Maldives: ಪ್ರವಾಸೋದ್ಯಮವನ್ನೆ ನಂಬಿಕೊಂಡಿದ್ದ ಮಾಲ್ಡೀವ್ಸ್ (Maldives) ದೇಶದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿದ್ದು , ಕೈಯಲ್ಲಿ ಪುಡಿಗಾಸು ಇಲ್ಲದೇ ಕ್ಯಾತೆ ತೆಗೆದ ಭಾರತದ ಬಳಿಯೇ ಆಹಾರ ಪದಾರ್ಥಗಳನ್ನು ಯಾಚಿಸುವಂತಾಗಿದೆ. ಈ ಹಿಂದೆ ಭಾರತದ ಸೈನಿಕರ ವಾಪಸ್ಸು ಕರೆಸಿಕೊಳ್ಳಿ ಭಾರತದ ಯಾವುದೇ ನೆರವು ನಮಗೆ ಬೇಡ ಎಂದು ಅಹಂಕಾರದಿಂದ ವರ್ತಿಸಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮೊಯಿಝ (Mohammed Moiz) ಇದೀಗ ಅಕ್ಕಿಗಾಗಿ ಭಾರತಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.
ಭಾರತದಂತೆ ಮಾಲ್ಡೀವ್ಸ್ ತನಗೆ ಬೇಕಾದ ವಸ್ತುಗಳನ್ನ ತಾನೇ ಉತ್ಪಾದನೆ ಮಾಡಿಕೊಳ್ಳುತ್ತಿರಲಿಲ್ಲ. ಪೂರ್ತಿಯಾಗಿ ಪ್ರವಾಸೋದ್ಯಮದ ಮೇಲೆ ನಿಂತಿತ್ತು. ಆಹಾರ ಉತ್ಪನ್ನಗಳ ಬೇರೆ ದೇಶಗಳಿಂದ ಎರವಲು ಪಡೆದು ಪರಾವಲಂಬಿ ಜೀವನ ನಡೆಸುತ್ತಿತ್ತು ಮಾಲ್ಡೀವ್ಸ್ ದೇಶ. ಇಷ್ಟಾದರೂ ಮಾಲ್ಡೀವ್ಸ್ ದೇಶದ ರಾಜಕಾರಣಿಗಳ ಅಹಂಕಾರ ಮಾತ್ರ ಕಡಿಮೆ ಆಗಿರಲಿಲ್ಲ ಹೀಗಾಗಿ ಭಾರತದ ಜೊತೆಗೆ ಕಿರಿಕ್ ಮಾಡಿಕೊಂಡಿದ್ದ ಮಾಲ್ಡೀವ್ಸ್ ನೂತನ ಅಧ್ಯಕ್ಷ ಮೊಹಮ್ಮದ್ ಮೊಯಿಝ ಭಾರತದ ವಿರೋಧ ಕಟ್ಟಿಕೊಂಡ ನಂತರ ಮಾಲ್ಡೀವ್ಸ್ ದೇಶದ ಪ್ರವಾಸೋದ್ಯಮ ನೆಲಕಚ್ಚಿದ್ದನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಹೌದು, ಮಾಲ್ಡೀವ್ಸ್ ದೇಶದಲ್ಲಿ ಭಾರತ ವಿರೋಧಿ ನಿಲುವಿರುವ ಸರ್ಕಾರ ಇದ್ದರೂ ಈ ಹಿಂದೆ ಭಾರತ ದೇಶಕ್ಕೆ ಬಹಳಷ್ಟು ಅವಮಾನ ಮಾಡಿದ್ದರೂ ಸಹ ಭಾರತದ ಕಡೆಯಿಂದ ಮಾನವೀಯ ನೆರವು ಮುಂದಾಗಿದೆ. ಭಾರತ ಅನುಕಂಪದ ಆಧಾರದಲ್ಲೀಗ, ಆಹಾರ ವಸ್ತುಗಳ ರಫ್ತಿಗೆ (Export) ನಿರ್ಧಾರ ಮಾಡಿದೆ ಹಲವು ವಸ್ತುಗಳ ಮೇಲೆ ನಿರ್ಭಂದ ಹೇರಿದ್ದರೂ ಸಹ ಮಾಲ್ಡೀವ್ಸ್ ದೇಶಕ್ಕಾಗಿ ಇದರಲ್ಲಿ ವಿನಾಯಿತಿ ನೀಡಿದೆ.
ಭಾರತ ವಿರೋಧಿ ನಿಲುವು ಹೊಂದಿದ್ದರೂ ಮಾಲ್ಡೀವ್ಸ್ ದೇಶಕ್ಕೆ ಸಹಾಯ ಮಾಡಲು ಭಾರತ ಮುಂದಾಗಿದೆ. ಸಕ್ಕರೆ, ಗೋಧಿ, ಅಕ್ಕಿ, ಈರುಳ್ಳಿ (Sugar, Wheat, Rice, Onion) ಇತ್ಯಾದಿ ಅಗತ್ಯ ವಸ್ತುಗಳನ್ನ ಮಾಲ್ಡೀವ್ಸ್ ದೇಶಕ್ಕೆ ಸೀಮಿತ ಪ್ರಮಾಣದಲ್ಲಿ ರಫ್ತು ಮಾಡಲು, ಭಾರತ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.ಈ ಮೂಲಕ, ಭಾರತದ ವಿರೋಧ ಕಟ್ಟಿಕೊಂಡಿದ್ದರೂ ಮಾಲ್ಡೀವ್ಸ್ ಇದೀಗ ಅನಿವಾರ್ಯವಾಗಿ ಭಾರತದ ಕಾಲನ್ನೇ ಹಿಡಿಯುಂತಾಗಿದೆ .