತೆ ಮಹಿಳಾ ಕುಸ್ತಿ ಪಟುಗಳ ಮೇಲೆ ದೈಹಿಕ ಕಿರುಕುಳದ ಬಗ್ಗೆ ಮೊದಲು ತಿಳಿಸಿದ್ದು

ಪ್ರಧಾನಿ ನರೇಂದ್ರ ಮೋದಿಯವರಿಗೆ, ಅವರು ಪೊಲೀಸರಿಗೆ ತಿಳಿಸದೆ ಕ್ರೀಡಾ ಸಚಿವರಿಗೆ ತಿಳಿಸಿದರು, ಕ್ರೀಡಾ ಸಚಿವರೂ ಅದನ್ನು ಪೊಲೀಸರಿಗೆ ತಿಳಿಸಲಿಲ್ಲ ಬದಲಿಗೆ ಆರೋಪಿ ಬ್ರಿಜ್ ಭೂಷಣ್ ಗೇ ತಿಳಿಸಿಬಿಟ್ಟರು ..

ಆತ ಈ ಬಗ್ಗೆ ಕುಸ್ತಿಪಟುಗಳಿಗೆ ಬೆದರಿಕೆ ಹಾಕಲು ಆರಂಭಿಸಿದ. ಜನವರಿಯಲ್ಲಿ ನಡೆದ ಧರಣಿಯ ನಂತರ ಕ್ರೀಡಾ ಸಚಿವಾಲಯವು ಸಮಿತಿಯನ್ನು ರಚಿಸಿತು, ಇದರಲ್ಲಿ ಮತ್ತೆ ಕುಸ್ತಿಪಟುಗಳು ಅಪ್ರಾಪ್ತ ವಯಸ್ಕರು

ಮತ್ತು ಇತರರ ಮೇಲೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಗ್ಗೆ ಈ ಹಿಂದೆ ಪ್ರಧಾನಿಗೆ ತಿಳಿಸಲಾದ ವಿಷಯವನ್ನು ತಿಳಿಸಿದರು. ಅವರೂ ಪೊಲೀಸರಿಗೆ ಮಾಹಿತಿ ನೀಡಿಲ್ಲ. ನಂತರ ಕುಸ್ತಿಪಟುಗಳು ಪೊಲೀಸ್ ಠಾಣೆಗೆ ಹೋದಾಗಲೂ,

ಒಂದು ಜವಾಬ್ದಾರಿಯುತ ಸಂಸ್ಥೆಯಾದ ದೆಹಲಿ ಪೊಲೀಸ್ ಎಫ್ಐಆರ್ ದಾಖಲಿಸಲಿಲ್ಲ. ಐದು ತಿಂಗಳ ನಂತರ ರಾಷ್ಟ್ರದಾದ್ಯಂತ ಜನರು ಪ್ರತಿಭಟನೆಯನ್ನು ಪ್ರಾರಂಭಿಸಿದಾಗ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ

ಎಫ್ಐಆರ್ ದಾಖಲಿಸಲು ದೆಹಲಿ ಪೊಲೀಸರನ್ನು ಒತ್ತಾಯಿಸಿತು. ಆದ್ದರಿಂದ ಪೋಕ್ಸೊ ಕಾಯ್ದೆಯಡಿ ಪ್ರಧಾನಿ, ಕ್ರೀಡಾ ಸಚಿವ, ವಿಚಾರಣೆಗೆ ರಚಿಸಲಾದ ಸಮಿತಿ, ಪೊಲೀಸರಿಗೆ ಮಾಹಿತಿ ನೀಡದ ಕಾರಣಕ್ಕೆ ಮತ್ತು

ಇದನ್ನು ಓದಿ: ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು ಗಡುವು ವಿಸ್ತರಣೆ : ಆನ್ಲೈನ್ನಲ್ಲಿ ಹೇಗೆ ಅಪ್ಡೇಟ್ ಮಾಡಬಹುದು ?

ಎಫ್ಐಆರ್ ದಾಖಲಿಸದ ದೆಹಲಿ ಪೊಲೀಸರು ಎಲ್ಲರೂ ಶಿಕ್ಷಾರ್ಹರು. ಇಷ್ಟಲ್ಲದೇ ಅಪರಾಧಿಯನ್ನು ಇಷ್ಟೂ ದಿನ ರಕ್ಷಿಸಿ ಕಾನೂನು ಕ್ರಮಕ್ಕೆ ತಮ್ಮ ಅಧಿಕಾರ ಬಳಸಿ ತಡೆ ಮಾಡಿದ್ದಕ್ಕೆ ಇವರೆಲ್ಲರಿಗೂ ಇನ್ನೆಷ್ಟು ಶಿಕ್ಷೆಯೊ ಕೋರ್ಟೇ

ಹೇಳಬೇಕುಎಂದು ತಮ್ಮ ಫೇಸ್ಬುಕ್ ಮುಖಪುಟದಲ್ಲಿ (Kishore slams narendra modi) ಬರೆದುಕೊಂಡಿದ್ದಾರೆ.

ಇನ್ನು ಸಾಮಾಜಿಕ ಜಾಲಣದಲ್ಲಿ ಕಿಶೋರ್ ಅವರ ನಿಲುವಿಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಇಡೀ ಪ್ರಕರಣವನ್ನು ಕಿಶೋರ್ ಅವರು ತಮ್ಮ ಮನೆಯಲ್ಲೇ ಕುಳಿತು, ತನಿಖೆ ಮಾಡಿ, ತೀರ್ಪು ನೀಡಿದಂತಿದೆ.

ಮನೆಯಲ್ಲೇ ಕುಳಿತು ಫೇಸ್ಬುಕ್ನಲ್ಲೇ ನ್ಯಾಯನಿರ್ಧಾರ ಮಾಡುವ ಮುನ್ನ, ದೇಶದ ಕಾನೂನು ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.

Exit mobile version