Moscow: ರಷ್ಯಾದ (Russia) ರಾಜಧಾನಿ ಮಾಸ್ಕೋ ನಗರದ ಉತ್ತರ ಭಾಗದಲ್ಲಿರುವ ಕ್ರೋಕಸ್ ಸಿಟಿ ಹಾಲ್ ಎಂಬ (Moscow Concert Hall Attack) ಸಭಾಂಗಣದಲ್ಲಿ ನಡೆಯುತ್ತಿದ್ದ ರಾಕ್
ಮ್ಯೂಸಿಕ್ ಸಮ್ಮೇಳನವೊಂದರ ವೇಳೆ, ಸಭಾಂಗಣದೊಳಕ್ಕೆ ಏಕಾಏಕಿ ನುಗ್ಗಿದ ಬಂದೂಕುಧಾರಿಗಳು ಅಲ್ಲಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಭಾರತೀಯ ಕಾಲಮಾನ ಮಾ. 22ರ
ಮಧ್ಯರಾತ್ರಿ 12ರ ಸುಮಾರಿಗೆ ನಡೆದ ಗುಂಡಿನ ದಾಳಿಯಲ್ಲಿ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸುಮಾರು 115 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದಲ್ಲಿ ಪುಟಿನ್ (Putin) ಮರು ಆಯ್ಕೆಯಾದ ಬೆನ್ನಲ್ಲೇ ಈ ದಾಳಿ ನಡೆದಿದೆ. ಎರಡು ದಶಕಗಳಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಇದೊಂದು ಬೃಹತ್ ಅನಾಹುತ ಎಂದು ಮಾಸ್ಕೋ
ಮೇಯರ್ ಸೆರ್ಗೆಯ್ (Moscow Concert Hall Attack) ಸೋಬಯಾನಿನ್ ಹೇಳಿದ್ದಾರೆ.
ಮಾಸ್ಕೋದ ಪಶ್ಚಿಮ ಅಂಚಿನಲ್ಲಿರುವ, 6,200 ಜನರಿಗೆ ಅವಕಾಶ ಕಲ್ಪಿಸುವ ದೊಡ್ಡ ಸಂಗೀತ ಹಾಲ್ ಆದ ಕ್ರೋಕಸ್ ಸಿಟಿ ಹಾಲ್ (Crocus City Hall) ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಈ ವೇಳೆ ಹಾಲ್ಗೆ ನುಗ್ಗಿದ ನಾಲ್ವರು ಬಂದೂಕುದಾರಿಗಳು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಮನಸೋ ಇಚ್ಛೆ ಗುಂಡಿನ ಸುರಿಮಳೆಗೈದಿದ್ದಾರೆ. ನೋಡ ನೋಡ್ತಿದ್ದಂತೆ ಹಾಲ್ಗೆ ಬೆಂಕಿ ಇಟ್ಟು ಅಟ್ಟಹಾಸ
ಮೆರೆದಿದ್ದಾರೆ.ರಷ್ಯಾದ ರಾಕ್ ಬ್ಯಾಂಡ್ ‘ಪಿಕ್ನಿಕ್’ ಶೋಗಾಗಿ ಜನರು ಸೇರುತ್ತಿದ್ದಾಗ ಈ ಗುಂಡಿನ ದಾಳಿ ನಡೆದಿದೆ. ಕಾರ್ಯಕ್ರಮದಲ್ಲಿ ಮೊದಲು ಸ್ಫೋಟಕಗಳನ್ನು ಎಸೆದ ಉಗ್ರರು, ಜನ ಚೆಲ್ಲಾಪಿಲ್ಲಿಯಾಗಿ
ಓಡುತ್ತಿದ್ದಂತೆ ಸಂಪೂರ್ಣ ಹಾಲ್ಗೆ ಬೆಂಕಿ ಹಚ್ಚಿದ್ದಾರೆ ಎಂದು ಕೆಲವು ರಷ್ಯಾದ ಮಾಧ್ಯಮಗಳ ವರದಿಗಳಲ್ಲಿ ತಿಳಿಸಲಾಗಿದೆ.
ಈ ತಿಂಗಳ ಆರಂಭದಲ್ಲಿ ಯುಎಸ್ (US) ರಾಯಭಾರ ಕಚೇರಿ ಉಗ್ರರ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿತ್ತು. ರಷ್ಯಾ ರಾಜಧಾನಿಯಲ್ಲಿ ದಾಳಿ ನಡೆಯುವ ಸಾಧ್ಯತೆ ಇದೆ ಆದ್ದರಿಂದ
ದಾಳಿಯ ದೃಷ್ಟಿಯಿಂದ ರಷ್ಯಾದ ರಾಜಧಾನಿಯಲ್ಲಿ ಜನನಿಬಿಡ ಸ್ಥಳಗಳಿಗೆ ಭೇಟಿ ನೀಡಬೇಡಿ ಎಂದು ಅಮೆರಿಕನ್ನರಿಗೆ (America) ತಿಳಿಸಿತ್ತು ಇದನ್ನು ಹಲವಾರು ಇತರ ಪಾಶ್ಚಿಮಾತ್ಯ ರಾಯಭಾರ ಕಚೇರಿಗಳು
ಕೂಡ ಪುನರಾವರ್ತಿಸಿ ತಮ್ಮ ದೇಶದ ಜನರಿಗೆ ತಿಳಿಸಿತ್ತು. ಇದರ ಬೆನ್ನಲ್ಲೇ ಭೀಕರ ಉಗ್ರರ ದಾಳಿ ನಡೆದಿದೆ.
ಐರೋಪ್ಯ ಒಕ್ಕೂಟ, ಫ್ರಾನ್ಸ್, ಸ್ಪೇನ್ ಮತ್ತು ಇಟಲಿ (France, Spain and Italy) ಹಲವಾರು ದೇಶಗಳು ದಾಳಿಯನ್ನು ಖಂಡಿಸಿವೆ. ದಾಳಿಯನ್ನು ಅಮೆರಿಕಾ ‘ಭಯಾನಕ’ ಎಂದು ಕರೆದಿದೆ. ಉಕ್ರೇನ್ನಲ್ಲಿನ
ಸಂಘರ್ಷಕ್ಕೂ ಈ ದಾಳಿಗೂ ಯಾವುದೇ ಸಂಬಂಧವಿರುವ ಲಕ್ಷಣಗಳಿಲ್ಲ ಎಂದು ಹೇಳಿದೆ. ಮಾಸ್ಕೋದಲ್ಲಿ ನಡೆದ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. “ಮಾಸ್ಕೋದಲ್ಲಿ ನಡೆದ ಭೀಕರ
ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ತಿಳಿಸುತ್ತೇವೆ. ಈ ದುಃಖದ ಸಮಯದಲ್ಲಿ ಭಾರತ ಸರ್ಕಾರ ಮತ್ತು ರಷ್ಯಾದ ಒಕ್ಕೂಟದ ಜನರೊಂದಿಗೆ
ಒಗ್ಗಟ್ಟಿನಿಂದ ನಿಂತಿದೆ” ಮೋದಿ (Modi) ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ಮಂಗಳೂರಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮರಳುಗಾರಿಕೆ ಅಕ್ರಮದ ಕುರಿತು ಹೊಸ ಬಾಂಬ್ ಸಿಡಿಸಿದ ಶಾಸಕ ವೇಧವ್ಯಾಸ ಕಾಮತ್