ಬೆಂಗಳೂರು, ಮಾ. 18: ಜಾರಕಿಹೊಳಿ ಸಿಡಿ ಪ್ರಕರಣದ ಆರೋಪಿಗಳ ಬ್ಯಾಂಕ್ ಖಾತೆ ಹಾಗೂ ಅವರ ಮನೆಯವರ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಜಮೆಯಾಗಿರುವುದು ತನಿಖೆಯಿಂದ ಬಯಲಾಗಿದೆ.
ವಿಶೇಷ ತನಿಖಾ ತಂಡ (ಎಸ್ಐಟಿ) ಮಹತ್ವದ ವಿಷಯಗಳನ್ನು ಕಲೆ ಹಾಕಿದ್ದು, ಆರೋಪಿಗಳ ಎಂಟು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದ್ದು ತಿಂಗಳ ಒಳಗೆ ಲಕ್ಷಾಂತಗರ ರೂಪಾಯಿ ವಹಿವಾಟು ನಡೆದಿದೆ.
ಇದರ ಆಧಾರದ ಮೇಲೆ ಶಂಕಿತ ಅರು ಸೇರಿದ ಲಗ್ಗೆರೆಯಲ್ಲಿನ ನಿವಾಸ ಹಾಗೂ ಮಂಜುನಾಥ ನಗರದ ನರೇಶ್ ಮನೆ ಮೇಲೆ ಎಸ್ಐಟಿ ತಂಡ ದಾಳಿ ನಡೆಸಿದೆ.ಈ ವೇಳೆ ಕುಟುಂಬಸ್ಥರನ್ನು ವಿಚಾರಣೆ ನಡೆಸಿ, ಮಾಹಿತಿ ಪಡೆದುಕೊಂಡಿದ್ದು. ಬ್ಯಾಂಕ್ ಖಾತೆಯಲ್ಲಿರುವ ಹಣದ ಬಗ್ಗೆ ದಾಖಲೆ ಪರಿಶೀಲಿಸಿದ್ದಾರೆ.
ಅಣ್ಣನ ಖಾತೆಗೆ ಹಣ ರವಾನೆ: ಸಿಡಿ ಪ್ರಕರಣದ ಶಂಕಿತನೊಬ್ಬ ತನ್ನ ಖಾತೆಗೆ ಹಣ ಜಮೆ ಮಾಡುವುದರ ಜತೆಗೆ ತನ್ನ ಅಣ್ಣನ ಖಾತೆಗೂ ಹಣ ಹಾಕಿದ್ದಾನೆ. ಒಟ್ಟಾರೆ ಅಣ್ಣನ ಖಾತೆಯಲ್ಲಿ ಬರೋಬರಿ 40 ಲಕ್ಷ ರೂ. ಇರುವುದು ಪತ್ತೆಯಾಗಿದೆ.
ಇನ್ನೊಬ್ಬ ಶಂಕಿತ ಎರಡು ದಿನಕೊಮ್ಮೆ ಬ್ಯಾಂಕ್ಗೆ ಹೋಗಿ 5 ಲಕ್ಷ ರೂ.ನಂತೆ ಜಮೆ ಮಾಡಿರುವುದು ಕಂಡು ಬಂದಿದ್ದು, ಮತ್ತೊಬ್ಬ ಶಂಕಿತನ ಖಾತೆಯಲ್ಲಿ 26 ಲಕ್ಷ ರೂ ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ. ಮತ್ತೆ ಮೂವರು ಎಸ್ಐಟಿ ವಶಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ಮತ್ತೆ ಮೂವರನ್ನು ವಶಕ್ಕೆ ಪಡೆದಿದೆ.