ಬ್ಯಾನರ್ಜಿ ಎಡವಟ್ಟು: ಚಂದ್ರಯಾನ-3 ಯಶಸ್ವಿಗೆ ಅಭಿನಂದನೆ ಸಲ್ಲಿಸುವ ಭರದಲ್ಲಿ ಮಮತಾ ಬ್ಯಾನರ್ಜಿ ಎಡವಟ್ಟು

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ (Mamatha Banerjee) ಅವರು ಚಂದ್ರಯಾನ ಯಶಸ್ವಿಗೂ ಮುನ್ನ ಕಾರ್ಯಕ್ರಮವೊಂದರಲ್ಲಿ ಚಂದ್ರಯಾನದ ಬಗ್ಗೆ ಗೊಂದಲದ ಮಾತುಗನ್ನಾಡಿದ್ದು, ಗಗನಯಾತ್ರಿ ರಾಕೇಶ್ ಶರ್ಮಾ ಬದಲು ಬಾಲಿವುಡ್ ನಟ-ಚಿತ್ರ ನಿರ್ಮಾಪಕ ರಾಕೇಶ್ ರೋಷನ್ ಎಂದು ಹೇಳಿದ್ದಾರೆ.

ಬುಧವಾರದಂದು ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 (Chandrayaan-3) ಮಿಷನ್ ಲ್ಯಾಂಡಿಂಗ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಇಸ್ರೋದ ಈ ಸಾಧನೆಗೆ ದೇಶದ ಅನೇಕ ಗಣ್ಯರು ಮತ್ತು ನಟ-ನಟಿಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಆದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಚಂದ್ರಯಾನ ಯಶಸ್ವಿ ಆಗುವ ಮುನ್ನವೇ ಕಾರ್ಯಕ್ರಮವೊಂದರಲ್ಲಿ ಚಂದ್ರಯಾನದ ಬಗ್ಗೆ ಗೊಂದಲದ ಮಾತುಗಳನ್ನು ಹಾಡಿದ್ದಾರೆ.

ಗಗನಯಾತ್ರಿ ರಾಕೇಶ್ ಶರ್ಮಾ (Rakesh Sharma) ಬದಲು ಬಾಲಿವುಡ್ ನಟ-ಚಿತ್ರ ನಿರ್ಮಾಪಕ ರಾಕೇಶ್ ರೋಷನ್ (Rakesh Roshan) ಎಂದು ಹೇಳಿದ್ದು, ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗುತ್ತಿದೆ. ವೈರಲ್ (Viral) ವಿಡಿಯೋದಲ್ಲಿ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ಜನರ ಪರವಾಗಿ ನಾನು ಇಸ್ರೋಗೆ ಚಂದ್ರಯಾನ ಯಶಸ್ವಿಗೂ ಮುನ್ನ ಅಭಿನಂದನೆಗಳನ್ನು ತಿಳಿಸುತ್ತೇನೆ. ಈ ಸಾಧನೆಯ ಕ್ರೆಡಿಟ್ ವಿಜ್ಞಾನಿಗಳು ಮತ್ತು ದೇಶಕ್ಕೆ ಸಲ್ಲಬೇಕು.

ಇನ್ನು ರಾಕೇಶ್ ರೋಷನ್ (Rakesh Roshan) ಚಂದ್ರನ ಮೇಲೆ ಇಳಿದಾಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜತೆಗೆ ಸಂವಾದ ನಡೆಸಿದ್ದಾರೆ ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ. ಇಲ್ಲಿ ಮಮತಾ ಬ್ಯಾನರ್ಜಿ ಅವರು ರಾಕೇಶ್ ಶರ್ಮಾ ಎಂದು ಹೇಳುವ ಬದಲು ರಾಕೇಶ್ ರೋಷನ್ ಎಂದು ಹೇಳಿದ್ದಾರೆ. 1984ರಲ್ಲಿ ಸೋವಿಯತ್ ಒಕ್ಕೂಟದ ಸೋಯುಜ್ (Soyuz) T-11 ಭಾಗವಾಗಿ ರಾಕೇಶ್ ಶರ್ಮಾ ಅವರು ಭಾರತೀಯ ವಾಯುಪಡೆಯ ಪೈಲಟ್ (Pilot) ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯರಾಗಿದ್ದರು. ದೂರದರ್ಶನದ ನೇರ ಪ್ರಸಾರದ ಮೂಲಕ ಗಗನಯಾತ್ರಿಗಳು ಬಾಹ್ಯಾಕಾಶದಿಂದ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗೆ ಮಾತನಾಡಿದರು.

ಇಂದಿರಾ ಗಾಂಧಿಯವರು (Indira Gandhi) ರಾಕೇಶ್ ಶರ್ಮಾ ಅವರ ಜತೆಗೆ ಮಾತನಾಡಿದ್ದು ಹೀಗೆ “ಉಪರ್ ಸೆ ಭಾರತ್ ಕೈಸಾ ದಿಖ್ತಾ ಹೈ ಆಪ್ಕೋ?” (ಬಾಹ್ಯಾಕಾಶದಿಂದ ಭಾರತವು ಹೇಗೆ ಕಾಣುತ್ತದೆ?) ಎಂದು ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ರಾಕೇಶ್ ಶರ್ಮಾ ಅವರು ಕವಿ ಇಕ್ಬಾಲ್ (Iqbal) ಅವರನ್ನು ಉಲ್ಲೇಖಿಸಿ, “ಸಾರೆ ಜಹಾನ್ ಸೆ ಅಚ್ಚಾ” (Saare jahan se acha) ಇಡೀ ಪ್ರಪಂಚಕ್ಕಿಂತ ಉತ್ತಮ ಎಂದು ಹೇಳುವ ಮೂಲಕ ಪ್ರತಿಕ್ರಿಯಿಸಿದರು. ಆದರೆ ಈ ಘಟನೆಯನ್ನು ಹೇಳುವ ಭರದಲ್ಲಿ ಮಮತಾ ಬ್ಯಾನರ್ಜಿ (Mamatha Banerjee) ಅವರು ರಾಕೇಶ್ ಶರ್ಮಾ ಹೇಳುವ ಬದಲು ರಾಕೇಶ್ ರೋಷನ್ ಎಂದು ಹೇಳಿ ಎಲ್ಲ ಕಡೆ ಟ್ರೋಲ್ ಆಗಿದ್ದಾರೆ.

ರಾಜಸ್ಥಾನದ (Rajasthan) ಸಚಿವರೊಬ್ಬರು ಕೂಡ ವೈರಲ್ ಆಗುತ್ತಿದ್ದಾರೆ. ಚಂದ್ರಯಾನ -3 (Chandrayaan-3) ಮಿಷನ್‌ನ ಪ್ರಯಾಣಿಕರಿಗೆ ಅಭಿನಂದನೆ ಎಂದು ಹೇಳಿದ್ದಾರೆ. ಆದರೆ ಈ ಚಂದ್ರಯಾನ -3 ಮಾನವರಹಿತ ಮಿಷನ್ ಆಗಿರುವ ಕಾರಣ ಮಾತಿನ ಭರದಲ್ಲಿ ಈ ಎಡವಟ್ಟು ಮಾಡಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗುತ್ತಿದೆ.

ಭವ್ಯಶ್ರೀ ಆರ್.ಜೆ

Exit mobile version